ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಕನ್ನಡ ಅವನತಿ ತಡೆಗೆ ಎಚ್ಚರ ಅಗತ್ಯ: ಪುರುಷೋತ್ತಮ ಬಿಳಿಮಲೆ

Published : 28 ನವೆಂಬರ್ 2025, 5:59 IST
Last Updated : 28 ನವೆಂಬರ್ 2025, 5:59 IST
ಫಾಲೋ ಮಾಡಿ
Comments
ಒಂದು ಕಾಲದಲ್ಲಿ ಸಂಸ್ಕೃತ ಮಂತ್ರಗಳನ್ನು ಪಠಿಸುತ್ತಾ ಪೂಜಾರಿಗಳು ದೇವರನ್ನು ಪೂಜಿಸುತ್ತಿದ್ದರು. ಆದರೆ 12ನೇ ಶತಮಾನದಲ್ಲಿ ವಚನಕಾರರು ನಮ್ಮ ಭಾಷೆಯನ್ನೇ ದೇವರಿಗೆ ಕಲಿಸಿ ಕನ್ನಡದಲ್ಲೇ ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಂಡರು 
ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ  
ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಪ್ರತಿದಿನ ‘ಪ್ರಜಾವಾಣಿ’ ದಿನಪತ್ರಿಕೆಯನ್ನು ಎರಡು ತಾಸು ಓದಬೇಕು
–ಡಾ.ಎಚ್.ಆರ್.ಸ್ವಾಮಿ ಅಧ್ಯಕ್ಷ ನೇಗಿಲಯೋಗಿ ಟ್ರಸ್ಟ್‌ ಬೆಂಗಳೂರು
- ‘ಕೇಂದ್ರದ ನೇಮಕಾತಿ; ಕನ್ನಡಿಗರಿಗೆ ಅನ್ಯಾಯ
’ ವಿಜಯಪುರ: ‘ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಕನ್ನಡಿಗರಿಗೆ ತೀವ್ರ ಅನ್ಯಾಯವಾಗುತ್ತಿದ್ದು  ಯುಪಿಎಸ್‌ಸಿ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಕ್ರಮಕೈಗೊಳ್ಳಬೇಕು’ ಎಂದು ವಿಜಯಪುರದ ಚಾಣಕ್ಯ ಕರಿಯರ್‌ ಅಕಾಡೆಮಿ ಸಂಸ್ಥಾಪಕ ಎಂ.ಎನ್.ಬಿರಾದಾರ ಆಗ್ರಹಿಸಿದರು. ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ನೀಡಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಎಂಪ್ಲಾಮೆಂಟ್‌ ನ್ಯೂಸ್‌ ಕನ್ನಡದಲ್ಲಿ ಪ್ರಕಟವಾಗಬೇಕು ಇಂಡಿಯಾ ಹ್ಯಾಂಡ್‌ಬುಕ್‌ ಕನ್ನಡದಲ್ಲಿ ಪ್ರಕಟವಾಗಬೇಕು ರಾಜ್ಯದ ಎಲ್ಲ ಜಿಲ್ಲೆಗಳ ಗೆಜೆಟಿಯರ್‌ ಪ್ರಕಟವಾಗಬೇಕು ಎನ್‌ಡಿಎ ಬ್ಯಾಂಕ್‌ ಪರೀಕ್ಷೆಗಳು ಕನ್ನಡದಲ್ಲಿ ನಡೆಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು. 6 ರಿಂದ 12ನೇ ತರಗತಿ ವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳು ಕನ್ನಡದಲ್ಲಿ ಲಭಿಸಬೇಕು ಕನ್ನಡ ವಿಶ್ವಕೋಶ ಪರಿಷ್ಕೃತವಾಗಬೇಕು ಸರ್ಕಾರವೇ ಸ್ಪರ್ಧಾತ್ಮಕ ತರಬೇತಿ ಕೇಂದ್ರವನ್ನು ಆರಂಭಿಸಬೇಕು ಎಂಬ ಬೇಡಿಕೆಯ ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ ಬಿಳಿಮಲೆ ಈ ವಿಷಯಗಳ ಬಗ್ಗೆ ನಮ್ಮ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT