<p><strong>ವಿಜಯಪುರ:</strong> ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಳಿಕೋಟೆಯಿಂದ ತಲೆ ಮೇಲೆ ಕಲ್ಲುಹೊತ್ತು ಪಾದಯಾತ್ರೆ ಮೂಲಕ ವಿಜಯಪುರಕ್ಕೆ ಸೋಮವಾರ ತಲುಪಿದ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡರು ಜಿಲ್ಲಾಧಿಕಾರಿ ವಿಜಯಮಹಾಂತೇಶ್ ಅವರಿಗೆ ಮನವಿ ಸಲ್ಲಿಸಿದರು.</p>.<p>ತಾಳಿಕೋಟೆಯ ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲ್ಮಟ್ಟದ ಸೇತುವೆಯನ್ನು ಬಸ್ ನಿಲ್ದಾಣದ ವರೆಗೆ ಮಾಡಬೇಕು ಹಾಗೂ ಪುರಸಭೆಯಲ್ಲಿನ ಭ್ರಷ್ಟಾಚಾರದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.</p>.<p>ಜಿ+1 ಮಾದರಿಯ 600 ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಬಡವರು ಸಾಲ ಮಾಡಿ ಪುರಸಭೆಗೆ ಕೋಟ್ಯಂತರ ರೂಪಾಯಿ ಭರಣಾ ಮಾಡಿ ಐದು ವರ್ಷಗಳು ಗತಿಸುತ್ತಾ ಬಂದಿದ್ದು, ಇತ್ತಕಡೆ ಮನೆಯೂ ಇಲ್ಲದೆ ಮತ್ತು ಹಣವನ್ನು ಕಳೆದುಕೊಂಡು, ಮಾಡಿದ ಸಾಲದ ಬಡ್ಡಿ ಕಟ್ಟಲಾಗದೆ ಪರಿತಪಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.</p>.<p>ತಾಳಿಕೋಟಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ,ಸಾಮಾಜಿಕ ಕಾರ್ಯಕರ್ತ ನದಿಂ ಕಡು ಅವರು ತಲೆಮೇಲೆ ಕಲ್ಲು ಹೊತ್ತುಕೊಂಡು ತಾಳಿಕೋಟೆಯಿಂದ ವಿಜಯಪುರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.</p>.<p>ಮಾಜಿ ಸಚಿವ ಸಿ.ಎಸ್. ನಾಡಗೌಡ, ಸುರೇಶ ನಾಡಗೌಡ, ಚಿನ್ನು ನಾಡಗೌಡ, ನಿಂಗನಗೌಡ ಅಸ್ಕಿ, ಸಂಗಮೇಶ ಛಾಯಾಗೋಳ, ಮಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್, ಆರಿಫ್ ಹೊನ್ನುಟಗಿ, ಜಗದೀಶ ಡೇರೆದ, ಕಾಸಿಂ ಪಟೇಲ್ ಸುರೇಶ ಹಜೇರಿ, ಅಕ್ಕಮಹಾದೇವಿ ಕಟ್ಟಿಮನಿ, ಸತ್ತಾರ ಅವಟಿ, ಮೋದಿನ್ ನಗಾರ್ಚಿ, ಮುನ್ನಾ ಅರ್ಜುಣಗಿ, ಆನಂದ ಗುರಡ್ಡಿ, ಪುರಸಭೆ ಸ್ಥಾಯಿ ಸಮಿುತಿ ಅಧ್ಯಕ್ಷ ಪರಶುರಾಮ ತಂಗಡಗಿ, ಸುರೇಶಕುಮಾರ ಹಜೇರಿ, ಪತ್ತೇಮಹಮ್ಮದ ನಾಯ್ಕೋಡಿ, ಸುರೇಶ ಹಜೇರಿ, ರವಿ ಕಟ್ಟಿಮನಿ, ಸುಭಾಸ ಗೌಡಗೇರಿ, ನಿಂಗನಗೌಡ ದೇಸಾಯಿ, ಬಿ.ಎಸ್. ಗಬಸಾವಳಗಿ,ಶಿವರಾಜ ನಾಗೂರ,ಜೈಭೀಮ ಮುತ್ತಗಿ, ಆರ್.ಟಿ.ಪಾಟೀಲ ಪ್ರತಿಭಟನೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಳಿಕೋಟೆಯಿಂದ ತಲೆ ಮೇಲೆ ಕಲ್ಲುಹೊತ್ತು ಪಾದಯಾತ್ರೆ ಮೂಲಕ ವಿಜಯಪುರಕ್ಕೆ ಸೋಮವಾರ ತಲುಪಿದ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡರು ಜಿಲ್ಲಾಧಿಕಾರಿ ವಿಜಯಮಹಾಂತೇಶ್ ಅವರಿಗೆ ಮನವಿ ಸಲ್ಲಿಸಿದರು.</p>.<p>ತಾಳಿಕೋಟೆಯ ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲ್ಮಟ್ಟದ ಸೇತುವೆಯನ್ನು ಬಸ್ ನಿಲ್ದಾಣದ ವರೆಗೆ ಮಾಡಬೇಕು ಹಾಗೂ ಪುರಸಭೆಯಲ್ಲಿನ ಭ್ರಷ್ಟಾಚಾರದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.</p>.<p>ಜಿ+1 ಮಾದರಿಯ 600 ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಬಡವರು ಸಾಲ ಮಾಡಿ ಪುರಸಭೆಗೆ ಕೋಟ್ಯಂತರ ರೂಪಾಯಿ ಭರಣಾ ಮಾಡಿ ಐದು ವರ್ಷಗಳು ಗತಿಸುತ್ತಾ ಬಂದಿದ್ದು, ಇತ್ತಕಡೆ ಮನೆಯೂ ಇಲ್ಲದೆ ಮತ್ತು ಹಣವನ್ನು ಕಳೆದುಕೊಂಡು, ಮಾಡಿದ ಸಾಲದ ಬಡ್ಡಿ ಕಟ್ಟಲಾಗದೆ ಪರಿತಪಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.</p>.<p>ತಾಳಿಕೋಟಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ,ಸಾಮಾಜಿಕ ಕಾರ್ಯಕರ್ತ ನದಿಂ ಕಡು ಅವರು ತಲೆಮೇಲೆ ಕಲ್ಲು ಹೊತ್ತುಕೊಂಡು ತಾಳಿಕೋಟೆಯಿಂದ ವಿಜಯಪುರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.</p>.<p>ಮಾಜಿ ಸಚಿವ ಸಿ.ಎಸ್. ನಾಡಗೌಡ, ಸುರೇಶ ನಾಡಗೌಡ, ಚಿನ್ನು ನಾಡಗೌಡ, ನಿಂಗನಗೌಡ ಅಸ್ಕಿ, ಸಂಗಮೇಶ ಛಾಯಾಗೋಳ, ಮಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್, ಆರಿಫ್ ಹೊನ್ನುಟಗಿ, ಜಗದೀಶ ಡೇರೆದ, ಕಾಸಿಂ ಪಟೇಲ್ ಸುರೇಶ ಹಜೇರಿ, ಅಕ್ಕಮಹಾದೇವಿ ಕಟ್ಟಿಮನಿ, ಸತ್ತಾರ ಅವಟಿ, ಮೋದಿನ್ ನಗಾರ್ಚಿ, ಮುನ್ನಾ ಅರ್ಜುಣಗಿ, ಆನಂದ ಗುರಡ್ಡಿ, ಪುರಸಭೆ ಸ್ಥಾಯಿ ಸಮಿುತಿ ಅಧ್ಯಕ್ಷ ಪರಶುರಾಮ ತಂಗಡಗಿ, ಸುರೇಶಕುಮಾರ ಹಜೇರಿ, ಪತ್ತೇಮಹಮ್ಮದ ನಾಯ್ಕೋಡಿ, ಸುರೇಶ ಹಜೇರಿ, ರವಿ ಕಟ್ಟಿಮನಿ, ಸುಭಾಸ ಗೌಡಗೇರಿ, ನಿಂಗನಗೌಡ ದೇಸಾಯಿ, ಬಿ.ಎಸ್. ಗಬಸಾವಳಗಿ,ಶಿವರಾಜ ನಾಗೂರ,ಜೈಭೀಮ ಮುತ್ತಗಿ, ಆರ್.ಟಿ.ಪಾಟೀಲ ಪ್ರತಿಭಟನೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>