<p>ಶಿರಸಿ: ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳನ್ನು ಶಿರಸಿ ತಾಲ್ಲೂಕಿಗೆ ಸಂಪರ್ಕಿಸುವ ಬಿಸಲಕೊಪ್ಪ–ಬೆಡಸಗಾಂವ ಮುಖ್ಯ ರಸ್ತೆ ಅತಿವೃಷ್ಟಿಗೆ ಸಂಪೂರ್ಣದುಃಸ್ಥಿತಿಗೆ ತಲುಪಿದೆ.</p>.<p>ಶಿರಸಿ–ಹುಬ್ಬಳ್ಳಿ ಮುಖ್ಯ ರಸ್ತೆಯಿಂದ ಬಿಸಲಕೊಪ್ಪ ಗ್ರಾಮದ ಮೂಲಕ ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಜತೆಗೆ ಎರಡು ತಾಲ್ಲೂಕುಗಳಿಗೆ ಸಂಪರ್ಕ ಕೊಂಡಿಯಂತಿರುವ ರಸ್ತೆಯಲ್ಲಿ ಸಾಗುವುದೇ ಈಗ ಸವಾಲಾಗಿದೆ.</p>.<p>ಡಾಂಬರು ರಸ್ತೆಯಲ್ಲಿ ಈಗ ಹೊಂಡಗಳದ್ದೇ ದರ್ಬಾರು. ಅಲ್ಲಲ್ಲಿ ಕೆಸರು ಗುಂಡಿಯಾಗಿ ಪರಿಣಮಿಸಿದೆ. ಸಂಚಾರಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಕೆಲವು ಕಡೆ ಗ್ರಾಮಸ್ಥರು ರಸ್ತೆಗೆ ಹಸಿ ಸೊಪ್ಪು ಹಾಕಿಟ್ಟಿದ್ದಾರೆ.</p>.<p>ಬಿಸಲಕೊಪ್ಪ, ಕೊಪ್ಪ, ಉಲ್ಲಾಳ, ಬೆಡಸಗಾಂವ, ಕೊಪ್ಪದಗದ್ದೆ ಸೇರಿ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ಇರುವ ಏಕೈಕ ಮಾರ್ಗ ಇದಾಗಿದೆ. ಪ್ರತಿನಿತ್ಯ ನೂರಾರು ಜನರು ಓಡಾಟ ನಡೆಸುವ ರಸ್ತೆ ದುರವಸ್ಥೆಗೆ ತಲುಪಿದ್ದು ಗ್ರಾಮಸ್ಥರು ಹಿಡಿಶಾಪ ಹಾಕುತ್ತ ರಸ್ತೆಯಲ್ಲಿ ಸಾಗುತ್ತಿದ್ದಾರೆ.</p>.<p>‘ಮೂರ್ನಾಲ್ಕು ವರ್ಷದಿಂದಲೂ ರಸ್ತೆ ಹೊಂಡಮಯವಾಗಿಯೇ ಉಳಿದುಕೊಂಡಿದೆ. ಈಚೆಗೆ ಸುರಿದ ಮಳೆಗೆ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಬಿಸಲಕೊಪ್ಪದಿಂದ ಉಲ್ಲಾಳದ ವರೆಗೆ ಸುಮಾರು 4 ಕಿ.ಮೀ. ರಸ್ತೆ ಸಂಚಾರಕ್ಕೆ ಬಾರದಷ್ಟು ಮಾರ್ಪಟ್ಟಿದೆ’ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶೇಷಗಿರಿ ಹೆಗಡೆ.</p>.<p>‘ನೂರಾರು ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ತೆರಳುತ್ತಾರೆ. ಮೂರು ತಾಲ್ಲೂಕುಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ಕಾರಣಕ್ಕೆ ವಾಹನಗಳ ಓಡಾಟವೂ ಹೆಚ್ಚು. ಹೀಗಾಗಿ ಕೂಡಲೆ ರಸ್ತೆ ದುರಸ್ತಿಪಡಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಬಿಸಲಕೊಪ್ಪ–ಉಲ್ಲಾಳ ರಸ್ತೆ ದುರಸ್ಥಿಗೆ ₹60 ಲಕ್ಷ ಮೀಸಲಿಟ್ಟಿದ್ದೇವೆ. ಮಳೆ ಕಡಿಮೆಯಾದ ಬಳಿಕ ಕೆಲಸ ಆರಂಭಿಸುತ್ತೇವೆ’ ಎಂದು ಪಂಚಾಯತರಾಜ್ ಎಂಜಿನಿಯರಿಂಗ್ ಶಿರಸಿ ಉಪವಿಭಾಗದ ಎಇಇ ರಾಮಚಂದ್ರ ಗಾಂವಕರ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳನ್ನು ಶಿರಸಿ ತಾಲ್ಲೂಕಿಗೆ ಸಂಪರ್ಕಿಸುವ ಬಿಸಲಕೊಪ್ಪ–ಬೆಡಸಗಾಂವ ಮುಖ್ಯ ರಸ್ತೆ ಅತಿವೃಷ್ಟಿಗೆ ಸಂಪೂರ್ಣದುಃಸ್ಥಿತಿಗೆ ತಲುಪಿದೆ.</p>.<p>ಶಿರಸಿ–ಹುಬ್ಬಳ್ಳಿ ಮುಖ್ಯ ರಸ್ತೆಯಿಂದ ಬಿಸಲಕೊಪ್ಪ ಗ್ರಾಮದ ಮೂಲಕ ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಜತೆಗೆ ಎರಡು ತಾಲ್ಲೂಕುಗಳಿಗೆ ಸಂಪರ್ಕ ಕೊಂಡಿಯಂತಿರುವ ರಸ್ತೆಯಲ್ಲಿ ಸಾಗುವುದೇ ಈಗ ಸವಾಲಾಗಿದೆ.</p>.<p>ಡಾಂಬರು ರಸ್ತೆಯಲ್ಲಿ ಈಗ ಹೊಂಡಗಳದ್ದೇ ದರ್ಬಾರು. ಅಲ್ಲಲ್ಲಿ ಕೆಸರು ಗುಂಡಿಯಾಗಿ ಪರಿಣಮಿಸಿದೆ. ಸಂಚಾರಕ್ಕೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಕೆಲವು ಕಡೆ ಗ್ರಾಮಸ್ಥರು ರಸ್ತೆಗೆ ಹಸಿ ಸೊಪ್ಪು ಹಾಕಿಟ್ಟಿದ್ದಾರೆ.</p>.<p>ಬಿಸಲಕೊಪ್ಪ, ಕೊಪ್ಪ, ಉಲ್ಲಾಳ, ಬೆಡಸಗಾಂವ, ಕೊಪ್ಪದಗದ್ದೆ ಸೇರಿ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ಇರುವ ಏಕೈಕ ಮಾರ್ಗ ಇದಾಗಿದೆ. ಪ್ರತಿನಿತ್ಯ ನೂರಾರು ಜನರು ಓಡಾಟ ನಡೆಸುವ ರಸ್ತೆ ದುರವಸ್ಥೆಗೆ ತಲುಪಿದ್ದು ಗ್ರಾಮಸ್ಥರು ಹಿಡಿಶಾಪ ಹಾಕುತ್ತ ರಸ್ತೆಯಲ್ಲಿ ಸಾಗುತ್ತಿದ್ದಾರೆ.</p>.<p>‘ಮೂರ್ನಾಲ್ಕು ವರ್ಷದಿಂದಲೂ ರಸ್ತೆ ಹೊಂಡಮಯವಾಗಿಯೇ ಉಳಿದುಕೊಂಡಿದೆ. ಈಚೆಗೆ ಸುರಿದ ಮಳೆಗೆ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಬಿಸಲಕೊಪ್ಪದಿಂದ ಉಲ್ಲಾಳದ ವರೆಗೆ ಸುಮಾರು 4 ಕಿ.ಮೀ. ರಸ್ತೆ ಸಂಚಾರಕ್ಕೆ ಬಾರದಷ್ಟು ಮಾರ್ಪಟ್ಟಿದೆ’ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶೇಷಗಿರಿ ಹೆಗಡೆ.</p>.<p>‘ನೂರಾರು ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ತೆರಳುತ್ತಾರೆ. ಮೂರು ತಾಲ್ಲೂಕುಗಳ ನಡುವೆ ಸಂಪರ್ಕ ಕೊಂಡಿಯಾಗಿರುವ ಕಾರಣಕ್ಕೆ ವಾಹನಗಳ ಓಡಾಟವೂ ಹೆಚ್ಚು. ಹೀಗಾಗಿ ಕೂಡಲೆ ರಸ್ತೆ ದುರಸ್ತಿಪಡಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಬಿಸಲಕೊಪ್ಪ–ಉಲ್ಲಾಳ ರಸ್ತೆ ದುರಸ್ಥಿಗೆ ₹60 ಲಕ್ಷ ಮೀಸಲಿಟ್ಟಿದ್ದೇವೆ. ಮಳೆ ಕಡಿಮೆಯಾದ ಬಳಿಕ ಕೆಲಸ ಆರಂಭಿಸುತ್ತೇವೆ’ ಎಂದು ಪಂಚಾಯತರಾಜ್ ಎಂಜಿನಿಯರಿಂಗ್ ಶಿರಸಿ ಉಪವಿಭಾಗದ ಎಇಇ ರಾಮಚಂದ್ರ ಗಾಂವಕರ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>