ಕಳೆದ ವರ್ಷ 10 ಸಾವಿರ ಹೆ. ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಈ ವರ್ಷ ಅದರ ಪ್ರಮಾಣ ಕಡಿಮೆಯಿದೆ. ತೇವಾಂಶ ಕಡಿಮೆಯಾದರೆ ರೋಗ ಹತೋಟಿಗೆ ಬರುತ್ತದೆ
ಬಿ.ಪಿ. ಸತೀಶ ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಪ್ರಯೋಗ ಫಲಿತಾಂಶ ವಿಳಂಬ
ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಅಡಿಕೆ ತೋಟದ ವ್ಯವಸ್ಥಿತ ನಿರ್ವಹಣೆ ವಿವಿಧ ಪ್ರಯೋಗಗಳ ಮೂಲಕ ಎಲೆಚುಕ್ಕಿ ನಿಯಂತ್ರಣಕ್ಕೆ ಸಿಪಿಸಿಆರ್ಐ ವಿಜ್ಞಾನಿಗಳ ತಂಡ ಪ್ರಯೋಗ ನಡೆಸುತ್ತಿದೆ. ಒಟ್ಟೂ ಮೂರು ವರ್ಷಗಳ ಕಾಲ ಈ ಪ್ರಯೋಗ ನಡೆಯಲಿದೆ. ಪ್ರಯೋಗ ನಡೆಸುವ ಜತೆ ತೋಟಕ್ಕೆ ಯಾವ ಪೋಷಕಾಂಶ ನೀಡಬೇಕು ಬಸಿ ಕಾಲುವೆ ನಿರ್ವಹಣೆ ಹೇಗೆ ಮಾಡಬೇಕು ಎಂಬ ಮಾಹಿತಿ ನೀಡಬೇಕು. ಈಗ ನಡೆಯುತ್ತಿರುವ ಪ್ರಯೋಗಗಳ ಫಲಿತಾಂಶ ವರ್ಷಗಳ ಬಳಿಕ ರೈತರಿಗೆ ಲಭಿಸಿ ಆ ಬಳಿಕ ರೈತರು ಅದನ್ನು ಅನುಷ್ಟಾನ ಮಾಡುವಷ್ಟರಲ್ಲಿ ರೋಗ ಕೈ ಮೀರಬಹುದು ಎನ್ನುತ್ತಾರೆ ಅಡಿಕೆ ಬೆಳೆಗಾರರು.