ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಉಪ ತಹಶೀಲ್ದಾರ್ ಎಸ್.ಚಂದ್ರಶೇಖರ್ ಸೇವೆಯಿಂದ ಅಮಾನತು

Last Updated 6 ಫೆಬ್ರುವರಿ 2022, 8:30 IST
ಅಕ್ಷರ ಗಾತ್ರ

ಹರಪನಹಳ್ಳಿ (ವಿಜಯನಗರ ಜಿಲ್ಲೆ): ಛಾಪಾ ಕಾಗದದ ಮೇಲೆ‌ ಮುದ್ರಿತ ವಂಶ ವೃಕ್ಷ, ವಿವಿಧ ಸರ್ವೆ ನಂಬರ್‌ಗಳ ಹಕ್ಕು ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿದ್ದ ಕಂದಾಯ ಇಲಾಖೆ ಚಿಗಟೇರಿ ಹೋಬಳಿ ಉಪ ತಹಶೀಲ್ದಾರ್ ಎಸ್.ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ.

ಹರಪನಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ ಮೂರು ಸರ್ವೆ‌ ನಂಬರ್ ಗಳು ಮತ್ತು ಅಡವಿಹಳ್ಳಿಯ ಎಂಟು ಬೇರೆ ಬೇರೆ ಸರ್ವೆ‌ ನಂಬರ್‌ನಲ್ಲಿದ್ದ ಜಮೀನುಗಳ ಹಕ್ಕು ಬದಲಾವಣೆಗೆ ನೈಜ ವಂಶವೃಕ್ಷ ಪ್ರಮಾಣ‌ಪತ್ರವನ್ನು ಕಾನೂನುಬಾಹಿರವಾಗಿ ಮಾಡಿದ್ದಾರೆಂದು ದೂರುಗಳು ದಾಖಲಾಗಿದ್ದರಿಂದ ತನಿಖೆ ನಡೆಸಿದ ಅಧಿಕಾರಿಗಳು ವಿಚಾರಣೆ ಕಾಯ್ದಿರಿಸಿ, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಜೀವನಾಧಾರಕ್ಕೆ ಭತ್ಯೆ ಪಡೆಯಲು ಅರ್ಹತೆ ಹೊಂದಿದ್ದು, ಕೇಂದ್ರ ಸ್ಥಾನ ತೊರೆಯಲು, ಪ್ರಾಧಿಕಾರಿ ಅನುಮತಿ ಪಡೆಯುವ ನಿರ್ಬಂಧವನ್ನು ಆದೇಶದಲ್ಲಿ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT