‘ಹೋಳಿ ಹುಣ್ಣಿಮೆ ರಾತ್ರಿಯಂದು ವಾಡಾ ಮಧ್ಯದಲ್ಲಿ ‘ಹೊಳೋಬಾ ದೇವ್’ (ಹೋಳಿ ಹಬ್ಬದಂದು ಪೂಜಿಸುವ ಕಲ್ಲು) ಪೂಜೆ ಸಲ್ಲಿಸುತ್ತಾರೆ. ಅಲ್ಲಿರುವ ಪ್ರತಿ ಮನೆಯವರು ಸಗಣಿ ಬೆರಣಿಯನ್ನು ಕಲ್ಲಿನ ಸುತ್ತಲೂ ಇಟ್ಟು ಪೂಜಿಸುತ್ತಾರೆ. ನಂತರ ಬೆರಣಿಯನ್ನು ಸುಟ್ಟು, ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಸಿಹಿ ಖಾದ್ಯ ಸವಿಯುತ್ತಾರೆ. ಮಾರನೇಯ ದಿನ ಪ್ರತಿಮನೆಯಿಂದ ಕೊಡದಲ್ಲಿ ನೀರು ತಂದು, ಹೋಳಿ ಕಲ್ಲಿಗೆ ಸುರಿಯುತ್ತಾರೆ. ಬೆಂಕಿ ಆರಿದ ನಂತರ, ಬೂದಿ ಸಂಗ್ರಹಿಸಿ, ಹಣೆಗೆ ಹಚ್ಚಿಕೊಂಡು ರಾಸಾಯನಿಕ ಬಣ್ಣ ಮುಕ್ತ ಹೋಳಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ’ ಎಂದು ಬ್ಯಾನಳ್ಳಿಯ ಯುವಮುಖಂಡ ಭಾಗು ಕಾತ್ರೋಟ್ ಹೇಳಿದರು.