ದೇಶಪಾಂಡೆ ಕ್ಷಮೆ ಕೇಳಲಿ
‘ಆರ್.ವಿ.ದೇಶಪಾಂಡೆ ಅವರು ಹಿರಿಯ ರಾಜಕಾರಣಿ, ಹಿರಿಯ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಅವರು ಅವಮಾನ ಆಗುವ ರೀತಿಯಲ್ಲಿ ಉತ್ತರ ನೀಡಬಾರದಿತ್ತು. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು’ ಎಂದು ಹೇಳಿದ ಸಿ.ಟಿ.ರವಿ, ‘ದಾವಣಗೆರೆ ಎಸ್ಪಿ ಕುರಿತು ಶಾಸಕರು ಆಡಿದ ಮಾತಿನ ಮಾಹಿತಿ ನನಗಿಲ್ಲ, ಆದರೆ ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರಿಗಳು ಸಂವಿಧಾನಕ್ಕೆ ನಿಷ್ಠರಾಗಿರಬೇಕು, ಅಧಿಕಾರದಲ್ಲಿರುವವರ ಮನೆ ಬಾಗಿಲು ಕಾಯವಂತಾಗಬಾರದು’ ಎಂದರು.