<p><strong>ವಿಜಯನಗರ (ಹೊಸಪೇಟೆ): </strong>ನಗರದ ಎಸ್.ವಿ.ಕೆ. ಬಸ್ ನಿಲ್ದಾಣದ ಬಳಿ ಗುಡ್ಡೆಯಂತೆ ಸಂಗ್ರಹವಾಗಿದ್ದ ತ್ಯಾಜ್ಯವನ್ನು ‘ಗ್ರೀನ್ ಹೊಸಪೇಟೆ’ ಕಾರ್ಯಕರ್ತರ ಸಹಯೋಗದೊಂದಿಗೆ ನಗರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.</p>.<p>ಬಳಿಕ ಗ್ರೀನ್ ಹೊಸಪೇಟೆ ಸಂಘಟನೆ ಕಾರ್ಯಕರ್ತರು ಗೋಡೆಗೆ ಸುಣ್ಣ ಬಳಿದರು. ಸುತ್ತಮುತ್ತಲಿನ ಜನರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು.</p>.<p>ನಗರಸಭೆ ಆರೋಗ್ಯ ಇನ್ಸ್ಪೆಕ್ಟರ್ ವೆಂಕಟೇಶ್, ‘ಈ ಹಿಂದೆ ಸಾಕಷ್ಟು ಬಾರಿ ಸೂಚನೆ ನೀಡಿದರೂ ಸಾರ್ವಜನಿಕರು, ಕೆಲ ಅಂಗಡಿ ಮಾಲೀಕರು ಬೇಕಾಬಿಟ್ಟಿ ಕಸ ಎಸೆದು ಹೋಗುತ್ತಿದ್ದಾರೆ. ಗ್ರೀನ್ ಹೊಸಪೇಟೆ ಸಂಘಟನೆಯವರು ಈ ವಿಷಯ ನಮ್ಮ ಗಮನಕ್ಕೆ ತಂದಿದ್ದರೂ. ಅವರ ಸಹಕಾರದೊಂದಿಗೆ ಕಸ ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>‘ಅಲ್ಲಿರುವ ಕಸದ ಡಬ್ಬಿಯನ್ನು ತೆಗೆಯಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ರಸ್ತೆಯ ಪಕ್ಕದಲ್ಲಿ ಕಸ ಎಸೆಯಬಾರದು. ಕಸ ಸಂಗ್ರಹಿಸುವ ವಾಹನಗಳಲ್ಲಿಯೇ ತ್ಯಾಜ್ಯ ಹಾಕಬೇಕು. ರಸ್ತೆ ಬದಿ ಕಸ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಸಂಘಟನೆಯ ಅಧ್ಯಕ್ಷ ಸುನೀಲ್ ಗೌಡ, ರಾಜಣ್ಣ, ಜೋಗಿ ತಾಯಪ್ಪ, ಶಿವರಾಜ್, ವಿನಯ್, ಡಿ.ಜೆ.ವಿಶ್ವ, ರಾಜು, ಧನು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯನಗರ (ಹೊಸಪೇಟೆ): </strong>ನಗರದ ಎಸ್.ವಿ.ಕೆ. ಬಸ್ ನಿಲ್ದಾಣದ ಬಳಿ ಗುಡ್ಡೆಯಂತೆ ಸಂಗ್ರಹವಾಗಿದ್ದ ತ್ಯಾಜ್ಯವನ್ನು ‘ಗ್ರೀನ್ ಹೊಸಪೇಟೆ’ ಕಾರ್ಯಕರ್ತರ ಸಹಯೋಗದೊಂದಿಗೆ ನಗರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.</p>.<p>ಬಳಿಕ ಗ್ರೀನ್ ಹೊಸಪೇಟೆ ಸಂಘಟನೆ ಕಾರ್ಯಕರ್ತರು ಗೋಡೆಗೆ ಸುಣ್ಣ ಬಳಿದರು. ಸುತ್ತಮುತ್ತಲಿನ ಜನರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು.</p>.<p>ನಗರಸಭೆ ಆರೋಗ್ಯ ಇನ್ಸ್ಪೆಕ್ಟರ್ ವೆಂಕಟೇಶ್, ‘ಈ ಹಿಂದೆ ಸಾಕಷ್ಟು ಬಾರಿ ಸೂಚನೆ ನೀಡಿದರೂ ಸಾರ್ವಜನಿಕರು, ಕೆಲ ಅಂಗಡಿ ಮಾಲೀಕರು ಬೇಕಾಬಿಟ್ಟಿ ಕಸ ಎಸೆದು ಹೋಗುತ್ತಿದ್ದಾರೆ. ಗ್ರೀನ್ ಹೊಸಪೇಟೆ ಸಂಘಟನೆಯವರು ಈ ವಿಷಯ ನಮ್ಮ ಗಮನಕ್ಕೆ ತಂದಿದ್ದರೂ. ಅವರ ಸಹಕಾರದೊಂದಿಗೆ ಕಸ ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>‘ಅಲ್ಲಿರುವ ಕಸದ ಡಬ್ಬಿಯನ್ನು ತೆಗೆಯಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ರಸ್ತೆಯ ಪಕ್ಕದಲ್ಲಿ ಕಸ ಎಸೆಯಬಾರದು. ಕಸ ಸಂಗ್ರಹಿಸುವ ವಾಹನಗಳಲ್ಲಿಯೇ ತ್ಯಾಜ್ಯ ಹಾಕಬೇಕು. ರಸ್ತೆ ಬದಿ ಕಸ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಸಂಘಟನೆಯ ಅಧ್ಯಕ್ಷ ಸುನೀಲ್ ಗೌಡ, ರಾಜಣ್ಣ, ಜೋಗಿ ತಾಯಪ್ಪ, ಶಿವರಾಜ್, ವಿನಯ್, ಡಿ.ಜೆ.ವಿಶ್ವ, ರಾಜು, ಧನು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>