<p><strong>ಹರಪನಹಳ್ಳಿ</strong>: ಈರುಳ್ಳಿ ಇಳುವರಿ ಕುಂಠಿತ, ದರ ಕುಸಿತ ಕಾರಣ ತಾಲ್ಲೂಕಿನ ಚಿಗಟೇರಿ ಗ್ರಾಮದ ರೈತರೊಬ್ಬರು 12 ಎಕರೆಯಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ಶನಿವಾರ ನಾಶಪಡಿಸಿದ್ದಾರೆ.</p>.<p>‘ಉತ್ತಮ ದರದ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದೆ. ಕಟಾವಿಗೆ ಬರುವಷ್ಟರಲ್ಲಿ ದರ ಕುಸಿತ ಆರಂಭವಾಯಿತು. ತೇವಾಂಶ ಹೆಚ್ಚಾಗಿ ಈಗ ಬೆಳೆ ಕೊಳೆಯಲು ಆರಂಭಿಸಿದೆ’ ಎಂದು ರೈತ ಡಿ.ರಾಮನಗೌಡ ವಿಷಾದಿಸಿದರು. </p>.<p>‘ಈಗ ಈರುಳ್ಳಿಗೆ ಉತ್ತಮ ದರ ಇಲ್ಲ. ಕಟಾವು ಮಾಡಿಸಿದರೆ ಇನ್ನಷ್ಟು ನಷ್ಟ ಆಗಲಿದೆ. ಹೀಗಾಗಿ ಟ್ರ್ಯಾಕ್ಟರ್ನಿಂದ ನಾಶಪಡಿಸಿದ್ದೇನೆ. ಸರ್ಕಾರ ಬೆಳೆಗೆ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ</strong>: ಈರುಳ್ಳಿ ಇಳುವರಿ ಕುಂಠಿತ, ದರ ಕುಸಿತ ಕಾರಣ ತಾಲ್ಲೂಕಿನ ಚಿಗಟೇರಿ ಗ್ರಾಮದ ರೈತರೊಬ್ಬರು 12 ಎಕರೆಯಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ಶನಿವಾರ ನಾಶಪಡಿಸಿದ್ದಾರೆ.</p>.<p>‘ಉತ್ತಮ ದರದ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದೆ. ಕಟಾವಿಗೆ ಬರುವಷ್ಟರಲ್ಲಿ ದರ ಕುಸಿತ ಆರಂಭವಾಯಿತು. ತೇವಾಂಶ ಹೆಚ್ಚಾಗಿ ಈಗ ಬೆಳೆ ಕೊಳೆಯಲು ಆರಂಭಿಸಿದೆ’ ಎಂದು ರೈತ ಡಿ.ರಾಮನಗೌಡ ವಿಷಾದಿಸಿದರು. </p>.<p>‘ಈಗ ಈರುಳ್ಳಿಗೆ ಉತ್ತಮ ದರ ಇಲ್ಲ. ಕಟಾವು ಮಾಡಿಸಿದರೆ ಇನ್ನಷ್ಟು ನಷ್ಟ ಆಗಲಿದೆ. ಹೀಗಾಗಿ ಟ್ರ್ಯಾಕ್ಟರ್ನಿಂದ ನಾಶಪಡಿಸಿದ್ದೇನೆ. ಸರ್ಕಾರ ಬೆಳೆಗೆ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>