<p><strong>ಉಡುಪಿ:</strong> ಬೆಳಕಿನ ಹಬ್ಬ ದೀಪಾವಳಿ ಪೂರ್ವಭಾವಿಯಾಗಿ ಭಾನುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ತರಕಾರಿ, ಹಣ್ಣು ಹಂಪಲು, ಬಟ್ಟೆ, ಸಿಹಿತಿಂಡಿಗಳ ಅಂಗಡಿಯಗಳಲ್ಲಿ ಗ್ರಾಹಕರು ಕಿಕ್ಕಿರಿತು ತುಂಬಿದ್ದರು.</p>.<p>ರಥಬೀದಿ, ಸರ್ವೀಸ್ ಬಸ್ ನಿಲ್ದಾಣದ ಬಳಿ, ಬ್ರಹ್ಮಗಿರಿ, ಮಣಿಪಾಲ ಮೊದಲಾದ ಕಡೆಗಳಲ್ಲಿ ರಸ್ತೆ ಬದಿ ಹೂವಿನ ಮಾರಾಟ ಗರಿಗೆದರಿತ್ತು.</p>.<p>ಹಾಸನ, ಮಂಡ್ಯ, ಹಾವೇರಿ ಮೊದಲಾದೆಡೆಳ ಹೂವಿನ ವ್ಯಾಪಾರಿಗಳು ಈ ಬಾರಿಯೂ ಹೂವು ಮಾರಾಟಕ್ಕೆ ಬಂದಿದ್ದರು. ಪ್ರತಿ ಹಬ್ಬಗಳ ಸಂದರ್ಭಗಳಲ್ಲೂ ಇವರು ನಗರದಲ್ಲಿ ಹೂವಿನ ಮಾರಾಟ ನಡೆಸುತ್ತಾರೆ.</p>.<p>ಚೆಂಡು ಹೂವು, ಸೇವಂತಿಗೆ, ಕಾಕಡ ಮೊದಲಾದವುಗಳ ದರ ಮಾರಿಗೆ ₹100 ಇತ್ತು. ಈ ಬಾರಿ ಹೂವು ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದ ಕಾರಣ ಹೂವಿನ ಬೆಳೆನಷ್ಟವಾಗಿತ್ತು ಎಂದು ಬಹುತೇಕ ವ್ಯಾಪಾರಿಗಳು ಅಳಲು ತೋಡಿಕೊಂಡರು.</p>.<p>ಬಟ್ಟೆ ಅಂಗಡಿಗಳಲ್ಲೂ ಹಬ್ಬದ ಖರೀದಿ ಜೋರಾಗಿತ್ತು. ರಥಬೀದಿ ಮೊದಲಾದೆಡೆ ಗ್ರಾಹಕರು ಪೂಜಾ ಸಾಮಗ್ರಿಗಳನ್ನೂ ಖರೀದಿಸಿದರು.</p>.<p><strong>ಹಣತೆಗೆ ಹೆಚ್ಚಿದ ಬೇಡಿಕೆ:</strong> ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆವೆ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಬೇಡಿಕೆ ಕುದುರಿದೆ. ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಹಣತೆ ಮಾರಾಟ ಜೋರಾಗಿತ್ತು.</p>.<p>₹5 ರಿಂದ ಹಿಡಿದು ₹50ರ ವರೆಗಿನ ವಿವಿಧ ಗಾತ್ರದ ಹಣತೆಗಳನ್ನು ಮಾರಾಟಕ್ಕಿಡಲಾಗಿತ್ತು. ಪಟಾಕಿ ಅಂಗಡಿಗಳಲ್ಲಿ ವಿವಿಧ ಬಗೆಯ ಕ್ಯಾಂಡಲ್ಗಳು ಮಾರಾಟಕ್ಕಿದ್ದರೂ ಹಣತೆ ಖರೀದಿಸುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ.</p>.<p>ಫ್ಯಾನ್ಸಿ ಅಂಗಡಿಗಳಲ್ಲಿ ವಿವಿಧ ಗಾತ್ರದ, ಬಣ್ಣ ಬಣ್ಣದ ಆಕರ್ಷಕ ಗೂಡುದೀಪಗಳನ್ನು ಮಾರಾಟಕ್ಕಿರಿಸಿದ್ದು, ಖರೀದಿ ಭರಾಟೆ ಜೋರಾಗಿತ್ತು. ಮಣಿಪಾಲ, ಬೀಡಿನಗುಡ್ಡೆ ಮೊದಲಾದೆಡೆ ಪಟಾಕಿ ಅಂಗಡಿಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ದರು.</p>.<h2>ಮತ್ತೆ ಗಗನಕ್ಕೇರಿದ ತರಕಾರಿ ದರ </h2><p>ನವರಾತ್ರಿ ಹಬ್ಬದ ನಂತರ ತುಸು ಇಳಿಕೆಯಾಗಿದ್ದ ತರಕಾರಿ ಹಣ್ಣಿನ ದರ ದೀಪಾವಳಿ ಹಬ್ಬದ ವೇಳೆ ಮತ್ತೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಬರೆ ಎಳೆದಿದೆ. ಮಂಗಳೂರು ಸೌತೆಕಾಯಿ ಕೆ.ಜಿ.ಗೆ ₹35 ಬೆಂಡೆಕಾಯಿ ಕೆ.ಜಿ.ಗೆ ₹48 ಬೀನ್ಸ್ ದರ ಕೆ.ಜಿ.ಗೆ ₹70 ಆಗಿದ್ದು ಬಹುತೇಕ ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ಹೆಚ್ಚಾಗಿದೆ. ಏಲಕ್ಕಿ ಬಾಳೆ ಹಣ್ಣಿನ ದರವು ಕೆ.ಜಿ.ಗೆ ₹ 100ರ ಗಡಿ ದಾಟಿದೆ . ಪೂಜೆಯ ಸಂದರ್ಭದಲ್ಲೂ ಏಲಕ್ಕಿ ಬಾಳೆ ಹಣ್ಣನ್ನು ಬಳಸುವ ಕಾರಣ ಬೇಡಿಕೆಯೂ ಹೆಚ್ಚಾಗಿದೆ.</p>.<h2>‘ಜ್ಞಾನ ದೀಪವೂ ಬೆಳಗಲಿ’ </h2><p>‘ಜೀವನದಲ್ಲಿ ಹೊಸ ಸಂಚಲನ ಮೂಡಬೇಕಾದರೆ ಹಬ್ಬಗಳು ಅತ್ಯಗತ್ಯ. ಮತ್ತೆ ಹೊಸ ಆಶಾಕಿರಣದೊಂದಿಗೆ ಜಗತ್ತಿಗೆ ಬೆಳಕನ್ನು ಕೊಡುವ ದೀಪಾವಳಿ ಹಬ್ಬ ಬಂದಿದೆ. ಈ ಹಬ್ಬವನ್ನು ವ್ಯಾಪಕವಾಗಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕೇವಲ ದೀಪವಷ್ಟೇ ಬೆಳಗಿದರೆ ಸಾಲದು ನಮ್ಮೆಲ್ಲರ ಜ್ಞಾನ ದೀಪವೂ ಬೆಳಗಬೇಕು. ಈ ಕಾರಣಕ್ಕೆ ಆಧ್ಯಾತ್ಮಿಕ ಬೆಳಕನ್ನು ನೀಡುವ ಭಗವದ್ಗೀತೆಯನ್ನು ನಾವು ಹೃದಯದಲ್ಲಿರಿಸಬೇಕು. ಗೀತೆಯ ಬೆಳಕು ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತಿದೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ದೀಪಾವಳಿ ಸಂದೇಶದಲ್ಲಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಬೆಳಕಿನ ಹಬ್ಬ ದೀಪಾವಳಿ ಪೂರ್ವಭಾವಿಯಾಗಿ ಭಾನುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ತರಕಾರಿ, ಹಣ್ಣು ಹಂಪಲು, ಬಟ್ಟೆ, ಸಿಹಿತಿಂಡಿಗಳ ಅಂಗಡಿಯಗಳಲ್ಲಿ ಗ್ರಾಹಕರು ಕಿಕ್ಕಿರಿತು ತುಂಬಿದ್ದರು.</p>.<p>ರಥಬೀದಿ, ಸರ್ವೀಸ್ ಬಸ್ ನಿಲ್ದಾಣದ ಬಳಿ, ಬ್ರಹ್ಮಗಿರಿ, ಮಣಿಪಾಲ ಮೊದಲಾದ ಕಡೆಗಳಲ್ಲಿ ರಸ್ತೆ ಬದಿ ಹೂವಿನ ಮಾರಾಟ ಗರಿಗೆದರಿತ್ತು.</p>.<p>ಹಾಸನ, ಮಂಡ್ಯ, ಹಾವೇರಿ ಮೊದಲಾದೆಡೆಳ ಹೂವಿನ ವ್ಯಾಪಾರಿಗಳು ಈ ಬಾರಿಯೂ ಹೂವು ಮಾರಾಟಕ್ಕೆ ಬಂದಿದ್ದರು. ಪ್ರತಿ ಹಬ್ಬಗಳ ಸಂದರ್ಭಗಳಲ್ಲೂ ಇವರು ನಗರದಲ್ಲಿ ಹೂವಿನ ಮಾರಾಟ ನಡೆಸುತ್ತಾರೆ.</p>.<p>ಚೆಂಡು ಹೂವು, ಸೇವಂತಿಗೆ, ಕಾಕಡ ಮೊದಲಾದವುಗಳ ದರ ಮಾರಿಗೆ ₹100 ಇತ್ತು. ಈ ಬಾರಿ ಹೂವು ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದ ಕಾರಣ ಹೂವಿನ ಬೆಳೆನಷ್ಟವಾಗಿತ್ತು ಎಂದು ಬಹುತೇಕ ವ್ಯಾಪಾರಿಗಳು ಅಳಲು ತೋಡಿಕೊಂಡರು.</p>.<p>ಬಟ್ಟೆ ಅಂಗಡಿಗಳಲ್ಲೂ ಹಬ್ಬದ ಖರೀದಿ ಜೋರಾಗಿತ್ತು. ರಥಬೀದಿ ಮೊದಲಾದೆಡೆ ಗ್ರಾಹಕರು ಪೂಜಾ ಸಾಮಗ್ರಿಗಳನ್ನೂ ಖರೀದಿಸಿದರು.</p>.<p><strong>ಹಣತೆಗೆ ಹೆಚ್ಚಿದ ಬೇಡಿಕೆ:</strong> ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆವೆ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಬೇಡಿಕೆ ಕುದುರಿದೆ. ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಹಣತೆ ಮಾರಾಟ ಜೋರಾಗಿತ್ತು.</p>.<p>₹5 ರಿಂದ ಹಿಡಿದು ₹50ರ ವರೆಗಿನ ವಿವಿಧ ಗಾತ್ರದ ಹಣತೆಗಳನ್ನು ಮಾರಾಟಕ್ಕಿಡಲಾಗಿತ್ತು. ಪಟಾಕಿ ಅಂಗಡಿಗಳಲ್ಲಿ ವಿವಿಧ ಬಗೆಯ ಕ್ಯಾಂಡಲ್ಗಳು ಮಾರಾಟಕ್ಕಿದ್ದರೂ ಹಣತೆ ಖರೀದಿಸುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ.</p>.<p>ಫ್ಯಾನ್ಸಿ ಅಂಗಡಿಗಳಲ್ಲಿ ವಿವಿಧ ಗಾತ್ರದ, ಬಣ್ಣ ಬಣ್ಣದ ಆಕರ್ಷಕ ಗೂಡುದೀಪಗಳನ್ನು ಮಾರಾಟಕ್ಕಿರಿಸಿದ್ದು, ಖರೀದಿ ಭರಾಟೆ ಜೋರಾಗಿತ್ತು. ಮಣಿಪಾಲ, ಬೀಡಿನಗುಡ್ಡೆ ಮೊದಲಾದೆಡೆ ಪಟಾಕಿ ಅಂಗಡಿಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ದರು.</p>.<h2>ಮತ್ತೆ ಗಗನಕ್ಕೇರಿದ ತರಕಾರಿ ದರ </h2><p>ನವರಾತ್ರಿ ಹಬ್ಬದ ನಂತರ ತುಸು ಇಳಿಕೆಯಾಗಿದ್ದ ತರಕಾರಿ ಹಣ್ಣಿನ ದರ ದೀಪಾವಳಿ ಹಬ್ಬದ ವೇಳೆ ಮತ್ತೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಬರೆ ಎಳೆದಿದೆ. ಮಂಗಳೂರು ಸೌತೆಕಾಯಿ ಕೆ.ಜಿ.ಗೆ ₹35 ಬೆಂಡೆಕಾಯಿ ಕೆ.ಜಿ.ಗೆ ₹48 ಬೀನ್ಸ್ ದರ ಕೆ.ಜಿ.ಗೆ ₹70 ಆಗಿದ್ದು ಬಹುತೇಕ ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ಹೆಚ್ಚಾಗಿದೆ. ಏಲಕ್ಕಿ ಬಾಳೆ ಹಣ್ಣಿನ ದರವು ಕೆ.ಜಿ.ಗೆ ₹ 100ರ ಗಡಿ ದಾಟಿದೆ . ಪೂಜೆಯ ಸಂದರ್ಭದಲ್ಲೂ ಏಲಕ್ಕಿ ಬಾಳೆ ಹಣ್ಣನ್ನು ಬಳಸುವ ಕಾರಣ ಬೇಡಿಕೆಯೂ ಹೆಚ್ಚಾಗಿದೆ.</p>.<h2>‘ಜ್ಞಾನ ದೀಪವೂ ಬೆಳಗಲಿ’ </h2><p>‘ಜೀವನದಲ್ಲಿ ಹೊಸ ಸಂಚಲನ ಮೂಡಬೇಕಾದರೆ ಹಬ್ಬಗಳು ಅತ್ಯಗತ್ಯ. ಮತ್ತೆ ಹೊಸ ಆಶಾಕಿರಣದೊಂದಿಗೆ ಜಗತ್ತಿಗೆ ಬೆಳಕನ್ನು ಕೊಡುವ ದೀಪಾವಳಿ ಹಬ್ಬ ಬಂದಿದೆ. ಈ ಹಬ್ಬವನ್ನು ವ್ಯಾಪಕವಾಗಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕೇವಲ ದೀಪವಷ್ಟೇ ಬೆಳಗಿದರೆ ಸಾಲದು ನಮ್ಮೆಲ್ಲರ ಜ್ಞಾನ ದೀಪವೂ ಬೆಳಗಬೇಕು. ಈ ಕಾರಣಕ್ಕೆ ಆಧ್ಯಾತ್ಮಿಕ ಬೆಳಕನ್ನು ನೀಡುವ ಭಗವದ್ಗೀತೆಯನ್ನು ನಾವು ಹೃದಯದಲ್ಲಿರಿಸಬೇಕು. ಗೀತೆಯ ಬೆಳಕು ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತಿದೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ದೀಪಾವಳಿ ಸಂದೇಶದಲ್ಲಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>