<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಸಂಪೂರ್ಣ ಕುಸಿದಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.</p>.<p>ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ನಡೆದ ಎಪಿಎಂಸಿ ಆಡಳಿತಾಧಿಕಾರಿ, ರಾಜ್ಯ ರೈತ ಸಂಘದ ಪದಾಧಿಕಾರಿಗಳ ಮತ್ತು ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಅಧಿಕಾರಿಗಳ ಹಿಡಿತ ಕೈತಪ್ಪಿದೆ, ಸರ್ಕಾರದ ಅನುಮತಿ ಇಲ್ಲದ ವರ್ತಕರು ಹಳ್ಳಿಗಳನ್ನು ಸುತ್ತಿ ರೈತರ ಬೆಳೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಶೀಘ್ರ ಮೊತ್ತ ಸಿಗಬಹುದು ಆದರೆ, ನಷ್ಟವಾಗುವ ಸಾಧ್ಯತೆಯೇ ಹೆಚ್ಚು’ ಎಂದು ಆರೋಪಿಸಿದರು.</p>.<p>‘ಪರವಾನಗಿ ಇಲ್ಲದ ವರ್ತಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ 50 ಕೆ.ಜಿ. ಚೀಲದ ತೂಕದಲ್ಲಿ ಹೆಚ್ಚುವರಿ ತೂಗುವ 1.3 ಕೆ.ಜಿ. ವಜಾ ಅಷ್ಟೆ ತೆಗೆಯಬೇಕು. ಅದಕ್ಕಿಂತ ಹೆಚ್ಚು ತೆಗೆಯಬಾರದು’ ಎಂದು ಪಟ್ಟು ಹಿಡಿದರು.</p>.<p>ವರ್ತಕರ ಸಂಘದ ಅಧ್ಯಕ್ಷ ಮೃತ್ಯುಂಜಯ ಬದಾಮಿ ಪ್ರತಿಕ್ರಿಯಿಸಿ, ‘ನಮಗೂ ವ್ಯಾಪಾರದಲ್ಲಿ ಅನೇಕ ವೆಚ್ಚಗಳಿರುತ್ತವೆ. ರೈತರು ಉಳಿದರೆ ನಾವು ಉಳಿಯುತ್ತೇವೆ. ದಯವಿಟ್ಟು 1.5 ಕೆ.ಜಿ. ವಜಾ ತೆಗೆಯುವ ಅವಕಾಶ ನೀಡಬೇಕು’ ಎಂದರು. ಈ ಸಂದರ್ಭದಲ್ಲಿ ರೈತರು ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆಯಿತು.</p>.<p>ಆಗ ಹೊಸಪೇಟೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಪರಿಸ್ಥಿತಿ ತಿಳಿಗೊಳಿಸಿದರು.</p>.<p>ಜೆ.ಎಂ.ವೀರಸಂಗಯ್ಯ, ‘ತೂಕದಲ್ಲಿ ರಾಜಿ ಇಲ್ಲ, ನಾವು ಹೇಳಿದಂತೆ ವರ್ತಕರು ಸಹಕರಿಸದಿದ್ದರೆ, ಎಪಿಎಂಸಿ ಕಾಯ್ದೆ ಪ್ರಕಾರ ಒಪ್ಪಿಕೊಂಡು ವ್ಯವಹರಿಸಬೇಕು’ ಎಂದು ತಾಕೀತು ಮಾಡಿದರು.</p>.<p>ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ರವಿಕುಮಾರ್ ತಂಬ್ರಹಳ್ಳಿ, ಕೂಡ್ಲಿಗಿಯ ಎನ್.ರಮೇಶ, ಹಡಗಲಿಯ ಹೊಸಮನಿ ಸಿದ್ದೇಪ್ಪ, ಕೊಟ್ಟೂರಿನ ರಮೇಶ್ ನಾಯ್ಕ್ ಮಾತನಾಡಿದರು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.</p>.<p>ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ತಹಶೀಲ್ದಾರ್ ಆರ್.ಕವಿತಾ, ಎಪಿಎಂಸಿ ಆಡಳಿತಾಧಿಕಾರಿ ವೀರಣ್ಣ, ಕಾರ್ಯದರ್ಶಿ ಶೈಲಾ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಗೌರವ ಅಧ್ಯಕ್ಷ ಹಲಿಗೇರಿ ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಸಂಪೂರ್ಣ ಕುಸಿದಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.</p>.<p>ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ನಡೆದ ಎಪಿಎಂಸಿ ಆಡಳಿತಾಧಿಕಾರಿ, ರಾಜ್ಯ ರೈತ ಸಂಘದ ಪದಾಧಿಕಾರಿಗಳ ಮತ್ತು ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಅಧಿಕಾರಿಗಳ ಹಿಡಿತ ಕೈತಪ್ಪಿದೆ, ಸರ್ಕಾರದ ಅನುಮತಿ ಇಲ್ಲದ ವರ್ತಕರು ಹಳ್ಳಿಗಳನ್ನು ಸುತ್ತಿ ರೈತರ ಬೆಳೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಶೀಘ್ರ ಮೊತ್ತ ಸಿಗಬಹುದು ಆದರೆ, ನಷ್ಟವಾಗುವ ಸಾಧ್ಯತೆಯೇ ಹೆಚ್ಚು’ ಎಂದು ಆರೋಪಿಸಿದರು.</p>.<p>‘ಪರವಾನಗಿ ಇಲ್ಲದ ವರ್ತಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ 50 ಕೆ.ಜಿ. ಚೀಲದ ತೂಕದಲ್ಲಿ ಹೆಚ್ಚುವರಿ ತೂಗುವ 1.3 ಕೆ.ಜಿ. ವಜಾ ಅಷ್ಟೆ ತೆಗೆಯಬೇಕು. ಅದಕ್ಕಿಂತ ಹೆಚ್ಚು ತೆಗೆಯಬಾರದು’ ಎಂದು ಪಟ್ಟು ಹಿಡಿದರು.</p>.<p>ವರ್ತಕರ ಸಂಘದ ಅಧ್ಯಕ್ಷ ಮೃತ್ಯುಂಜಯ ಬದಾಮಿ ಪ್ರತಿಕ್ರಿಯಿಸಿ, ‘ನಮಗೂ ವ್ಯಾಪಾರದಲ್ಲಿ ಅನೇಕ ವೆಚ್ಚಗಳಿರುತ್ತವೆ. ರೈತರು ಉಳಿದರೆ ನಾವು ಉಳಿಯುತ್ತೇವೆ. ದಯವಿಟ್ಟು 1.5 ಕೆ.ಜಿ. ವಜಾ ತೆಗೆಯುವ ಅವಕಾಶ ನೀಡಬೇಕು’ ಎಂದರು. ಈ ಸಂದರ್ಭದಲ್ಲಿ ರೈತರು ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆಯಿತು.</p>.<p>ಆಗ ಹೊಸಪೇಟೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಪರಿಸ್ಥಿತಿ ತಿಳಿಗೊಳಿಸಿದರು.</p>.<p>ಜೆ.ಎಂ.ವೀರಸಂಗಯ್ಯ, ‘ತೂಕದಲ್ಲಿ ರಾಜಿ ಇಲ್ಲ, ನಾವು ಹೇಳಿದಂತೆ ವರ್ತಕರು ಸಹಕರಿಸದಿದ್ದರೆ, ಎಪಿಎಂಸಿ ಕಾಯ್ದೆ ಪ್ರಕಾರ ಒಪ್ಪಿಕೊಂಡು ವ್ಯವಹರಿಸಬೇಕು’ ಎಂದು ತಾಕೀತು ಮಾಡಿದರು.</p>.<p>ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ರವಿಕುಮಾರ್ ತಂಬ್ರಹಳ್ಳಿ, ಕೂಡ್ಲಿಗಿಯ ಎನ್.ರಮೇಶ, ಹಡಗಲಿಯ ಹೊಸಮನಿ ಸಿದ್ದೇಪ್ಪ, ಕೊಟ್ಟೂರಿನ ರಮೇಶ್ ನಾಯ್ಕ್ ಮಾತನಾಡಿದರು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.</p>.<p>ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ತಹಶೀಲ್ದಾರ್ ಆರ್.ಕವಿತಾ, ಎಪಿಎಂಸಿ ಆಡಳಿತಾಧಿಕಾರಿ ವೀರಣ್ಣ, ಕಾರ್ಯದರ್ಶಿ ಶೈಲಾ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಗೌರವ ಅಧ್ಯಕ್ಷ ಹಲಿಗೇರಿ ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>