ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಗ್ರಾಮಗಳಲ್ಲೂ ಶುರುವಾಯ್ತು ಕಸ ವಿಲೇವಾರಿ

ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ಪ್ಲಾಸ್ಟಿಕ್, ಗಾಜಿನ ತ್ಯಾಜ್ಯ ವಿಂಗಡಣೆ
Last Updated 5 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ ಆರಂಭವಾಗಿದೆ. ಹೆಗಡೆ ಗ್ರಾಮದ ರಸ್ತೆ ಬದಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ಶುಚಿಗೊಳಿಸಿ ಬೇರ್ಪಡಿಸಲಾಗುತ್ತಿದೆ. ಈ ಮೂಲಕ ಗ್ರಾಮಗಳಲ್ಲೂ ಸ್ವಚ್ಛತೆಯ ಹೊಸ ಮಾದರಿ ತೆರೆದುಕೊಂಡಿದೆ.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ ಅವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಪಟಗಾರ ನೇತೃತ್ವದಲ್ಲಿ ಶುಕ್ರವಾರ ನಸುಕಿನಲ್ಲೇ ಕಾರ್ಯಾಚರಣೆ ಮಾಡಲಾಗಿದೆ. ಊರಿನ ರಸ್ತೆ ಬದಿ,ರೈಲ್ವೆಕ್ರಾಸಿಂಗ್ ಮುಂತಾದೆಡೆ ಇದ್ದ ತ್ಯಾಜ್ಯಗಳನ್ನು ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ರಾಶಿ ಹಾಕಲಾಯಿತು.

ಗಾಜು ಹಾಗೂ ಪ್ಲಾಸ್ಟಿಕ್ ಬಾಟಲಿ, ಸಾರಾಯಿ ಪ್ಯಾಕೇಟ್, ಪ್ಲಾಸ್ಟಿಕ್ ಚೀಲ, ತಟ್ಟೆ, ಲೋಟ, ಸ್ಟ್ರಾ ಮುಂತಾದವುಗಳನ್ನು ತೊಳೆದು ಪ್ರತ್ಯೇಕಿಸಲಾಯಿತು. ಊರಿನಲ್ಲಿ ಹೊಸದಾಗಿ ಆರಂಭಿಸಿದ ಈ ಕೆಲಸವನ್ನು ಗ್ರಾಮಸ್ಥರು ವೀಕ್ಷಿಸಿದರೆ, ಕೆಲವರು ಬಂದು ಕೆಲಸದಲ್ಲಿಸಹಕರಿಸಿದರು.

‘ಗ್ರಾಮಸ್ಥರೂ ಈ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ಕೈ ಜೋಡಿಸುವ ವಿಶ್ವಾಸವಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಪಟಗಾರ ತಿಳಿಸಿದರು.

‘ನಿರಂತರವಾಗಿ ನಡೆಯಲಿದೆ’:‘ಹೆಗಡೆ ಗ್ರಾಮ ಪಂಚಾಯ್ತಿಗೆ ₹23 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ಘಟಕ ಮಂಜೂರಾಗಿದೆ. ಇನ್ನು ಮುಂದೆ ಕಸವನ್ನು ಪ್ರತ್ಯೇಕಿಸುವ ಕಾರ್ಯ ಗ್ರಾಮದಲ್ಲಿ ನಿರಂತರವಾಗಿ ನಡೆಯಲಿದೆ’ಎಂದುತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ.ನಾಯ್ಕ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಶುಚಿಯಾಗುವ ಕಾರ್ಯದಲ್ಲಿ ಗ್ರಾಮಸ್ಥರೂ ಕೈ ಜೋಡಿಸಿದರೆ ಶುಚಿ ಕಾರ್ಯ ಇನ್ನೂ ಸುಲಭ. ಗ್ರಾಮ ಪಂಚಾಯ್ತಿಯಿಂದ ಪ್ರತಿಮನೆಗೆ ಕಸದ ಡಬ್ಬಗಳನ್ನು ನೀಡಲಾಗುವುದು. ಪ್ರತ್ಯೇಕಿಸಿದಕಸವನ್ನು ಗೋಕರ್ಣ ಅಥವಾ ಕುಂದಾಪುರಕ್ಕೆ ಕಳಿಸಲಾಗುವುದು. ಇದು ಪಟ್ಟಣದ ಕಸ ವಿಲೇವಾರಿಗಿಂತ ಎಷ್ಟೋ ಸುಲಭ’ ಎಂದು ವಿವರಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವಾನಂದ ಪಟಗಾರ, ಪ್ರಭಾಕರ ಪಟಗಾರ, ಸದಾನಂದ ಪಟಗಾರ, ಹನುಮಂತ ಪಟಗಾರ, ನಾಗರಾಜ ನಾಯ್ಕ, ಊರಿನ ಅಮರನಾಥ ಭಟ್ಟ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ದೇವರಾಯ ನಾಯಕ, ಪಿಡಿಒ ಶಿವಾನಂದ ಜೋಶಿ, ಕಾರ್ಯದರ್ಶಿ ಮುರಳಿ ನಾಯ್ಕ, ಸಿಬ್ಬಂದಿ ನೀತು, ವಸಂತ, ನಾರಾಯಣಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT