ನವರಾತ್ರಿ ಹಬ್ಬದ ವೇಳೆಗೆ ಸ್ವಲ್ಪ ಬಿಸಿಲ ವಾತಾವರಣ ಇರುತ್ತಿತ್ತು. ಆದರೆ ಈ ವರ್ಷ ಮಳೆ ಬಿಡುವಿಲ್ಲದ ಕಾರಣ ಗೋಟಡಿಕೆ ಒಣಗಿಸಲು ಸಮಸ್ಯೆಯಾಗಿದೆ.
ನರಸಿಂಹ ಹೆಗಡೆ ಅಡಿಕೆ ಬೆಳೆಗಾರ
ನಿಲ್ಲದ ಕೊಳೆ:
ಬೆಂಬಿಡದ ಎಲೆಚುಕ್ಕಿ ‘ಅತಿವೃಷ್ಠಿಯ ಕಾರಣಕ್ಕೆ ಈಗಾಗಲೇ ಅಡಿಕೆಗೆ ಕೊಳೆ ರೋಗ ಬಾಧಿಸಿದೆ. ಪ್ರತಿ ಬೆಳೆಗಾರ ಕನಿಷ್ಠ 3 ಬಾರಿ ಬೋರ್ಡೋ ದ್ರಾವಣ ಸಿಂಪಡಿಸಿದ್ದಾನೆ. ಆದರೂ ಬಹುತೇಕ ತೋಟಗಳಲ್ಲಿ ರೋಗ ಹತೋಟಿಗೆ ಬಂದಿಲ್ಲ. ಜತೆ ಎಲೆಚುಕ್ಕಿ ರೋಗವೂ ವ್ಯಾಪಕವಾಗುತ್ತಿದ್ದು ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ರೋಗ ನಿಯಂತ್ರಣ ಸಂಬಂಧ ಪ್ರಯೋಗಕ್ಕೆ ಒಳಪಡಿಸಿರುವ ತೋಟಗಳಲ್ಲೂ ಎಲೆಚುಕ್ಕಿ ನಿಯಂತ್ರಣಕ್ಕೆ ಬಂದಿಲ್ಲ. ಇದು ಅಡಿಕೆ ಬೆಳೆಗಾರರ ಉತ್ಸಾಹ ಕುಗ್ಗುವಂತೆ ಮಾಡಿದೆ’ ಎಂಬುದು ಬಹುತೇಕ ಅಡಿಕೆ ಬೆಳೆಗಾರರ ಮಾತಾಗಿದೆ.