<p><strong>ವಿಜಯಪುರ</strong>: ಜಿಲ್ಲೆಯಲ್ಲಿ ಹಾದುಹೋಗಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆಕೇಂದ್ರ ಸರ್ಕಾರವು ₹1020 ಕೋಟಿ ಹೆಚ್ಚುವರಿ ಅನುದಾನ ನೀಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 548ಬಿ ವಿಜಯಪುರ ಪ್ರವಾಸಿ ಮಂದಿರ ಸಮೀಪದ ವೃತ್ತ(ಇಟಗಿ ಪೆಟ್ರೋಲ್ ಪಂಪ್)ನಿಂದ ತೆಲಸಂಗ ಕ್ರಾಸ್ ವರೆಗೆ 39 ಕಿ.ಮೀ ರಸ್ತೆಯನ್ನು ₹250 ಕೋಟಿ ಮೊತ್ತದಲ್ಲಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.</p>.<p>ರಾಷ್ಟ್ರೀಯ ಹೆದ್ದಾರಿ ನಂ.561 ‘ಎ’ ಮಹಾರಾಷ್ಟ್ರ ಗಡಿಯಿಂದ ಸಿದ್ದಾಪುರ–ಅರಕೇರಿ–ವಿಜಯಪುರ ವರೆಗೆ 12 ಕಿ.ಮೀ. ರಸ್ತೆಯನ್ನು ₹69.53 ಕೋಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.</p>.<p>ರಾಷ್ಟ್ರೀಯ ಹೆದ್ದಾರಿ ನಂ.548‘ಬಿ’ ಮಹಾರಾಷ್ಟ್ರ ಗಡಿಯಿಂದ ಇಂಡಿ ತಾಲ್ಲೂಕಿನ ಮಣ್ಣೂರ, ಹಿರೇಬೇವನೂರ, ಇಂಡಿ(ಬೈಪಾಸ್), ರೂಗಿ, ಅಥರ್ಗಾ(ಬೈಪಾಸ್), ನಾಗಠಾಣ, ಅಲಿಯಾಬಾದ್ ಮೂಲಕ ಹಾದು ವಿಜಯಪುರ ನಗರದ ವರ್ತುಲ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರದ ವರೆಗೆ 82 ಕಿ.ಮೀ. ರಸ್ತೆಯನ್ನು ₹650 ಕೋಟಿಯಲ್ಲಿ ನಿರ್ಮಾಣ ಮಾಡಲು ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.</p>.<p>ವಿಜಯಪುರದ ಗಣೇಶ ನಗರ ಜಂಕ್ಷನ್ಗೆ(ಮನಗೂಳಿ ರೋಡ್) ₹ 50 ಕೋಟಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಾಮಗಾರಿ ಮಂಜೂರಾತಿ ಹಂತದಲ್ಲಿದ್ದು, ಶೀಘ್ರದಲ್ಲೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.</p>.<p class="Subhead"><strong>ಷಟ್ಪಥ ಶೀಘ್ರ:</strong></p>.<p>ಸೋಲಾಪುರ–ವಿಜಯಪುರ ನಡುವೆ ವಾಹನಗಳ ದಟ್ಟಣೆ ಅಧಿಕ ಇರುವುದರಿಂದ ಈಗಿರುವ ಚತುಷ್ಪಥವನ್ನು ಷಟ್ಪಥವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.</p>.<p class="Subhead"><strong>ಆಗಬೇಕಿದೆ:</strong></p>.<p>ಶಿರಡೋಣ–ಲಿಂಗಸೂಗೂರು ನಡುವಿನ 180 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮಾಡುವುದು ಬಾಕಿ ಇದೆ. ಈ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಶೀಘ್ರದಲ್ಲೇ ಈ ಹೆದ್ದಾರಿ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ವಿಜಯ್ ಜೋಶಿ ಇದ್ದರು.</p>.<p class="Briefhead"><strong>‘ಕೆಲವರ ಪಾಲಿಗೆ ನಾನು ಸಿಂಹಸ್ವಪ್ನ’</strong></p>.<p><strong>ವಿಜಯಪುರ: ‘</strong>ಜಿಲ್ಲೆಯಲ್ಲಿ ಕೆಲವರಿಗೆ ನಾನು ಸಿಂಹಸ್ವಪ್ನವಾಗಿದ್ದೇನೆ’ ಎಂದುಸಂಸದ ರಮೇಶ ಜಿಗಜಿಣಗಿ ಹೇಳಿದರು.</p>.<p>ಜಿಲ್ಲೆಯಲ್ಲಿ ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ಸದಾ ನನ್ನನ್ನು ಟೀಕಿಸುತ್ತಿರುತ್ತಾರೆ. ಅವರಿಗೆ ಸದ್ದುಗದ್ದಲವಿಲ್ಲದೇ ಅಭಿವೃದ್ಧಿ ಕಾರ್ಯಗಳ ಮೂಲಕ ಪ್ರತ್ಯುತ್ತರ ನೀಡುತ್ತಿದ್ದೇನೆ ಎಂದರು.</p>.<p>ಗೋಳಗುಮ್ಮಟ, ಉಪಲಿ ಬುರ್ಜ್ ಕಟ್ಟಿಸಿರುವುದು ನಾನೇ ಎಂದು ಸುಳ್ಳು ಹೇಳುವುದಿಲ್ಲ. ಶೌಚಾಲಯ ಕಟ್ಟಿಸಿ ಹೆಸರು ಬರೆಸಿಕೊಳ್ಳುವಷ್ಟು ಕನಿಷ್ಠ ಪ್ರಚಾರಕ್ಕೆ ನಾನು ಎಂದೂ ಹೋಗಿಲ್ಲ ಎಂದು ತಿರುಗೇಟು ನೀಡಿದರು.</p>.<p>‘ಎಂದೂ ಅಧಿಕಾರದ ಹಿಂದೆ ಹೋಗಬೇಡ. ಅಧಿಕಾರ ಎಂಬುದು ಬಿಸಿಲ ಕುದುರೆ ಇದ್ದಂತೆ’ ಎಂದುನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಹೇಳುತ್ತಿದ್ದರು. ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ನಾನು ಎಂದೂ ಅಧಿಕಾರದ ಹಿಂದೆ ಹೋಗಿಲ್ಲ. ಅಧಿಕಾರವೇ ನನ್ನ ಹಿಂದೆ ಬಂದಿದೆ ಎಂದು ಹೇಳಿದರು.</p>.<p>ಸ್ವಾತಂತ್ರ್ಯ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಪ್ರಥಮ ಪ್ರಧಾನಿ ನೆಹರೂ ಹೆಸರು, ಭಾವಚಿತ್ರ ಕೈಬಿಟ್ಟಿರುವ ವಿಚಾರ ಹಾಗೂ ಅಂಬೇಡ್ಕರ್ಗಿಂತ ಸಾವರ್ಕರ್ಗೆ ಮೊದಲ ಆದ್ಯತೆ ನೀಡಿರುವರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಜಿಲ್ಲೆಯಲ್ಲಿ ಹಾದುಹೋಗಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆಕೇಂದ್ರ ಸರ್ಕಾರವು ₹1020 ಕೋಟಿ ಹೆಚ್ಚುವರಿ ಅನುದಾನ ನೀಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.</p>.<p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 548ಬಿ ವಿಜಯಪುರ ಪ್ರವಾಸಿ ಮಂದಿರ ಸಮೀಪದ ವೃತ್ತ(ಇಟಗಿ ಪೆಟ್ರೋಲ್ ಪಂಪ್)ನಿಂದ ತೆಲಸಂಗ ಕ್ರಾಸ್ ವರೆಗೆ 39 ಕಿ.ಮೀ ರಸ್ತೆಯನ್ನು ₹250 ಕೋಟಿ ಮೊತ್ತದಲ್ಲಿ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.</p>.<p>ರಾಷ್ಟ್ರೀಯ ಹೆದ್ದಾರಿ ನಂ.561 ‘ಎ’ ಮಹಾರಾಷ್ಟ್ರ ಗಡಿಯಿಂದ ಸಿದ್ದಾಪುರ–ಅರಕೇರಿ–ವಿಜಯಪುರ ವರೆಗೆ 12 ಕಿ.ಮೀ. ರಸ್ತೆಯನ್ನು ₹69.53 ಕೋಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.</p>.<p>ರಾಷ್ಟ್ರೀಯ ಹೆದ್ದಾರಿ ನಂ.548‘ಬಿ’ ಮಹಾರಾಷ್ಟ್ರ ಗಡಿಯಿಂದ ಇಂಡಿ ತಾಲ್ಲೂಕಿನ ಮಣ್ಣೂರ, ಹಿರೇಬೇವನೂರ, ಇಂಡಿ(ಬೈಪಾಸ್), ರೂಗಿ, ಅಥರ್ಗಾ(ಬೈಪಾಸ್), ನಾಗಠಾಣ, ಅಲಿಯಾಬಾದ್ ಮೂಲಕ ಹಾದು ವಿಜಯಪುರ ನಗರದ ವರ್ತುಲ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರದ ವರೆಗೆ 82 ಕಿ.ಮೀ. ರಸ್ತೆಯನ್ನು ₹650 ಕೋಟಿಯಲ್ಲಿ ನಿರ್ಮಾಣ ಮಾಡಲು ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.</p>.<p>ವಿಜಯಪುರದ ಗಣೇಶ ನಗರ ಜಂಕ್ಷನ್ಗೆ(ಮನಗೂಳಿ ರೋಡ್) ₹ 50 ಕೋಟಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಾಮಗಾರಿ ಮಂಜೂರಾತಿ ಹಂತದಲ್ಲಿದ್ದು, ಶೀಘ್ರದಲ್ಲೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.</p>.<p class="Subhead"><strong>ಷಟ್ಪಥ ಶೀಘ್ರ:</strong></p>.<p>ಸೋಲಾಪುರ–ವಿಜಯಪುರ ನಡುವೆ ವಾಹನಗಳ ದಟ್ಟಣೆ ಅಧಿಕ ಇರುವುದರಿಂದ ಈಗಿರುವ ಚತುಷ್ಪಥವನ್ನು ಷಟ್ಪಥವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.</p>.<p class="Subhead"><strong>ಆಗಬೇಕಿದೆ:</strong></p>.<p>ಶಿರಡೋಣ–ಲಿಂಗಸೂಗೂರು ನಡುವಿನ 180 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮಾಡುವುದು ಬಾಕಿ ಇದೆ. ಈ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಶೀಘ್ರದಲ್ಲೇ ಈ ಹೆದ್ದಾರಿ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ವಿಜಯ್ ಜೋಶಿ ಇದ್ದರು.</p>.<p class="Briefhead"><strong>‘ಕೆಲವರ ಪಾಲಿಗೆ ನಾನು ಸಿಂಹಸ್ವಪ್ನ’</strong></p>.<p><strong>ವಿಜಯಪುರ: ‘</strong>ಜಿಲ್ಲೆಯಲ್ಲಿ ಕೆಲವರಿಗೆ ನಾನು ಸಿಂಹಸ್ವಪ್ನವಾಗಿದ್ದೇನೆ’ ಎಂದುಸಂಸದ ರಮೇಶ ಜಿಗಜಿಣಗಿ ಹೇಳಿದರು.</p>.<p>ಜಿಲ್ಲೆಯಲ್ಲಿ ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ಸದಾ ನನ್ನನ್ನು ಟೀಕಿಸುತ್ತಿರುತ್ತಾರೆ. ಅವರಿಗೆ ಸದ್ದುಗದ್ದಲವಿಲ್ಲದೇ ಅಭಿವೃದ್ಧಿ ಕಾರ್ಯಗಳ ಮೂಲಕ ಪ್ರತ್ಯುತ್ತರ ನೀಡುತ್ತಿದ್ದೇನೆ ಎಂದರು.</p>.<p>ಗೋಳಗುಮ್ಮಟ, ಉಪಲಿ ಬುರ್ಜ್ ಕಟ್ಟಿಸಿರುವುದು ನಾನೇ ಎಂದು ಸುಳ್ಳು ಹೇಳುವುದಿಲ್ಲ. ಶೌಚಾಲಯ ಕಟ್ಟಿಸಿ ಹೆಸರು ಬರೆಸಿಕೊಳ್ಳುವಷ್ಟು ಕನಿಷ್ಠ ಪ್ರಚಾರಕ್ಕೆ ನಾನು ಎಂದೂ ಹೋಗಿಲ್ಲ ಎಂದು ತಿರುಗೇಟು ನೀಡಿದರು.</p>.<p>‘ಎಂದೂ ಅಧಿಕಾರದ ಹಿಂದೆ ಹೋಗಬೇಡ. ಅಧಿಕಾರ ಎಂಬುದು ಬಿಸಿಲ ಕುದುರೆ ಇದ್ದಂತೆ’ ಎಂದುನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಹೇಳುತ್ತಿದ್ದರು. ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ನಾನು ಎಂದೂ ಅಧಿಕಾರದ ಹಿಂದೆ ಹೋಗಿಲ್ಲ. ಅಧಿಕಾರವೇ ನನ್ನ ಹಿಂದೆ ಬಂದಿದೆ ಎಂದು ಹೇಳಿದರು.</p>.<p>ಸ್ವಾತಂತ್ರ್ಯ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಪ್ರಥಮ ಪ್ರಧಾನಿ ನೆಹರೂ ಹೆಸರು, ಭಾವಚಿತ್ರ ಕೈಬಿಟ್ಟಿರುವ ವಿಚಾರ ಹಾಗೂ ಅಂಬೇಡ್ಕರ್ಗಿಂತ ಸಾವರ್ಕರ್ಗೆ ಮೊದಲ ಆದ್ಯತೆ ನೀಡಿರುವರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>