<p><strong>ಗುರುಮಠಕಲ್</strong>: ಪಟ್ಟಣದ ವಿವಿಧೆಡೆ ಹಾಗೂ ತಾಲ್ಲೂಕಿನ ಪ್ರಮುಖ ದೇವಸ್ಥಾನಗಳು ಹಾಗೂ ಗ್ರಾಮಗಳ ಹನುಮ ಮಂದಿರಗಳಲ್ಲಿ ಬುಧವಾರ ರಾಮ ನವಮಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಕಲ್ಯಾಣೋತ್ಸವ, ಅಭಿಷೇಕ ಸೇವೆ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಜತೆಗೆ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗಿದವು.</p>.<p><strong>ಹನುಮ ಮಂದಿರ:</strong> ಪಟ್ಟಣದ ಬಸ್ ನಿಲ್ದಾಣದ ಎದುರಿನ ಹನುಮ ಮಂದಿರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ರಾಮ ನವಮಿಯ ಸಂಭ್ರಮ ಆರಂಭವಾಗಿತ್ತು. ಬೆಳಿಗ್ಗೆ ದೇವಸ್ಥಾನದ ಮೂಲ ವಿರಾಟ ವಿಶೇಷ ಅಭಿಷೇಕ, ಅಲಂಕಾರ, ಆರತಿ ಸೇವೆಗಳೊಂದಿ ರಾಮ ನವಮಿ ಉತ್ಸವವು ಆರಂಭಗೊಂಡಿತು.</p>.<p>ಸೀತಾ, ಶ್ರೀರಾಮ, ಲಕ್ಷ್ಮಣರ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಅಲಂಕಾರದ ನಂತರ ಕಲ್ಯಾಣೋತ್ಸವ ಜರುಗಿತು. ಕಲ್ಯಾಣೋತ್ಸವದ ನಂತರ ಉಂಜಿಲ ಸೇವೆ (ಉಯ್ಯಾಲೆ ಸೇವೆ), ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರುಗಿತು. ಭಜನೆ ಮತ್ತು ಕೀರ್ತನಾ ಸೇವೆಗಳು ಜರುಗಿದವು.</p>.<p><strong>ಹಿಂದೂ ಸಂಘಟನೆ: </strong>ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲಿ ಹಿಂದೂ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮ ದೇವರ ವಿಗ್ರಹಗಳನ್ನು ಸ್ಥಾಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮನ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು.</p>.<p><strong>ಬೋರಬಂಡಾ: </strong>ಹತ್ತಿರದ ಬೋರಬಂಡಾ ಗ್ರಾಮದ ಹೊರವಲಯದಲ್ಲಿರುವ ಶ್ರೀಲಕ್ಷ್ಮಿ ತಿಮ್ಮಪ್ಪ ದೇವಸ್ಥಾನ ಸಮಿತಿ ವತಿಯಿಂದ ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ, ಅಭಿಷೇಕ, ಅಲಂಕಾರ ಸೇವೆಗಳು ಜರುಗಿದವು. ನಂತರ ರಥೋತ್ಸವ, ಮಂಗಳಾರತಿಯ ನಂತರ ಪ್ರಸಾದ ವಿತರಣೆ ಮಾಡಲಾಯಿತು.</p>.<p>ಅನಿರುದ್ಧ ಕಾಕಲವಾರ ತಂಡದಿಂದ ಭಜನೆ, ಕೀರ್ತನಾ ಸಂಗೀತ ಸೇವೆಗಳು ಜರುಗಿದವು.</p>.<p>ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಕಾರ್ಯದರ್ಶಿ ನರೇಂದ್ರ ರಾಠೋಡ, ಲಕ್ಷ್ಮೀಬಾಯಿ ರಾಠೋಡ, ಅಯ್ಯಪ್ಪದಾಸ, ಡಾ.ವೆಂಕಟಮ್ಮ, ರಮೇಶ ರಾಠೋಡ, ನಿವೃತ್ತ ಪಿಎಸ್ಐ ವೀರಣ್ಣ ಕೇಶ್ವಾರ, ನಿವೃತ್ತ ಉಪನ್ಯಾಸಕ ಭೀಮರೆಡ್ಡಿ ಉಡುಮಲಗಿದ್ದ, ಕಿಶನ ರಾಠೋಡ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್</strong>: ಪಟ್ಟಣದ ವಿವಿಧೆಡೆ ಹಾಗೂ ತಾಲ್ಲೂಕಿನ ಪ್ರಮುಖ ದೇವಸ್ಥಾನಗಳು ಹಾಗೂ ಗ್ರಾಮಗಳ ಹನುಮ ಮಂದಿರಗಳಲ್ಲಿ ಬುಧವಾರ ರಾಮ ನವಮಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಕಲ್ಯಾಣೋತ್ಸವ, ಅಭಿಷೇಕ ಸೇವೆ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಜತೆಗೆ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗಿದವು.</p>.<p><strong>ಹನುಮ ಮಂದಿರ:</strong> ಪಟ್ಟಣದ ಬಸ್ ನಿಲ್ದಾಣದ ಎದುರಿನ ಹನುಮ ಮಂದಿರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ರಾಮ ನವಮಿಯ ಸಂಭ್ರಮ ಆರಂಭವಾಗಿತ್ತು. ಬೆಳಿಗ್ಗೆ ದೇವಸ್ಥಾನದ ಮೂಲ ವಿರಾಟ ವಿಶೇಷ ಅಭಿಷೇಕ, ಅಲಂಕಾರ, ಆರತಿ ಸೇವೆಗಳೊಂದಿ ರಾಮ ನವಮಿ ಉತ್ಸವವು ಆರಂಭಗೊಂಡಿತು.</p>.<p>ಸೀತಾ, ಶ್ರೀರಾಮ, ಲಕ್ಷ್ಮಣರ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಅಲಂಕಾರದ ನಂತರ ಕಲ್ಯಾಣೋತ್ಸವ ಜರುಗಿತು. ಕಲ್ಯಾಣೋತ್ಸವದ ನಂತರ ಉಂಜಿಲ ಸೇವೆ (ಉಯ್ಯಾಲೆ ಸೇವೆ), ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರುಗಿತು. ಭಜನೆ ಮತ್ತು ಕೀರ್ತನಾ ಸೇವೆಗಳು ಜರುಗಿದವು.</p>.<p><strong>ಹಿಂದೂ ಸಂಘಟನೆ: </strong>ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲಿ ಹಿಂದೂ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮ ದೇವರ ವಿಗ್ರಹಗಳನ್ನು ಸ್ಥಾಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮನ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು.</p>.<p><strong>ಬೋರಬಂಡಾ: </strong>ಹತ್ತಿರದ ಬೋರಬಂಡಾ ಗ್ರಾಮದ ಹೊರವಲಯದಲ್ಲಿರುವ ಶ್ರೀಲಕ್ಷ್ಮಿ ತಿಮ್ಮಪ್ಪ ದೇವಸ್ಥಾನ ಸಮಿತಿ ವತಿಯಿಂದ ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ, ಅಭಿಷೇಕ, ಅಲಂಕಾರ ಸೇವೆಗಳು ಜರುಗಿದವು. ನಂತರ ರಥೋತ್ಸವ, ಮಂಗಳಾರತಿಯ ನಂತರ ಪ್ರಸಾದ ವಿತರಣೆ ಮಾಡಲಾಯಿತು.</p>.<p>ಅನಿರುದ್ಧ ಕಾಕಲವಾರ ತಂಡದಿಂದ ಭಜನೆ, ಕೀರ್ತನಾ ಸಂಗೀತ ಸೇವೆಗಳು ಜರುಗಿದವು.</p>.<p>ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಕಾರ್ಯದರ್ಶಿ ನರೇಂದ್ರ ರಾಠೋಡ, ಲಕ್ಷ್ಮೀಬಾಯಿ ರಾಠೋಡ, ಅಯ್ಯಪ್ಪದಾಸ, ಡಾ.ವೆಂಕಟಮ್ಮ, ರಮೇಶ ರಾಠೋಡ, ನಿವೃತ್ತ ಪಿಎಸ್ಐ ವೀರಣ್ಣ ಕೇಶ್ವಾರ, ನಿವೃತ್ತ ಉಪನ್ಯಾಸಕ ಭೀಮರೆಡ್ಡಿ ಉಡುಮಲಗಿದ್ದ, ಕಿಶನ ರಾಠೋಡ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>