<p><strong>ಯಲ್ಲಾಪುರ</strong>: ‘ನಮ್ಮ ಪೌರಾಣಿಕ ವ್ಯಕ್ತಿತ್ವಗಳಿಗೆ ಮಿತಿಗಳಿವೆ. ಆದರೆ ಕೃಷ್ಣನಿಗೆ ಯಾವುದೇ ಇತಿ ಮಿತಿಗಳಿಲ್ಲ. ಆತನ ಜೀವನದ ಕಥೆ ನಮಗೆ ಆದರ್ಶಪ್ರಾಯ’ ಎಂದು ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.</p>.<p>ಪಟ್ಟಣದ ವಿಶ್ವದರ್ಶನ ಕೇಂದ್ರಿಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಧಾಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಕ್ಕಳು ಏನೇ ಮಾಡಿದರೂ ಅದು ಸುಂದರಾಗಿ ಕಾಣುತ್ತದೆ. ಕೃಷ್ಣ ನಮ್ಮ ಜೀವನಕ್ಕೆ ಸಮೀಪವಾಗಿದ್ದಾನೆ. ಉಳಿದೆಲ್ಲ ಪುರಾಣ ಪುರುಷರಿಗಿಂತ ಕೃಷ್ಣ ನಮಗೆ ಹೆಚ್ಚು ನಮ್ಮವನಂತೆ ಕಾಣುತ್ತಾನೆ’ ಎಂದರು.</p>.<p>ತಾಳಮದ್ದಳೆ ಅರ್ಥಧಾರಿ ಚಂದ್ರಕಲಾ ಭಟ್ ಮಾತನಾಡಿ, ‘ಇಂದಿನ ಧಾವಂತದ ಬದುಕಿನಲ್ಲಿ ಸಂಸ್ಕೃತಿಯತ್ತ ಗಮನ ಕಡಿಮೆಯಾಗುತ್ತಿದೆ. ಈ ರೀತಿಯ ಕಾರ್ಯಕ್ರಮದಿಂದ ಪುರಾಣ ಪ್ರಪಂಚದತ್ತ ನಮ್ಮ ಗಮನ ಹರಿಯುತ್ತದೆ. ಇಂದು ಮೌಲ್ಯ ಶಿಕ್ಷಣದ ಅಗತ್ಯವಿದೆ’ ಎಂದರು.</p>.<p>ವಿಶ್ವದರ್ಶನ ಶಿಕ್ಷಣ ಸಮೂಹದ ಕಾರ್ಯದರ್ಶಿ ನರಸಿಂಹ ಕೋಣೆಮನೆ, ರಂಗ ಸಹ್ಯಾದ್ರಿ ಸಂಸ್ಥೆಯ ಅಧ್ಯಕ್ಷ ಡಿ. ಎನ್ ಗಾಂವ್ಕರ, ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ ಇದ್ದರು.<br> ಕೇಂದ್ರೀಯ ಶಾಲೆಯ ವಿದ್ಯಾರ್ಥಿ ಶ್ರೀರಾಮ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ವನಿತಾ ಭಾಗ್ವತ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಆಸ್ಮಾಶೇಖ್ ನಿರ್ವಹಿಸಿ, ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ</strong>: ‘ನಮ್ಮ ಪೌರಾಣಿಕ ವ್ಯಕ್ತಿತ್ವಗಳಿಗೆ ಮಿತಿಗಳಿವೆ. ಆದರೆ ಕೃಷ್ಣನಿಗೆ ಯಾವುದೇ ಇತಿ ಮಿತಿಗಳಿಲ್ಲ. ಆತನ ಜೀವನದ ಕಥೆ ನಮಗೆ ಆದರ್ಶಪ್ರಾಯ’ ಎಂದು ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.</p>.<p>ಪಟ್ಟಣದ ವಿಶ್ವದರ್ಶನ ಕೇಂದ್ರಿಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಧಾಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಕ್ಕಳು ಏನೇ ಮಾಡಿದರೂ ಅದು ಸುಂದರಾಗಿ ಕಾಣುತ್ತದೆ. ಕೃಷ್ಣ ನಮ್ಮ ಜೀವನಕ್ಕೆ ಸಮೀಪವಾಗಿದ್ದಾನೆ. ಉಳಿದೆಲ್ಲ ಪುರಾಣ ಪುರುಷರಿಗಿಂತ ಕೃಷ್ಣ ನಮಗೆ ಹೆಚ್ಚು ನಮ್ಮವನಂತೆ ಕಾಣುತ್ತಾನೆ’ ಎಂದರು.</p>.<p>ತಾಳಮದ್ದಳೆ ಅರ್ಥಧಾರಿ ಚಂದ್ರಕಲಾ ಭಟ್ ಮಾತನಾಡಿ, ‘ಇಂದಿನ ಧಾವಂತದ ಬದುಕಿನಲ್ಲಿ ಸಂಸ್ಕೃತಿಯತ್ತ ಗಮನ ಕಡಿಮೆಯಾಗುತ್ತಿದೆ. ಈ ರೀತಿಯ ಕಾರ್ಯಕ್ರಮದಿಂದ ಪುರಾಣ ಪ್ರಪಂಚದತ್ತ ನಮ್ಮ ಗಮನ ಹರಿಯುತ್ತದೆ. ಇಂದು ಮೌಲ್ಯ ಶಿಕ್ಷಣದ ಅಗತ್ಯವಿದೆ’ ಎಂದರು.</p>.<p>ವಿಶ್ವದರ್ಶನ ಶಿಕ್ಷಣ ಸಮೂಹದ ಕಾರ್ಯದರ್ಶಿ ನರಸಿಂಹ ಕೋಣೆಮನೆ, ರಂಗ ಸಹ್ಯಾದ್ರಿ ಸಂಸ್ಥೆಯ ಅಧ್ಯಕ್ಷ ಡಿ. ಎನ್ ಗಾಂವ್ಕರ, ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ ಇದ್ದರು.<br> ಕೇಂದ್ರೀಯ ಶಾಲೆಯ ವಿದ್ಯಾರ್ಥಿ ಶ್ರೀರಾಮ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ವನಿತಾ ಭಾಗ್ವತ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಆಸ್ಮಾಶೇಖ್ ನಿರ್ವಹಿಸಿ, ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>