<p><strong>ವಿಜಯಪುರ: </strong>ತಾಲ್ಲೂಕಿನ ಮಹಲ್ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳು ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.</p>.<p>ಲಾಕ್ ಡೌನ್ ಸಂದರ್ಭಕ್ಕಿಂತ ಮೊದಲು ಹಳ್ಳಿಗೆ ಬರುತ್ತಿದ್ದ ಬಸ್ ಈಗ ಬರುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ದಿನವೂ ಕಾಲೇಜು ತಲುಪಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.</p>.<p>ದಿನವೂ ಆಟೊ ರಿಕ್ಷಾಗಳಿಗೆ ಅಧಿಕ ಹಣ ಕೊಟ್ಟು ಬರಬೇಕಾಗಿದೆ. ಕೊರೊನಾ ಲಾಕ್ಡೌನ್ ಪರಿಸ್ಥಿತಿಯಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.</p>.<p>ವಿದ್ಯಾರ್ಥಿಗಳು ಕೆಲಸ ಮಾಡಿ ಆಟೊಗೆ ದುಡ್ಡು ಕೊಟ್ಟು ಕಾಲೇಜಿಗೆ ಬರುತ್ತಿದ್ದಾರೆ. ಈ ಕೂಡಲೇ ಸಾರಿಗೆ ಇಲಾಖೆ ಮಹಲ್ ಗ್ರಾಮಕ್ಕೆ ಲಾಕ್ ಡೌನ್ ಮೊದಲು ಓಡಿಸುತ್ತಿದ್ದಂತೆ ಈಗ ಮಹಲ್ ಹಳ್ಳಿಗೆ ಬಸ್ ಕಳುಹಿಸಬೇಕು ಎಂದುಸಾರಿಗೆ ನಿಯಂತ್ರಕರಿಗೆ ಮನವಿ ಸಲ್ಲಿಸಿದರು.</p>.<p>ಸಂಘಟನೆಯ ಮನವಿಗೆ ಸ್ಪಂದಿಸಿದಸಾರಿಗೆ ನಿಯಂತ್ರಕರು, ನಾಳೆಯಿಂದಲೇ ಮಹಲ್ ಹಳ್ಳಿಗೆ ಬಸ್ ಕಳುಹಿಸುವುದಾಗಿ ಭರವಸೆ ನೀಡಿದರು.</p>.<p>ಜಿಲ್ಲಾ ಕಾರ್ಯದರ್ಶಿಸುರೇಖಾ ಕಡಪಟ್ಟಿ, ಸಂಘಟನೆಯ ಪ್ರಮುಖರಾದ ಭೀಮಣ್ಣ ವಾಲಿಕಾರ, ಶರಣು ವಾಲಿಕಾರ, ಬಸವರಾಜ, ಮಲ್ಲಮ್ಮ, ಲಕ್ಷ್ಮಿ, ಪ್ರಿಯಾ, ಪುನೀತ, ಶಾಂತಪ್ಪ ಕೊಂಡಗುಳಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ತಾಲ್ಲೂಕಿನ ಮಹಲ್ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳು ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.</p>.<p>ಲಾಕ್ ಡೌನ್ ಸಂದರ್ಭಕ್ಕಿಂತ ಮೊದಲು ಹಳ್ಳಿಗೆ ಬರುತ್ತಿದ್ದ ಬಸ್ ಈಗ ಬರುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ದಿನವೂ ಕಾಲೇಜು ತಲುಪಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.</p>.<p>ದಿನವೂ ಆಟೊ ರಿಕ್ಷಾಗಳಿಗೆ ಅಧಿಕ ಹಣ ಕೊಟ್ಟು ಬರಬೇಕಾಗಿದೆ. ಕೊರೊನಾ ಲಾಕ್ಡೌನ್ ಪರಿಸ್ಥಿತಿಯಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.</p>.<p>ವಿದ್ಯಾರ್ಥಿಗಳು ಕೆಲಸ ಮಾಡಿ ಆಟೊಗೆ ದುಡ್ಡು ಕೊಟ್ಟು ಕಾಲೇಜಿಗೆ ಬರುತ್ತಿದ್ದಾರೆ. ಈ ಕೂಡಲೇ ಸಾರಿಗೆ ಇಲಾಖೆ ಮಹಲ್ ಗ್ರಾಮಕ್ಕೆ ಲಾಕ್ ಡೌನ್ ಮೊದಲು ಓಡಿಸುತ್ತಿದ್ದಂತೆ ಈಗ ಮಹಲ್ ಹಳ್ಳಿಗೆ ಬಸ್ ಕಳುಹಿಸಬೇಕು ಎಂದುಸಾರಿಗೆ ನಿಯಂತ್ರಕರಿಗೆ ಮನವಿ ಸಲ್ಲಿಸಿದರು.</p>.<p>ಸಂಘಟನೆಯ ಮನವಿಗೆ ಸ್ಪಂದಿಸಿದಸಾರಿಗೆ ನಿಯಂತ್ರಕರು, ನಾಳೆಯಿಂದಲೇ ಮಹಲ್ ಹಳ್ಳಿಗೆ ಬಸ್ ಕಳುಹಿಸುವುದಾಗಿ ಭರವಸೆ ನೀಡಿದರು.</p>.<p>ಜಿಲ್ಲಾ ಕಾರ್ಯದರ್ಶಿಸುರೇಖಾ ಕಡಪಟ್ಟಿ, ಸಂಘಟನೆಯ ಪ್ರಮುಖರಾದ ಭೀಮಣ್ಣ ವಾಲಿಕಾರ, ಶರಣು ವಾಲಿಕಾರ, ಬಸವರಾಜ, ಮಲ್ಲಮ್ಮ, ಲಕ್ಷ್ಮಿ, ಪ್ರಿಯಾ, ಪುನೀತ, ಶಾಂತಪ್ಪ ಕೊಂಡಗುಳಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>