<p><strong>ಕಾರವಾರ:</strong> ಇಲ್ಲಿನ ದಿವೇಕರ ಕಾಲೇಜು ಸಮೀಪ ಕಡಲತೀರದಲ್ಲಿ ಜಾಗ ಸಮತಟ್ಟುಗೊಳಿಸಲು ಬಂದ ತಟರಕ್ಷಕ ಪಡೆಯ (ಕೋಸ್ಟ್ ಗಾರ್ಡ್) ಅಧಿಕಾರಿಗಳು, ಸಿಬ್ಬಂದಿ ಜನವಿರೋಧದ ಕಾರಣಕ್ಕೆ ಕಾಲ್ಕಿತ್ತ ಘಟನೆ ಮಂಗಳವಾರ ನಡೆಯಿತು.</p>.<p>ತಟರಕ್ಷಕ ಪಡೆಗೆ ಮಂಜೂರಾಗಿರುವ 3.14 ಎಕರೆ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಜಾಗಕ್ಕೆ ಬೇಲಿ ಅಳವಡಿಸುವ ಸಲುವಾಗಿ ಜೆಸಿಬಿ ಬಳಸಿ ಕಾರ್ಯಾಚರಣೆ ಆರಂಭಿಸಲಾಯಿತು. ಸ್ಥಳದಲ್ಲಿದ್ದ ಮೀನುಗಾರರು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಆದರೂ, ಲೆಕ್ಕಿಸದೆ ಕಾರ್ಯಾಚರಣೆ ಮುಂದುವರಿಸಲಾಯಿತು.</p>.<p>ಸ್ಥಳಕ್ಕೆ ಬಂದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಮೀನುಗಾರ ಮುಖಂಡ ರತನ್ ದುರ್ಗೇಕರ್ ತಟರಕ್ಷಕ ಪಡೆಗೆ ಕಡಲತೀರದಲ್ಲಿ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.</p>.<p>‘ತಟರಕ್ಷಕ ಪಡೆಗೆ ಕಡಲತೀರದಲ್ಲಿ ಜಾಗ ನೀಡದಂತೆ ಹೋರಾಟ ನಡೆಸುತ್ತ ಬಂದಿದ್ದೇವೆ. ನೌಕಾದಳಕ್ಕೆ ತಾಲ್ಲೂಕಿನ ಹಲವು ಕಡಲತೀರಗಳನ್ನು ನೀಡಿ ಇಲ್ಲಿನ ಜನರು ಜಾಗ ಕಳೆದುಕೊಂಡಿದ್ದಾರೆ. ಇರುವ ಏಕೈಕ ಕಡಲತೀರವೂ ರಕ್ಷಣಾ ಚಟುವಟಿಕೆಗೆ ಮೀಸಲಾದರೆ ಜನರಿಗೆ ಕಡಲತೀರ ಸಿಗದಂತಾಗುತ್ತದೆ’ ಎಂದು ಮಾಧವ ನಾಯಕ ಆಕ್ಷೇಪಿಸಿದರು.</p>.<p>ತಟಕ್ಷಕ ಪಡೆಗೆ ಮೀಸಲಿಟ್ಟಿರುವ ಜಾಗ ಹಿಂಪಡೆಯುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಸದ್ಯ ಈ ಜಾಗದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಒತ್ತಾಯಿಸಿದರು.</p>.<p>ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಿಶ್ಚಲ್ ನೊರ್ಹೋನಾ, ‘ಸ್ಥಳೀಯರಿಂದ ವಿರೋಧ ಇರುವ ಕಾರಣಕ್ಕೆ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಯಾವುದೇ ಚಟುವಟಿಕೆ ಕೈಗೊಳ್ಳುವ ಮುನ್ನ ಜಿಲ್ಲಾಡಳಿತಕ್ಕೆ, ಪೊಲೀಸರಿಗೆ ಮಾಹಿತಿ ನೀಡಿ’ ಎಂದು ತಟರಕ್ಷಕ ಪಡೆ ಅಧಿಕಾರಿಗಳಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಇಲ್ಲಿನ ದಿವೇಕರ ಕಾಲೇಜು ಸಮೀಪ ಕಡಲತೀರದಲ್ಲಿ ಜಾಗ ಸಮತಟ್ಟುಗೊಳಿಸಲು ಬಂದ ತಟರಕ್ಷಕ ಪಡೆಯ (ಕೋಸ್ಟ್ ಗಾರ್ಡ್) ಅಧಿಕಾರಿಗಳು, ಸಿಬ್ಬಂದಿ ಜನವಿರೋಧದ ಕಾರಣಕ್ಕೆ ಕಾಲ್ಕಿತ್ತ ಘಟನೆ ಮಂಗಳವಾರ ನಡೆಯಿತು.</p>.<p>ತಟರಕ್ಷಕ ಪಡೆಗೆ ಮಂಜೂರಾಗಿರುವ 3.14 ಎಕರೆ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಜಾಗಕ್ಕೆ ಬೇಲಿ ಅಳವಡಿಸುವ ಸಲುವಾಗಿ ಜೆಸಿಬಿ ಬಳಸಿ ಕಾರ್ಯಾಚರಣೆ ಆರಂಭಿಸಲಾಯಿತು. ಸ್ಥಳದಲ್ಲಿದ್ದ ಮೀನುಗಾರರು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಆದರೂ, ಲೆಕ್ಕಿಸದೆ ಕಾರ್ಯಾಚರಣೆ ಮುಂದುವರಿಸಲಾಯಿತು.</p>.<p>ಸ್ಥಳಕ್ಕೆ ಬಂದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಮೀನುಗಾರ ಮುಖಂಡ ರತನ್ ದುರ್ಗೇಕರ್ ತಟರಕ್ಷಕ ಪಡೆಗೆ ಕಡಲತೀರದಲ್ಲಿ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.</p>.<p>‘ತಟರಕ್ಷಕ ಪಡೆಗೆ ಕಡಲತೀರದಲ್ಲಿ ಜಾಗ ನೀಡದಂತೆ ಹೋರಾಟ ನಡೆಸುತ್ತ ಬಂದಿದ್ದೇವೆ. ನೌಕಾದಳಕ್ಕೆ ತಾಲ್ಲೂಕಿನ ಹಲವು ಕಡಲತೀರಗಳನ್ನು ನೀಡಿ ಇಲ್ಲಿನ ಜನರು ಜಾಗ ಕಳೆದುಕೊಂಡಿದ್ದಾರೆ. ಇರುವ ಏಕೈಕ ಕಡಲತೀರವೂ ರಕ್ಷಣಾ ಚಟುವಟಿಕೆಗೆ ಮೀಸಲಾದರೆ ಜನರಿಗೆ ಕಡಲತೀರ ಸಿಗದಂತಾಗುತ್ತದೆ’ ಎಂದು ಮಾಧವ ನಾಯಕ ಆಕ್ಷೇಪಿಸಿದರು.</p>.<p>ತಟಕ್ಷಕ ಪಡೆಗೆ ಮೀಸಲಿಟ್ಟಿರುವ ಜಾಗ ಹಿಂಪಡೆಯುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಸದ್ಯ ಈ ಜಾಗದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಒತ್ತಾಯಿಸಿದರು.</p>.<p>ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಿಶ್ಚಲ್ ನೊರ್ಹೋನಾ, ‘ಸ್ಥಳೀಯರಿಂದ ವಿರೋಧ ಇರುವ ಕಾರಣಕ್ಕೆ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಯಾವುದೇ ಚಟುವಟಿಕೆ ಕೈಗೊಳ್ಳುವ ಮುನ್ನ ಜಿಲ್ಲಾಡಳಿತಕ್ಕೆ, ಪೊಲೀಸರಿಗೆ ಮಾಹಿತಿ ನೀಡಿ’ ಎಂದು ತಟರಕ್ಷಕ ಪಡೆ ಅಧಿಕಾರಿಗಳಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>