ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿ ಸುತ್ತಮುತ್ತ ಬಿಸಿಲಿನ ತಾಪ ಜಾಸ್ತಿಯಾಗುತ್ತಿದ್ದು, ವಿಜಯ ವಿಠ್ಠಲ ದೇವಸ್ಥಾನದ ಸಮೀಪ ಪ್ರವಾಸಿಗರಿಗಾಗಿ ಬಿದಿರಿನ ತಟ್ಟಿಯ ಮೇಲೆ ಕಾಸೆ ಹುಲ್ಲು ಹಾಸಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಬ್ಯಾಟರಿ ವಾಹನ ಬರುವ ತನಕ ಕಾಯಲು ಪ್ರವಾಸಿಗರಿಗೆ ಈ ನೆರಳಿನ ವ್ಯವಸ್ಥೆಯನ್ನು ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ಮಾಡಿದೆ.
ರಾಜ ಪ್ರಾಂಗಣದ ಬಳಿಯೂ ಬೇಕು: ಮಹಾನವಮಿ ದಿಬ್ಬ ಸಮೀಪದ ರಾಜ ಪ್ರಾಂಗಣದ ಬಳಿಯೂ ಇಂತಹದೇ ನೆರಳಿನ ವ್ಯವಸ್ಥೆ ಬೇಕು. ಅಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಎಳನೀರು ಮಾರಾಟದ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.