<p><strong>ತುಮಕೂರು:</strong> ಗ್ರೇಟರ್ ನೋಯ್ಡಾ ನಂತರ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆ ವೇಗವಾಗಿ ಸಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ಬೆಂಗಳೂರು ವಲಯದ ವ್ಯವಹಾರ ಅಭಿವೃದ್ಧಿ ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ ಸುಮಿತ್ಕುಮಾರ್ ಮಿಶ್ರಾ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಬ್ಯಾಂಕ್ ಆಫ್ ಬರೋಡ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ವಲಯದಿಂದ ಆಯೋಜಿಸಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು ದೇಶದ ಪ್ರಗತಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿವೆ. ಹಾಗಾಗಿ ಈ ವಲಯದ ಉದ್ಯಮ ಪ್ರಗತಿಗೆ ಬ್ಯಾಂಕ್ ಉತ್ತೇಜನ ನೀಡುತ್ತಿದೆ. ಸ್ಥಳೀಯ ಆದ್ಯತೆ ಆಧರಿಸಿ ಯುವಜನರಿಗೆ ಅಗತ್ಯ ತರಬೇತಿ ಜತೆಗೆ ಉದ್ದಿಮೆ ತೆರೆಯಲು ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದರು.</p>.<p>ಬೆಂಗಳೂರು ವಿಭಾಗದ ಎಜಿಎಂ ರವಿ ಪಾಠಕ್, ‘ಆರೋಗ್ಯ ಧಾಮ, ಸಪ್ಲೆಚೈನ್ ಫೈನಾನ್ಸ್, ಆಸ್ತಿ ಖರೀದಿ, ಶಿಕ್ಷಣ, ನಿರ್ಮಾಣ ಕ್ಷೇತ್ರ, ಮಹಿಳಾ ಸ್ವಾವಲಂಬನೆ ಸೇರಿದಂತೆ ಇನ್ನಿತರ ವಿಭಾಗಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ತುಮಕೂರು ಶಾಖೆ ವ್ಯವಸ್ಥಾಪಕ ಎಂ.ಎಸ್.ಆರ್.ರಾವ್, ಹಿರಿಯ ವ್ಯವಸ್ಥಾಪಕ ಪವನ್ ದೇಶಪಾಂಡೆ, ಸಿಎಎಸ್ಎ ಮಾರುಕಟ್ಟೆ ಅಧಿಕಾರಿ ಎ.ಕೊದಂಡರಾಮು ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಗ್ರೇಟರ್ ನೋಯ್ಡಾ ನಂತರ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆ ವೇಗವಾಗಿ ಸಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ಬೆಂಗಳೂರು ವಲಯದ ವ್ಯವಹಾರ ಅಭಿವೃದ್ಧಿ ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ ಸುಮಿತ್ಕುಮಾರ್ ಮಿಶ್ರಾ ಹೇಳಿದರು.</p>.<p>ನಗರದಲ್ಲಿ ಶುಕ್ರವಾರ ಬ್ಯಾಂಕ್ ಆಫ್ ಬರೋಡ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ವಲಯದಿಂದ ಆಯೋಜಿಸಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು ದೇಶದ ಪ್ರಗತಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿವೆ. ಹಾಗಾಗಿ ಈ ವಲಯದ ಉದ್ಯಮ ಪ್ರಗತಿಗೆ ಬ್ಯಾಂಕ್ ಉತ್ತೇಜನ ನೀಡುತ್ತಿದೆ. ಸ್ಥಳೀಯ ಆದ್ಯತೆ ಆಧರಿಸಿ ಯುವಜನರಿಗೆ ಅಗತ್ಯ ತರಬೇತಿ ಜತೆಗೆ ಉದ್ದಿಮೆ ತೆರೆಯಲು ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದರು.</p>.<p>ಬೆಂಗಳೂರು ವಿಭಾಗದ ಎಜಿಎಂ ರವಿ ಪಾಠಕ್, ‘ಆರೋಗ್ಯ ಧಾಮ, ಸಪ್ಲೆಚೈನ್ ಫೈನಾನ್ಸ್, ಆಸ್ತಿ ಖರೀದಿ, ಶಿಕ್ಷಣ, ನಿರ್ಮಾಣ ಕ್ಷೇತ್ರ, ಮಹಿಳಾ ಸ್ವಾವಲಂಬನೆ ಸೇರಿದಂತೆ ಇನ್ನಿತರ ವಿಭಾಗಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ತುಮಕೂರು ಶಾಖೆ ವ್ಯವಸ್ಥಾಪಕ ಎಂ.ಎಸ್.ಆರ್.ರಾವ್, ಹಿರಿಯ ವ್ಯವಸ್ಥಾಪಕ ಪವನ್ ದೇಶಪಾಂಡೆ, ಸಿಎಎಸ್ಎ ಮಾರುಕಟ್ಟೆ ಅಧಿಕಾರಿ ಎ.ಕೊದಂಡರಾಮು ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>