ಬ್ರಹ್ಮಾವರ: ತಾಲ್ಲೂಕಿನ ಆರೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವೈಕುಂಠ ಚತುರ್ದಶಿ ದಿನವಾದ ಸೋಮವಾರ ಪ್ರಥಮ ವಿಶ್ವರೂಪ ದರ್ಶನ ವೈಭವದಿಂದ ನಡೆಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ್ ಭಟ್, ಆರೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರುರಾಜ್ ರಾವ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ನಿವೃತ್ತ ಶಿಕ್ಷಕ ಎ.ಎಂಮೋಹನ್ ರಾವ್ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಅರ್ಚಕ ರಾದ ನಾರಾಯಣ ಭಟ್, ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಮರ್ಡಿ, ಕುರುಡುಂಜೆ ನರಸಿಂಹ ಭಟ್, ಗಣಪತಿ ಭಟ್ ಅವರಿಂದ ಪಾರಾಯಣ ನಡೆಯಿತು.
ಲಕ್ಷ್ಮೀನಾರಾಯಣ ಭಟ್, ದೇವಳದ ಸಿಬ್ಬಂದಿ, ಗ್ರಾಮ ಪಂಚಾ ಯಿತಿ ಅಧ್ಯಕ್ಷರು, ಸದಸ್ಯರು, ಯುವಕ ಮಂಡಲದ ಸದಸ್ಯರು, ಮಹಿಳಾ ಮಂಡಲದ ಸದಸ್ಯರು, ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ಭಕ್ತರು ಇದ್ದರು. ಸಾಲಿಗ್ರಾಮ ಗುರುನರಸಿಂಹ ದೇವಳದ ಆಡಳಿತ ಮಂಡಳಿ ಮತ್ತು ರಾಜು ಕಾರ್ಕಡ ಸಹಕರಿಸಿದರು.