ಅನುದಾನಿತ ಪದವಿ ಕಾಲೇಜುಗಳ ಪ್ರಾಧ್ಯಾಪಕರ ಹಲವು ವರ್ಷಗಳ ಬೇಡಿಕೆ ಪರಿಣಾಮ ಹಣಕಾಸು ಇಲಾಖೆಯಿಂದ ಸ್ಥಾನಿಕರಣ ಹಿಂಬಾಕಿ ವೇತನ ಬಿಡುಗಡೆಯಾಗಿತ್ತು. ಮಾರ್ಚ್ 23ರಂದು ಮಂಜೂರಾಗಿದ್ದ ₹ 13 ಕೋಟಿ ಹಣವನ್ನು, ಆರು ಮತ್ತು ಏಳನೇ ವೇತನ ಆಯೋಗದ ಯುಜಿಸಿ ಪರಿಷ್ಕೃತ ವೇತನದಲ್ಲಿ ಹೆಚ್ಚುವರಿ ತುಟ್ಟಿಭತ್ಯೆ ಪಡೆದ ಕಾರಣ ಹಿಂಬಾಕಿ ಸೆಳೆಯಬಾರದು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ನೀಡಿದ್ದರು. ಈ ಆದೇಶ ಸಾವಿರಾರು ಪ್ರಾಧ್ಯಾಪಕರಿಗೆ ನಿರಾಸೆ ಮೂಡಿಸಿತ್ತು. ಸ್ಥಾನಿಕರಣ ಹಿಂಬಾಕಿ ವೇತನ ತಡೆಹಿಡಿದ ಕುರಿತು ‘ಪ್ರಜಾವಾಣಿ’ ಮಾರ್ಚ್ 29 ರಂದು ವಿಶೇಷ ವರದಿ ಪ್ರಕಟಿಸಿತ್ತು.