ಮುಖ್ಯರಸ್ತೆಯಲ್ಲಿರುವ ದೊಡ್ಡ ಅಂಗಡಿಗಳಿಗೆ ಬರುವ ದಾಸ್ತಾನಿನ ದೊಡ್ಡ ವಾಹನಗಳು ರಾತ್ರಿ ವೇಳೆ ಮಾತ್ರ ಬರಲಿ. ಹಗಲಲ್ಲಿ ಬಸ್ ನಿಲ್ದಾಣದ ಮಾರ್ಗದಲ್ಲಿ ಲಾರಿಗಳು ನಿಂತು ವಾಹನ ದಟ್ಟಣೆಯಾಗುತ್ತದೆ. ಜತೆಗೆ ಪಾದಚಾರಿ ಮಾರ್ಗವಿಲ್ಲದ್ದರಿಂದ ಜನರು ಯಾತನೆ ಪಡುವಂತಾಗಿದೆ.
ಸಂಜು ಅಳೆಗಾರ , ಸಾಮಾಜಿಕ ಕಾರ್ಯಕರ್ತ
ತಾಲ್ಲೂಕು ಕೇಂದ್ರ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಸರ್ಕಾರಿ ಇಲಾಖೆಗಳ ಕಚೇರಿಗಳೂ ಇಲ್ಲ. ಕನಿಷ್ಠ ತಾಲ್ಲೂಕು ಕೇಂದ್ರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಜನದಟ್ಟಣೆಗೆ ಅನುಕೂಲ ಕಲ್ಪಿಸಲು ಪಾದಚಾರಿ ಮಾರ್ಗದ ವ್ಯವಸ್ಥೆಯೂ ಮಾಡದಿರುವುದು ನಾಚಿಕೆಗೇಡು .
ನಾಗೇಶ ಗದ್ದಗಿ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ
ವಾಹನ ದಟ್ಟಣೆ ವೇಗವಾಗಿ ಹೋಗುವ ವಾಹನಗಳಿಂದ ರಸ್ತೆಯಲ್ಲಿ ನಡೆದಾಡುವ ಜನರಿಗೆ ರಕ್ಷಣೆ ಮತ್ತು ಅನುಕೂಲಕ್ಕೆ ಸಂಬಂಧಿತರು ಶೀಘ್ರವೇ ಪಾದಚಾರಿ ಮಾರ್ಗದ ವ್ಯಸವ್ಥೆ ಮಾಡಬೇಕು.