ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿರುವ ಜ್ಞಾನ ಭಂಡಾರದಲ್ಲಿ ಲಭ್ಯವಿರುವ ಸಂತ ಸಿದ್ದೇಶ್ವರ ಶ್ರೀಗಳು ಮತ್ತು ‘ವೇದಾಂತ ಕೇಸರಿ’ ಮಲ್ಲಿಕಾರ್ಜುನ ಶ್ರೀಗಳ ಫೋಟೊಗಳು ಹಾಗೂ ವಿವಿಧ ಗ್ರಂಥಗಳು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಆಶ್ರಮ ರಸ್ತೆಯ ವೃತ್ತವೊಂದಲ್ಲಿ ಸ್ಥಳಿಯರು ಸಿದ್ದೇಶ್ವರ ಶ್ರೀಗಳ ಫೋಟೊವನ್ನು ಇಟ್ಟು ಶ್ರೀಗಳ ಹೆಸರನ್ನು ನಾಮಕರಣ ಮಾಡಿರುವುದು –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಇರುವ ಆಟೋ ನಿಲ್ದಾಣದ ಒಳಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಪರೂಪದ ಫೋಟೊಗಳನ್ನು ಪ್ರದರ್ಶನಕ್ಕೆ ಇಟ್ಟು ಶ್ರೀಗಳ ಅಂತಿಮ ಅಭಿವಂದನಾ ಪತ್ರದಲ್ಲಿ ಉಲ್ಲೇಖಿಸಿದ್ದ ಅಲ್ಲಮ ಪ್ರಭುವಿನ ವಚನವನ್ನು ಬರೆಯಲಾಗಿದೆ. –ಪ್ರಜಾವಾಣಿ ಚಿತ್ರ

ಶ್ರೇಷ್ಠ ಸಂತನಿದ್ದ ಆಶ್ರಮವನ್ನು ಮೂಲ ಆಶಯಕ್ಕೆ ಚ್ಯುತಿಯಾಗದಂತೆ ಜತನ ಮಾಡಬೇಕಿದೆ. ತತ್ವ ಜ್ಞಾನಾಧಾರಿತ ಚಟುವಟಿಕೆಗಳಿಗೆ ಆದ್ಯತೆ ಸಿಗಬೇಕಿದೆ. ಆಶ್ರಮದ ವಾತಾವರಣ ಕೆಡದಂತೆ ಕಾಪಾಡಬೇಕಿದೆ
ರವೀಂದ್ರ ಲೋಣಿ ಶ್ರೀಗಳ ಒಡನಾಡಿ ‘ಅವರಿಲ್ಲ ಎನಿಸಿಲ್ಲ....’
‘ಶ್ರೀಗಳು ಭೌತಿಕವಾಗಿ ಇಲ್ಲದೆ ಎರಡು ವರ್ಷ ಆಯ್ತು. ಆದರೆ ಅವರಿಲ್ಲ ಎಂದು ನಮಗೆ ಎಂದೂ ಅನಿಸಿಲ್ಲ. ಇಲ್ಲೇ ಯಾವುದೋ ಹಳ್ಳಿಗೆ ಪ್ರವಚನಕ್ಕೆ ಹೋಗಿದ್ದಾರೆ ಅನಿಸುತ್ತಿದೆ. ಅಪ್ಪಗೋಳು ಇಲ್ಲ ಎನಿಸುತ್ತಿಲ್ಲ. ಅವರ ಶಕ್ತಿ ನಮ್ಮಲ್ಲಿ ಕೆಲಸ ಮಾಡುತ್ತಿದೆ’ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಹೇಳುತ್ತಾರೆ. ‘ಶ್ರೀಗಳ ತತ್ವ ಚಿಂತನೆ ವಿಚಾರಧಾರೆಗಳು ಜನಮಾನಸದಿಂದ ಮರೆಯಾಗಬಾರದು ಎಂಬ ಕಾರಣಕ್ಕೆ ಗುರು ನಮನ ಕಾರ್ಯಕ್ರಮ ನಡೆಸಿದ್ದೇವೆ. ಶ್ರೀಗಳು ಅವರ ಗುರುಗಳಿಗಾಗಿ ಗುರು ನಮನ ಕಾರ್ಯಕ್ರಮ ಮಾಡುತ್ತಿದ್ದರು. ಈಗ ನಮ್ಮ ಗುರುಗಳದ್ದು ನಾವು ಮಾಡುತ್ತಿದ್ದೇವೆ. ಇದು ನಮ್ಮ ಕರ್ತವ್ಯ. ಶ್ರೀಗಳು ಬಯಸದಿದ್ದರೂ ನಮ್ಮ ಗುರುಗಳ ಆರಾಧನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಕೆಲವೊಬ್ಬರು ಶ್ರೀಗಳು ನೆನಪುಳಿಯಬೇಕು ಎಂಬ ಕಾರ್ಯದಲ್ಲಿ ತೊಡಗಿದ್ದಾರೆ. ಶ್ರೀಗಳು ಜನರ ಮನದಲ್ಲಿ ಸದಾಕಾಲ ಉಳಿಯಬೇಕು. ಹಾಗಂತ ಅವರ ತತ್ವಕ್ಕೆ ವಿರುದ್ಧವಾದುದ್ದು ಮಾಡಲು ಅವಕಾಶವಿಲ್ಲ. ಶ್ರೀಗಳು ಯಾವುದು ಮಾಡಬಾರದು ಎಂದಿದ್ದರೋ ಅದನ್ನು ಮಾಡಬಾರದು ಜನರೇ ಅದನ್ನು ತಿಳಿದುಕೊಳ್ಳಬೇಕು’ ಎನ್ನುತ್ತಾರೆ.