ಹರೀಶ್ ಅವರ ಇಬ್ಬರು ಮಕ್ಕಳು ಮನೆಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಮನವೀರ್ ಕೈಗೆ ಗೋಲಿ ಸಿಕ್ಕಿದ್ದು, ನುಂಗಿದ್ದಾನೆ. ಮಗುವಿಗೆ ಊಟ ಮಾಡಿಸಲು ಬಂದ ಅವರ ತಾಯಿ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಗೋಲಿಯನ್ನು ಗಮನಿಸಿ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಚಿರಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯೋ ಮಾರ್ಗದ ಮಧ್ಯೆಯೇ ಮೃತ ಪಟ್ಟಿದೆ. ಅಕಾಲಿಕವಾಗಿ ಮಗುವನ್ನು ಕಳೆದುಕೊಂಡ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.