ಉತ್ತರ ಕನ್ನಡದ ಸಮುದ್ರ ತೀರದಲ್ಲಿ ಎರಡು ತಿಂಗಳಿನಿಂದ ಹಲವು ಕಡಲಾಮೆಗಳು ಹಾಗೂ ತಿಮಿಂಗಿಲಗಳ ಕಳೇಬರಗಳು ಪತ್ತೆಯಾಗುತ್ತಿವೆ. ಮೀನುಗಾರರ ಬಲೆಗಳಿಗೆ ಸಿಲುಕಿ ಹೊರ ಬರಲಾರದೇ ಸಾಯುತ್ತಿವೆಯೇ ಅಥವಾ ಸಮುದ್ರದ ನೀರಿನಲ್ಲಿ ವ್ಯತ್ಯಾಸವಾಗಿದೆಯೇ ಎಂದು ಅಧ್ಯಯನ ಮಾಡಬೇಕು. ಜಲಚರಗಳ ಅಸಹಜ ಸಾವನ್ನು ನಿಯಂತ್ರಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.