<p><strong>ಮರಿಯಮ್ಮನಹಳ್ಳಿ:</strong> ನಾಣಿಕೇರಿ ಯುವ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಶಾಲೆ ಆವರಣದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ನಾಣಿಕೇರಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನೋಡುಗರ ಮನಸೆಳೆಯಿತು.</p>.<p>ಸಂಜೆ 4 ಗಂಟೆಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಿಂದ ಆರಂಭವಾದ ಮೆರವಣಿಗೆ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಸಾಗಿತು.</p>.<p>ರಾಮಸಾಗರದ ತಂಡದ ಕಹಳೆ ನಾದದಿಂದ ಆರಂಭವಾದ ಮೆರವಣಿಗೆಯಲ್ಲಿ ರಾಮವ್ವ ಜೋಗತಿ ಹಾಗೂ ಅಂಜಿನಮ್ಮ ಜೋಗತಿ ತಂಡದ ಜೋಗತಿ ಕಲಾವಿದೆಯರು ದೇವಿಯ ಕೊಡ ಹೊತ್ತು ಪ್ರದರ್ಶಿಸಿದ ಜೋಗತಿ ನೃತ್ಯ ಹಾಗೂ ಪದಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.</p>.<p>ತಂಬ್ರಳ್ಳಿಯ ಕಲಾವಿದರು ನಂದಿಧ್ವಜ ಕೋಲು ಹಾಗೂ ಸಮಾಳ ನುಡಿಸುತ್ತ ಸಾಗಿದರೆ, ಹೊಸಪೇಟೆಯ ಕಲಾವಿದರು ಕೀಲುಗೊಂಬೆ ಕುಣಿತ, ಮಲಪನಗುಡಿಯ ಕಲಾವಿದರ ಡೊಳ್ಳು ಹಾಗೂ ಮೆಟ್ರಿ ದೇವಲಾಪುರದ ತಂಡದವರ ಕರಡಿ ಮಜಲು ನೋಡುಗರ ಗಮನ ಸೆಳೆಯಿತು.</p>.<p>ರಾಮಾಂಜಿನೇಯ ತಂಡ ಕಲಾವಿದರ ಹಲಗೆಯ ನಾದಕ್ಕೆ ಯುವಕರು ಹೆಜ್ಜೆ ಹಾಕುತ್ತ ಸಾಗಿದರೆ, ತಿಮ್ಮಲಾಪುರ ಹಾಗೂ ಮಲಪನಗುಡಿಯ ಯುವಕರು ಕೋಲಾಟ, ಕಂಪ್ಲಿ ಕಲಾವಿದರ ತಾಷ ರಾಂಡೋಲು, ರಾಮಸಾಗರದ ಕಲಾವಿದರ ಬ್ಯಾಂಡ್ ಮೆರವಣಿಗೆ ಕಳೆ ಹೆಚ್ಚಿಸಿತ್ತು.</p>.<p>ಮೆರವಣಿಗೆಯಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಸಿ.ಸತೀಶ್, ಗೋವಿಂದರ ಪರಶುರಾಮ, ಪ್ರಕಾಶ್ ಪೂಜಾರ್, ಎಸ್.ಕೃಷ್ಣಾನಾಯ್ಕ, ಬಿ.ವಿಜಯಕುಮಾರ್, ನಾಣಿಕೇರಿ ಯುವ ಸೇವಾ ಟ್ರಸ್ಟ್ ಅಧ್ಯಕ್ಷ ರೆಹಮಾನ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.</p>.<p>ಮುಖ್ಯವೃತ್ತ ಬಳಸಿಕೊಂಡು ಹರಿಹರ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಶಾಲಾ ಆವರಣದಲ್ಲಿನ ವೇದಿಕೆಯವರೆಗೆ ಸಾಗಿ ಕೊನೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಿಯಮ್ಮನಹಳ್ಳಿ:</strong> ನಾಣಿಕೇರಿ ಯುವ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಶಾಲೆ ಆವರಣದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ನಾಣಿಕೇರಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನೋಡುಗರ ಮನಸೆಳೆಯಿತು.</p>.<p>ಸಂಜೆ 4 ಗಂಟೆಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಿಂದ ಆರಂಭವಾದ ಮೆರವಣಿಗೆ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಸಾಗಿತು.</p>.<p>ರಾಮಸಾಗರದ ತಂಡದ ಕಹಳೆ ನಾದದಿಂದ ಆರಂಭವಾದ ಮೆರವಣಿಗೆಯಲ್ಲಿ ರಾಮವ್ವ ಜೋಗತಿ ಹಾಗೂ ಅಂಜಿನಮ್ಮ ಜೋಗತಿ ತಂಡದ ಜೋಗತಿ ಕಲಾವಿದೆಯರು ದೇವಿಯ ಕೊಡ ಹೊತ್ತು ಪ್ರದರ್ಶಿಸಿದ ಜೋಗತಿ ನೃತ್ಯ ಹಾಗೂ ಪದಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.</p>.<p>ತಂಬ್ರಳ್ಳಿಯ ಕಲಾವಿದರು ನಂದಿಧ್ವಜ ಕೋಲು ಹಾಗೂ ಸಮಾಳ ನುಡಿಸುತ್ತ ಸಾಗಿದರೆ, ಹೊಸಪೇಟೆಯ ಕಲಾವಿದರು ಕೀಲುಗೊಂಬೆ ಕುಣಿತ, ಮಲಪನಗುಡಿಯ ಕಲಾವಿದರ ಡೊಳ್ಳು ಹಾಗೂ ಮೆಟ್ರಿ ದೇವಲಾಪುರದ ತಂಡದವರ ಕರಡಿ ಮಜಲು ನೋಡುಗರ ಗಮನ ಸೆಳೆಯಿತು.</p>.<p>ರಾಮಾಂಜಿನೇಯ ತಂಡ ಕಲಾವಿದರ ಹಲಗೆಯ ನಾದಕ್ಕೆ ಯುವಕರು ಹೆಜ್ಜೆ ಹಾಕುತ್ತ ಸಾಗಿದರೆ, ತಿಮ್ಮಲಾಪುರ ಹಾಗೂ ಮಲಪನಗುಡಿಯ ಯುವಕರು ಕೋಲಾಟ, ಕಂಪ್ಲಿ ಕಲಾವಿದರ ತಾಷ ರಾಂಡೋಲು, ರಾಮಸಾಗರದ ಕಲಾವಿದರ ಬ್ಯಾಂಡ್ ಮೆರವಣಿಗೆ ಕಳೆ ಹೆಚ್ಚಿಸಿತ್ತು.</p>.<p>ಮೆರವಣಿಗೆಯಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ, ಸಿ.ಸತೀಶ್, ಗೋವಿಂದರ ಪರಶುರಾಮ, ಪ್ರಕಾಶ್ ಪೂಜಾರ್, ಎಸ್.ಕೃಷ್ಣಾನಾಯ್ಕ, ಬಿ.ವಿಜಯಕುಮಾರ್, ನಾಣಿಕೇರಿ ಯುವ ಸೇವಾ ಟ್ರಸ್ಟ್ ಅಧ್ಯಕ್ಷ ರೆಹಮಾನ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.</p>.<p>ಮುಖ್ಯವೃತ್ತ ಬಳಸಿಕೊಂಡು ಹರಿಹರ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಶಾಲಾ ಆವರಣದಲ್ಲಿನ ವೇದಿಕೆಯವರೆಗೆ ಸಾಗಿ ಕೊನೆಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>