<p><strong>ಕಾರವಾರ: </strong>ನಗರದ ಮಾರುಕಟ್ಟೆಯಲ್ಲಿ ಎರಡು ವಾರಗಳಿಂದ ಸ್ಥಿರವಾಗಿದ್ದ ದರವು ಈಗ ಇಳಿಮುಖಗೊಂಡಿದೆ. ಆವಕ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ ಎಂದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.</p>.<p>ಪ್ರತಿ ಕೆ.ಜಿ.ಗೆ₹ 40ರಲ್ಲಿ ಬಿಕರಿಯಾಗುತ್ತಿದ್ದ ಈರುಳ್ಳಿ₹ 10ರಷ್ಟು ಇಳಿಕೆ ಕಂಡು₹ 30ರ ದರದಲ್ಲಿ ವಹಿವಾಟು ಕಾಣುತ್ತಿದೆ. ಟೊಮೆಟೊ ₹ 20ರಲ್ಲೇ ಸ್ಥಿರವಾಗಿದ್ದರೆ, ಕ್ಯಾರೆಟ್₹ 70 ರಿಂದ₹ 50ಕ್ಕೆ ಇಳಿಕೆಯಾಗಿದೆ. ಹೂಕೋಸು ₹ 30, ಕ್ಯಾಬೇಜ್₹ 20, ಆಲೂಗಡ್ಡೆ₹ 30ರ ದರ ಹೊಂದಿವೆ.₹ 50ರಲ್ಲಿ ಮಾರಾಟವಾಗುತ್ತಿದ್ದ ಬೀನ್ಸ್₹ 10ರಷ್ಟು ಇಳಿಕೆ ಕಂಡಿದೆ.ಕ್ಯಾಪ್ಸಿಕಂ ₹ 50, ಮೆಣಸಿನಕಾಯಿ ₹ 50, ಬೀಟ್ರೂಟ್₹ 40, ಬೆಂಡೆಕಾಯಿ₹ 40 ಬೆಲೆಯಲ್ಲಿ ಬಿಕರಿಯಾಗುತ್ತಿದೆ.</p>.<p>ಹಿಂದಿನ ವಾರ ಪಾಮ್ ಆಯಿಲ್ ಪ್ರತಿ ಲೀಟರ್ಗೆ₹ 100ರ ಬೆಲೆ ಹೊಂದಿತ್ತು. ಸದ್ಯ ಗಮನಾರ್ಹ ಇಳಿಕೆ ಕಂಡಿದ್ದು₹ 90ರಲ್ಲಿ ಗ್ರಾಹಕ ಖರೀದಿಸುತ್ತಿದ್ದಾನೆ. ಹಸಿರು ಬಟಾಣಿಗೆ ₹ 160, ಬ್ಯಾಡಗಿ ಮೆಣಸು ಪ್ರತಿ ಕೆ.ಜಿ.ಗೆ ₹ 220 ಹಾಗೂ ಉತ್ತಮ ಗುಣಮಟ್ಟದ್ದು ₹ 240ರ ದರ ಹೊಂದಿದೆ. ಸ್ವಸ್ತಿಕ್ ಅಕ್ಕಿ 25 ಕೆ.ಜಿ.ಯ ಚೀಲಕ್ಕೆ ₹ 900,ಹಳೆಅಕ್ಕಿಗೆ ₹ 1,000 ಇದೆ. ಜೋಳದ ಬೆಲೆಯಲ್ಲಿಯೂ₹ 10ರಷ್ಟು ಇಳಿಕೆಯಾಗಿದ್ದು ಪ್ರತಿ ಕೆ.ಜಿ.ಗೆ₹ 38 ಇದೆ.</p>.<p>ಹಸಿರು ದ್ರಾಕ್ಷಿಯು ದರದಲ್ಲಿ ಶಿವರಾತ್ರಿ ಸಮಯದಲ್ಲಿ ₹ 120ಕ್ಕೇರಿತ್ತು. ಸದ್ಯ ಅರ್ಧದಷ್ಟು ಇಳಿಕೆಗೊಂಡು₹ 70ರಲ್ಲಿ ಬಿಕರಿಯಾಗುತ್ತಿದೆ.ಕಪ್ಪು ದ್ರಾಕ್ಷಿಯ ದರದಲ್ಲೂ ಭಾರಿ ಇಳಿಕೆಯಾಗಿದೆ. ಪ್ರತಿ ಕೆ.ಜಿ.ಗೆ ₹ 180 ಇದ್ದ ದರವು ಈಗ₹ 120ಇದೆ. ಮೂಸುಂಬಿ₹ 70, ದಾಳಿಂಬೆ₹ 120, ಸಪೋಟಾ₹ 100ರಲ್ಲಿ ಗ್ರಾಹಕ ಕೊಂಡುಕೊಳ್ಳುತ್ತಿದ್ದಾನೆ. ಇರಾನಿ ಸೇಬು ₹ 200ರಿಂದ₹ 160ಕ್ಕೆ ಇಳಿಕೆ ಕಂಡಿದೆ.</p>.<p>ಸುವರ್ಣಗಡ್ಡೆ ಒಂದಕ್ಕೆ ₹ 200ರ ದರವಿದೆ. ದೊಡ್ಡ ಗಾತ್ರದ ಮಾವಿನಕಾಯಿ ₹ 100ಕ್ಕೆ ನಾಲ್ಕು, ಮಂಡ್ಯದಿಂದ ಆವಕವಾಗುವ ಬೆಲ್ಲ ₹ 48, ಮಹಾಲಿಂಗಪುರದ ಬೆಲ್ಲ ₹ 50, ಜೋನಿಬೆಲ್ಲ ₹ 80, ಜೇನುತುಪ್ಪ ₹ 270ರಲ್ಲಿ ಬಿಕರಿಯಾಗುತ್ತಿವೆ.</p>.<p>ಕುಂದಾಪುರದಿಂದ ಆವಕಗೊಂಡ ಕಲ್ಲಂಗಡಿ ಹಣ್ಣನ್ನು ಕೆ.ಜಿ.ಗೆ ₹ 20ರ ಲೆಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ದೊಡ್ಡ ಗಾತ್ರದ ಒಂದು ಹಣ್ಣಿಗೆ ₹ 100ರವರೆಗೂ ಬೆಲೆಯಿದೆ. ಆಂಧ್ರಪ್ರದೇಶದಿಂದ ಆವಕಗೊಂಡಿರುವ ಸಣ್ಣ ಗಾತ್ರದ ಕಲ್ಲಂಗಡಿ. ದರವು ₹ 70ರಿಂದ₹ 100ರವರೆಗೆ ಇದೆ.</p>.<p>ಬಂಗಡೆ ₹100ಕ್ಕೆ ಐದು ಸಿಗುತ್ತಿದೆ. ಪಾಂಫ್ರೆಟ್ಕೆ.ಜಿ.ಗೆ₹ 800, ಲುಸ್ಕಾ ಒಂದು ಪಾಲಿಗೆ ₹ 200, ಬೆಳುಂಜೆ ₹ 100, ಲೆಪ್ಪೆ ₹ 100ರ ದರ ಹೊಂದಿವೆ. ಫಾರಂ ಕೋಳಿಯ ದರ ₹ 180, ನಾಟಿಕೋಳಿಗೆ ₹ 700 ಇದೆ. ಮಟನ್ ಪ್ರತಿ ಕೆ.ಜಿ.ಗೆ ₹ 550 ಹಾಗೂ ಚಿಕನ್ ₹ 220ರಲ್ಲಿ ವ್ಯಾಪಾರವಾಗುತ್ತಿದೆ.ಒಂದು ಮೊಟ್ಟೆಗೆ₹ 5 ಹಾಗೂ ಬೇಯಿಸಿದ ಮೊಟ್ಟೆಗೆ₹ 8 ಇದೆ.</p>.<p class="Subhead"><strong>ಮೀನಿನ ಸಂಗ್ರಹವಿಲ್ಲ:</strong>ಕಾರವಾರ ಬಂದರಿನಲ್ಲಿ ಮೀನು ಸಂಗ್ರಹ ಮುಗಿದು ಎರಡು ವಾರಗಳೇ ಕಳೆದಿವೆ. ಮೀನಿಗೆ ಬರ ಎದುರಾಗಿದ್ದರಿಂದ ಕೇರಳ, ಮಡಗಾಂವ್, ಮಲ್ಪೆ ಮುಂತಾದ ಭಾಗಗಳಿಂದ ಆವಕ ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ ಎಂಟು ಲಾರಿಗಳಷ್ಟು ಮೀನುಗಳು ಮಾರುಕಟ್ಟೆಗೆ ಆವಕಗೊಂಡಿವೆ ಎಂದು ಮೀನುಗಾರ ವಿನಾಯಕ ಹರಿಕಂತ್ರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ನಗರದ ಮಾರುಕಟ್ಟೆಯಲ್ಲಿ ಎರಡು ವಾರಗಳಿಂದ ಸ್ಥಿರವಾಗಿದ್ದ ದರವು ಈಗ ಇಳಿಮುಖಗೊಂಡಿದೆ. ಆವಕ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ ಎಂದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.</p>.<p>ಪ್ರತಿ ಕೆ.ಜಿ.ಗೆ₹ 40ರಲ್ಲಿ ಬಿಕರಿಯಾಗುತ್ತಿದ್ದ ಈರುಳ್ಳಿ₹ 10ರಷ್ಟು ಇಳಿಕೆ ಕಂಡು₹ 30ರ ದರದಲ್ಲಿ ವಹಿವಾಟು ಕಾಣುತ್ತಿದೆ. ಟೊಮೆಟೊ ₹ 20ರಲ್ಲೇ ಸ್ಥಿರವಾಗಿದ್ದರೆ, ಕ್ಯಾರೆಟ್₹ 70 ರಿಂದ₹ 50ಕ್ಕೆ ಇಳಿಕೆಯಾಗಿದೆ. ಹೂಕೋಸು ₹ 30, ಕ್ಯಾಬೇಜ್₹ 20, ಆಲೂಗಡ್ಡೆ₹ 30ರ ದರ ಹೊಂದಿವೆ.₹ 50ರಲ್ಲಿ ಮಾರಾಟವಾಗುತ್ತಿದ್ದ ಬೀನ್ಸ್₹ 10ರಷ್ಟು ಇಳಿಕೆ ಕಂಡಿದೆ.ಕ್ಯಾಪ್ಸಿಕಂ ₹ 50, ಮೆಣಸಿನಕಾಯಿ ₹ 50, ಬೀಟ್ರೂಟ್₹ 40, ಬೆಂಡೆಕಾಯಿ₹ 40 ಬೆಲೆಯಲ್ಲಿ ಬಿಕರಿಯಾಗುತ್ತಿದೆ.</p>.<p>ಹಿಂದಿನ ವಾರ ಪಾಮ್ ಆಯಿಲ್ ಪ್ರತಿ ಲೀಟರ್ಗೆ₹ 100ರ ಬೆಲೆ ಹೊಂದಿತ್ತು. ಸದ್ಯ ಗಮನಾರ್ಹ ಇಳಿಕೆ ಕಂಡಿದ್ದು₹ 90ರಲ್ಲಿ ಗ್ರಾಹಕ ಖರೀದಿಸುತ್ತಿದ್ದಾನೆ. ಹಸಿರು ಬಟಾಣಿಗೆ ₹ 160, ಬ್ಯಾಡಗಿ ಮೆಣಸು ಪ್ರತಿ ಕೆ.ಜಿ.ಗೆ ₹ 220 ಹಾಗೂ ಉತ್ತಮ ಗುಣಮಟ್ಟದ್ದು ₹ 240ರ ದರ ಹೊಂದಿದೆ. ಸ್ವಸ್ತಿಕ್ ಅಕ್ಕಿ 25 ಕೆ.ಜಿ.ಯ ಚೀಲಕ್ಕೆ ₹ 900,ಹಳೆಅಕ್ಕಿಗೆ ₹ 1,000 ಇದೆ. ಜೋಳದ ಬೆಲೆಯಲ್ಲಿಯೂ₹ 10ರಷ್ಟು ಇಳಿಕೆಯಾಗಿದ್ದು ಪ್ರತಿ ಕೆ.ಜಿ.ಗೆ₹ 38 ಇದೆ.</p>.<p>ಹಸಿರು ದ್ರಾಕ್ಷಿಯು ದರದಲ್ಲಿ ಶಿವರಾತ್ರಿ ಸಮಯದಲ್ಲಿ ₹ 120ಕ್ಕೇರಿತ್ತು. ಸದ್ಯ ಅರ್ಧದಷ್ಟು ಇಳಿಕೆಗೊಂಡು₹ 70ರಲ್ಲಿ ಬಿಕರಿಯಾಗುತ್ತಿದೆ.ಕಪ್ಪು ದ್ರಾಕ್ಷಿಯ ದರದಲ್ಲೂ ಭಾರಿ ಇಳಿಕೆಯಾಗಿದೆ. ಪ್ರತಿ ಕೆ.ಜಿ.ಗೆ ₹ 180 ಇದ್ದ ದರವು ಈಗ₹ 120ಇದೆ. ಮೂಸುಂಬಿ₹ 70, ದಾಳಿಂಬೆ₹ 120, ಸಪೋಟಾ₹ 100ರಲ್ಲಿ ಗ್ರಾಹಕ ಕೊಂಡುಕೊಳ್ಳುತ್ತಿದ್ದಾನೆ. ಇರಾನಿ ಸೇಬು ₹ 200ರಿಂದ₹ 160ಕ್ಕೆ ಇಳಿಕೆ ಕಂಡಿದೆ.</p>.<p>ಸುವರ್ಣಗಡ್ಡೆ ಒಂದಕ್ಕೆ ₹ 200ರ ದರವಿದೆ. ದೊಡ್ಡ ಗಾತ್ರದ ಮಾವಿನಕಾಯಿ ₹ 100ಕ್ಕೆ ನಾಲ್ಕು, ಮಂಡ್ಯದಿಂದ ಆವಕವಾಗುವ ಬೆಲ್ಲ ₹ 48, ಮಹಾಲಿಂಗಪುರದ ಬೆಲ್ಲ ₹ 50, ಜೋನಿಬೆಲ್ಲ ₹ 80, ಜೇನುತುಪ್ಪ ₹ 270ರಲ್ಲಿ ಬಿಕರಿಯಾಗುತ್ತಿವೆ.</p>.<p>ಕುಂದಾಪುರದಿಂದ ಆವಕಗೊಂಡ ಕಲ್ಲಂಗಡಿ ಹಣ್ಣನ್ನು ಕೆ.ಜಿ.ಗೆ ₹ 20ರ ಲೆಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ದೊಡ್ಡ ಗಾತ್ರದ ಒಂದು ಹಣ್ಣಿಗೆ ₹ 100ರವರೆಗೂ ಬೆಲೆಯಿದೆ. ಆಂಧ್ರಪ್ರದೇಶದಿಂದ ಆವಕಗೊಂಡಿರುವ ಸಣ್ಣ ಗಾತ್ರದ ಕಲ್ಲಂಗಡಿ. ದರವು ₹ 70ರಿಂದ₹ 100ರವರೆಗೆ ಇದೆ.</p>.<p>ಬಂಗಡೆ ₹100ಕ್ಕೆ ಐದು ಸಿಗುತ್ತಿದೆ. ಪಾಂಫ್ರೆಟ್ಕೆ.ಜಿ.ಗೆ₹ 800, ಲುಸ್ಕಾ ಒಂದು ಪಾಲಿಗೆ ₹ 200, ಬೆಳುಂಜೆ ₹ 100, ಲೆಪ್ಪೆ ₹ 100ರ ದರ ಹೊಂದಿವೆ. ಫಾರಂ ಕೋಳಿಯ ದರ ₹ 180, ನಾಟಿಕೋಳಿಗೆ ₹ 700 ಇದೆ. ಮಟನ್ ಪ್ರತಿ ಕೆ.ಜಿ.ಗೆ ₹ 550 ಹಾಗೂ ಚಿಕನ್ ₹ 220ರಲ್ಲಿ ವ್ಯಾಪಾರವಾಗುತ್ತಿದೆ.ಒಂದು ಮೊಟ್ಟೆಗೆ₹ 5 ಹಾಗೂ ಬೇಯಿಸಿದ ಮೊಟ್ಟೆಗೆ₹ 8 ಇದೆ.</p>.<p class="Subhead"><strong>ಮೀನಿನ ಸಂಗ್ರಹವಿಲ್ಲ:</strong>ಕಾರವಾರ ಬಂದರಿನಲ್ಲಿ ಮೀನು ಸಂಗ್ರಹ ಮುಗಿದು ಎರಡು ವಾರಗಳೇ ಕಳೆದಿವೆ. ಮೀನಿಗೆ ಬರ ಎದುರಾಗಿದ್ದರಿಂದ ಕೇರಳ, ಮಡಗಾಂವ್, ಮಲ್ಪೆ ಮುಂತಾದ ಭಾಗಗಳಿಂದ ಆವಕ ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ ಎಂಟು ಲಾರಿಗಳಷ್ಟು ಮೀನುಗಳು ಮಾರುಕಟ್ಟೆಗೆ ಆವಕಗೊಂಡಿವೆ ಎಂದು ಮೀನುಗಾರ ವಿನಾಯಕ ಹರಿಕಂತ್ರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>