<p><strong>ತುಮಕೂರು: </strong>ರಾಜ್ಯ ಸರ್ಕಾರದ ನಿರ್ಧಾರದಂತೆ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) 95,000 ಲೀಟರ್ ಹಾಲನ್ನು ಬಡವರು, ಕೊಳೆಗೇರಿ ನಿವಾಸಿಗಳ ಮನೆಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ.</p>.<p>ತುಮುಲ್ನಲ್ಲಿ ಒಂದು ಲೀಟರ್ ಹಾಲಿನ ವಿಶೇಷ ಪ್ಯಾಕೆಟ್ಗಳು ತಯಾರಾಗಲಿವೆ. ಅವುಗಳಲ್ಲಿ 70 ಸಾವಿರ ಲೀಟರ್ ಹಾಲನ್ನು ಬೆಂಗಳೂರಿಗೆ, ಉಳಿದ 25 ಸಾವಿರ ಲೀಟರ್ ಹಾಲನ್ನು ತುಮಕೂರಿನಲ್ಲಿನ ಬಡವರಿಗೆ ಏಪ್ರಿಲ್ 3ರಿಂದ ಹಂಚಲು ನಿರ್ಧರಿಸಲಾಗಿದೆ. ಫಲಾನುಭವಿಗಳನ್ನು ಸ್ಥಳೀಯಾಡಳಿತ ಗುರುತಿಸಲಿದೆ. ಆ ಪ್ರದೇಶದವರೆಗೆ ತುಮುಲ್ ಹಾಲು ಸರಬರಾಜು ಮಾಡಲಿದೆ.</p>.<p>ಲಾಕ್ಡೌನ್ನಿಂದ ಹಾಲು ಉತ್ಪಾದಕರ ಆದಾಯ ಕುಸಿಯಬಾರದು, ಬಡವರಿಗೂಪೌಷ್ಟಿಕಾಂಶ ಭರಿತ ಆಹಾರ ಪದಾರ್ಥ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಉಚಿತವಾಗಿ ಹಾಲು ವಿತರಣೆಗೆ ಮುಂದಾಗಿದೆ.</p>.<p>ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಸಹಕಾರದೊಂದಿಗೆ 7.5 ಲಕ್ಷ ಲೀಟರ್ ಹಾಲನ್ನು ಉತ್ಪಾದಕರ ಸಂಘಗಳ ಒಕ್ಕೂಟದ ಮೂಲಕ ಖರೀದಿಸಿ ನಿತ್ಯ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ 95,000 ಲೀಟರ್ ಹಾಲು ಪೂರೈಸುವಂತೆ ಕೆಎಂಎಫ್ ಸಂಸ್ಥೆಯು ತುಮುಲ್ಗೆ ತಿಳಿಸಿದೆ.</p>.<p>ಉಚಿತ ಹಾಲನ್ನು ಲಾಕ್ಡೌನ್ನಿಂದ ಸಂತ್ರಸ್ತರಾದವರಿಗೆ ಮಾತ್ರ ಕೊಡಬೇಕಿದೆ. ಹಾಗಾಗಿ ಹಾಲಿನ ವಿಶೇಷ ಪ್ಯಾಕೆಟ್ ಮೇಲೆ ‘ಮಾರಾಟಕ್ಕಾಗಿ ಅಲ್ಲ’ ಎಂಬ ಬರಹ ಇರಲಿದೆ<br />ಸಿ.ವಿ.ಮಹಾಲಿಂಗಯ್ಯ, ತುಮುಲ್ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ರಾಜ್ಯ ಸರ್ಕಾರದ ನಿರ್ಧಾರದಂತೆ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) 95,000 ಲೀಟರ್ ಹಾಲನ್ನು ಬಡವರು, ಕೊಳೆಗೇರಿ ನಿವಾಸಿಗಳ ಮನೆಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ.</p>.<p>ತುಮುಲ್ನಲ್ಲಿ ಒಂದು ಲೀಟರ್ ಹಾಲಿನ ವಿಶೇಷ ಪ್ಯಾಕೆಟ್ಗಳು ತಯಾರಾಗಲಿವೆ. ಅವುಗಳಲ್ಲಿ 70 ಸಾವಿರ ಲೀಟರ್ ಹಾಲನ್ನು ಬೆಂಗಳೂರಿಗೆ, ಉಳಿದ 25 ಸಾವಿರ ಲೀಟರ್ ಹಾಲನ್ನು ತುಮಕೂರಿನಲ್ಲಿನ ಬಡವರಿಗೆ ಏಪ್ರಿಲ್ 3ರಿಂದ ಹಂಚಲು ನಿರ್ಧರಿಸಲಾಗಿದೆ. ಫಲಾನುಭವಿಗಳನ್ನು ಸ್ಥಳೀಯಾಡಳಿತ ಗುರುತಿಸಲಿದೆ. ಆ ಪ್ರದೇಶದವರೆಗೆ ತುಮುಲ್ ಹಾಲು ಸರಬರಾಜು ಮಾಡಲಿದೆ.</p>.<p>ಲಾಕ್ಡೌನ್ನಿಂದ ಹಾಲು ಉತ್ಪಾದಕರ ಆದಾಯ ಕುಸಿಯಬಾರದು, ಬಡವರಿಗೂಪೌಷ್ಟಿಕಾಂಶ ಭರಿತ ಆಹಾರ ಪದಾರ್ಥ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಉಚಿತವಾಗಿ ಹಾಲು ವಿತರಣೆಗೆ ಮುಂದಾಗಿದೆ.</p>.<p>ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಸಹಕಾರದೊಂದಿಗೆ 7.5 ಲಕ್ಷ ಲೀಟರ್ ಹಾಲನ್ನು ಉತ್ಪಾದಕರ ಸಂಘಗಳ ಒಕ್ಕೂಟದ ಮೂಲಕ ಖರೀದಿಸಿ ನಿತ್ಯ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ 95,000 ಲೀಟರ್ ಹಾಲು ಪೂರೈಸುವಂತೆ ಕೆಎಂಎಫ್ ಸಂಸ್ಥೆಯು ತುಮುಲ್ಗೆ ತಿಳಿಸಿದೆ.</p>.<p>ಉಚಿತ ಹಾಲನ್ನು ಲಾಕ್ಡೌನ್ನಿಂದ ಸಂತ್ರಸ್ತರಾದವರಿಗೆ ಮಾತ್ರ ಕೊಡಬೇಕಿದೆ. ಹಾಗಾಗಿ ಹಾಲಿನ ವಿಶೇಷ ಪ್ಯಾಕೆಟ್ ಮೇಲೆ ‘ಮಾರಾಟಕ್ಕಾಗಿ ಅಲ್ಲ’ ಎಂಬ ಬರಹ ಇರಲಿದೆ<br />ಸಿ.ವಿ.ಮಹಾಲಿಂಗಯ್ಯ, ತುಮುಲ್ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>