ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಯಾದ ಬಸ್ ಕೊರತೆ

ಉಳವಿ, ಕಾಳಸಾಯಿ ಗ್ರಾಮಗಳ ವಿದ್ಯಾರ್ಥಿಗಳ ಪರದಾಟ: ಹಾಜರಾತಿ ಕಡಿಮೆಯಾಗುವ ಆತಂಕ
Last Updated 3 ಜುಲೈ 2019, 19:30 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ ಉಳವಿ, ಕಾಳಸಾಯಿ ಗ್ರಾಮಗಳ ಸುತ್ತಮುತ್ತಲಿನಊರುಗಳಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ.ಆದ್ದರಿಂದ ಸೂಕ್ತಸಾರಿಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಚಂದ್ರಾಳಿ, ಅಂಬೋಳಿ, ಕಾಳಸಾಯ ಮಾತ್ಕರ್ಣಿ, ಹಲಕುಂಬಿ, ಮೈನೋಳ, ಕೋಂದರ, ಆಮಶೇತ, ಆಂಬಟಗಾಳಿ ಹಾಗೂ ತಾಡಸೇತ ಗ್ರಾಮಗಳಲ್ಲಿ84 ವಿದ್ಯಾರ್ಥಿಗಳಿದ್ದಾರೆ. ಎಲ್ಲರೂಕುಂಬಾರವಾಡಾ ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರುತ್ತಾರೆ.

ಇವರೆಲ್ಲರೂಬೆಳಿಗ್ಗೆ ಕುಂಬಾರವಾಡಾ ಶಾಲಾ, ಕಾಲೇಜಿಗೆ ಬರಲು ಉಳವಿಯಿಂದ ಬೆಳಿಗ್ಗೆ ಏಳುಗಂಟೆಗೆ ಹೊರಡುವ ಇಚಲಕರಂಜಿ ಬಸ್‌ಗೆ ಬರಬೇಕಾಗಿದೆ.ಅದು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ ಅನಿವಾರ್ಯವಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಅದೇ ಬಸ್‌ಗೆ ಹತ್ತಿಸಿಕೊಳ್ಳಲಾಗುತ್ತಿದೆ.ಒಂದೊಮ್ಮೆಈ ಬಸ್ ತಪ್ಪಿದರೆಅಂದು ವಿದ್ಯಾರ್ಥಿಗಳು ತರಗತಿಯಿಂದ ದೂರ ಉಳಿಯಬೇಕಾಗುತ್ತದೆ. ಹೀಗಾಗಿ ಹಲವು ವಿದ್ಯಾರ್ಥಿಗಳಿಗೆಹಾಜರಾತಿಯ ಕೊರತೆಯಾಗಿ ಸಮಸ್ಯೆಯಾಗಿದ್ದೂ ಇದೆ ಎನ್ನುತ್ತಾರೆ ಉಪನ್ಯಾಸಕರೊಬ್ಬರು.

ಉಳವಿಯಿಂದಒಂಬತ್ತುಗಂಟೆಗೆ ಬರುವ ಬಸ್‌ಗೆಹಲವು ಕಡೆನಿಲುಗಡೆಯಿಲ್ಲ.ಉಳವಿ, ಕಾಳಸಾಯ ಭಾಗದ ವಿದ್ಯಾರ್ಥಿಗಳಿಗೆ ತರಗತಿ ಮುಗಿದ ಬಳಿಕ ಮನೆಗೆ ಹೋಗುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.ಜೊಯಿಡಾ, ಕುಂಬಾರವಾಡಾ ಮಾರ್ಗವಾಗಿ ಉಳವಿಗೆ ಹೋಗಲು ಮಧ್ಯಾಹ್ನ 12ಕ್ಕೆ ಬರುವ ಹುಬ್ಬಳ್ಳಿಬಸ್ ಒಂದೇ ಗತಿ. ಅದನ್ನು ಬಿಟ್ಟರೆ ದಾಂಡೇಲಿಯಿಂದ ಉಳವಿಗೆ ಹೋಗುವ ಬಸ್ ಬರುವುದು ಸಂಜೆ 5.30ಕ್ಕೆ. ಒಂದೊಂದು ದಿನ ಅದು ಸಂಜೆ 6ರ ನಂತರವೂಬರುತ್ತದೆ ಎನ್ನುವುದು ವಿದ್ಯಾರ್ಥಿಗಳ ಅಳಲು.

ಅಪಾಯದ ನಡಿಗೆ: ಸಾಮಾನ್ಯವಾಗಿ ಕುಂಬಾರವಾಡದ ಶಾಲಾ– ಕಾಲೇಜಿಗೆ ಬರುವ ಎಲ್ಲ ವಿದ್ಯಾರ್ಥಿಗಳು ಹಳ್ಳಿಯವರು. ಬಸ್‌ನಿಂದ ಇಳಿದು ಕನಿಷ್ಠವೆಂದರೂ2–4ಕಿ.ಮೀನಡೆದುಕೊಂಡು ಹೋಗಬೇಕಾಗುತ್ತದೆ. ಜೊತೆಗೆ ಕೆಲವು ಹಳ್ಳಿಗಳಿಗೆ ಹೋಗಲು ಸಮರ್ಪಕವಾದ ರಸ್ತೆಗಳಿಲ್ಲ. ಕಾಲುದಾರಿಗಳಲ್ಲಿ, ಸೇತುವೆಗಳಿಲ್ಲದ, ತುಂಬಿ ಹರಿಯುತ್ತಿರುವ ಹಳ್ಳಗಳ ಮೇಲೆ ಕಾಲುಸಂಕಗಳಲ್ಲಿ ಸಂಚರಿಸುತ್ತಾರೆ. ಬಸ್ ಸರಿಯಾದ ಸಮಯಕ್ಕೆಬಾರದಿದ್ದರೆ ವಿದ್ಯಾಥಿಗಳು ಮನೆಗೆ ಸೇರುವಾಗರಾತ್ರಿ ಎಂಟು ಗಂಟೆಯಾಗಿರುತ್ತದೆ.

ಕಾಡುಪ್ರಾಣಿಗಳ ಭಯ:ಈ ಭಾಗದಲ್ಲಿ ಕರಡಿ, ಹುಲಿ, ಚಿರತೆ, ಕಾಡುಕೋಣ ಹಾಗೂ ಆನೆಗಳ ಸಂಚಾರ ಸಾಮಾನ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪ್ರತಿದಿನ ಜೀವ ಭಯದಲ್ಲೇಕಾಡು ದಾರಿಯಲ್ಲಿ ಸಾಗಬೇಕು.ಈ ಗ್ರಾಮಗಳ ಹಿರಿಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಅನೇಕ ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ, ಸಾರಿಗೆ ಇಲಾಖೆಗೆಮನವಿ ನೀಡಿದ್ದಾರೆ. ಆಗಸೂಕ್ತ ಸಮಯಕ್ಕೆ ಬಸ್ ಸಂಚಾರ ಆರಂಭಿಸುವ ಬಗ್ಗೆಮೌಖಿಕವಾಗಿ ಭರವಸೆ ಸಿಗುತ್ತದೆ. ಆದರೆ, ಈವರೆಗೂ ಬಸ್ ವ್ಯವಸ್ಥೆ ಆಗಿಲ್ಲ ಎಂಬುದು ಈ ಭಾಗದ ಜನರ ಅಳಲಾಗಿದೆ.

‘ಸಮಸ್ಯೆ ಗಮನಕ್ಕೆ ಬರಲಿಲ್ಲ’:‘ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಸದ್ಯ ದಾಂಡೇಲಿಯಿಂದ ಕುಂಬಾರವಾಡಾಕ್ಕೆಸಂಜೆ 5.30ಕ್ಕೆ ಬರುವ ಬಸ್‌ನವೇಳೆ ಬದಲಾಯಿಸುವುದು ಕಷ್ಟ. ಅದೇ ಬಸ್ ಬೇರೆ ಊರುಗಳಿಗೂ ಹೋಗಿ ಬರುವುದರಿಂದ ಆ ಊರುಗಳ ವೇಳಾಪಟ್ಟಿಯಲ್ಲೂಬದಲಾವಣೆ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ದಾಂಡೇಲಿ ಡಿಪೊವ್ಯವಸ್ಥಾಪಕ.

ಸಂಜೆಯವರೆಗೂ ಅಂಗಡಿಯಲ್ಲೇ!:ಸಾಮಾನ್ಯವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತರಗತಿಗಳು ಮಧ್ಯಾಹ್ನ3.30ಕ್ಕೆ, ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳು ಸಂಜೆ 4ಕ್ಕೆ ಹಾಗೂ ಪ್ರೌಢಶಾಲೆಯ ತರಗತಿಗಳು ಸಂಜೆ 4.30ಕ್ಕೆ ಮುಗಿಯುತ್ತವೆ. ತರಗತಿಗಳು ಮುಗಿದ ಮೇಲೆ ಈ ಎಲ್ಲಾ ವಿದ್ಯಾರ್ಥಿಗಳು ಬಸ್ನಿಲ್ದಾಣಕ್ಕೆ ಬಂದು ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಓಡಾಡುತ್ತಿರುತ್ತಾರೆ. ಜೊತೆಗೆ ಅಲ್ಲಲ್ಲಿ ಗುಂಪುಕಟ್ಟಿ ಹರಟೆ ಹೊಡೆಯುತ್ತಿರುತ್ತಾರೆ. ಶನಿವಾರ ಶಾಲಾ ತರಗತಿಗಳು ಮಧ್ಯಾಹ್ನಒಂದುಗಂಟೆಗೆ ಮುಗಿದರೂ ವಿದ್ಯಾರ್ಥಿಗಳು ಸಂಜೆ 5.30ಕ್ಕೆ ಹೋಗುವ ಬಸ್‌ನಲ್ಲೇಮನೆಗೆ ಹೋಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT