ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಗುರುಮಠಕಲ್‌ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭೀತಿಯ ವಾತಾವರಣ

Published : 17 ಸೆಪ್ಟೆಂಬರ್ 2025, 6:33 IST
Last Updated : 17 ಸೆಪ್ಟೆಂಬರ್ 2025, 6:33 IST
ಫಾಲೋ ಮಾಡಿ
Comments
ಚಿರತೆ ದಾಳಿ ದನಗಳ ಮೇಲೆ ದಾಳಿ ನಡೆಸಿದ್ದು, ದನಗಾಹಿಗಳೆಲ್ಲರೂ ಸದ್ದು ಮಾಡಿದ್ದರಿಂದ ಬಿಟ್ಟು ಹೋಗಿದೆ ಸಂಬಂಧಿತರು ಕ್ರಮವಹಿಸಿ
ಬಾಲಪ್ಪ ಬುರನೋಳ,ರೈತ
ದನಗಳ ಮೇಲೆ ಚಿರತೆ ದಾಳಿ ಮಾಡಿದೆ. ಹತ್ತು ದಿನಗಳಿಂದಲೂ ಚಿರತೆ ಅಲ್ಲಲ್ಲಿ ಕಾಣಿಸಿದೆ. ಜಮೀನಿನಲ್ಲಿ ಹೆಜ್ಜೆ ಗುರುತು ಕಾಣಿಸಿದ್ದು, ಭಯವಾಗುತ್ತಿದೆ
ಲಕ್ಷ್ಮೀ ದೇವಿಂದ್ರಪ್ಪ, ರೈತ ಮಹಿಳೆ
ಕಳೆದ ಹತ್ತು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ. ರೈತರು ರಾತ್ರಿವೇಳೆ ಒಂಟಿಯಾಗಿ ಸಂಚರಿಸಬೇಡಿ. ಅರಣ್ಯ ಇಲಾಖೆ ಕೂಡಲೇ ಚಿರತೆ ಸ್ಥಳಾಂತರಕ್ಕೆ ಕ್ರಮವಹಿಸಲಿ
ರವಿ ಬಿ,ಮಾದಿಗ ದಂಡೋರ ಸಮಿತಿ ತಾಲ್ಲೂಕು ಅಧ್ಯಕ್ಷ
ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಹೊರವಲಯದ ಜಮೀನಿನಲ್ಲಿದ್ದ ಚಿರತೆಯ ಹೆಜ್ಜೆ ಗುರುತು

ಗುರುಮಠಕಲ್‌ ಹತ್ತಿರದ ಎಂ.ಟಿ.ಪಲ್ಲಿ ಹೊರವಲಯದ ಜಮೀನಿನಲ್ಲಿದ್ದ ಚಿರತೆಯ ಹೆಜ್ಜೆ ಗುರುತು

ತಾಲ್ಲೂಕಿನಲ್ಲಿ ಚಿರತೆಯ ‘ಹೆಜ್ಜೆ ಗುರುತುಗಳು’
lಈ ಹಿಂದೆ 2021ರ ಜನೆವರಿ 28 (ಗುರುವಾರ) ತಾಲ್ಲೂಕಿನ ಮಿನಾಸಪುರ ಗ್ರಾಮದ ಹೊರವಲಯದ ಕೆರೆ ಪ್ರದೇಶದಲ್ಲಿ ರಾತ್ರಿವೇಳೆ ಮೀನಿಗೆ ಆಹಾರ ನೀಡಲೆಂದು ಮಲಗಿದ್ದ ತಂಡದ ಸದಸ್ಯ ಹಣಮಂತು ಎನ್ನುವವರ ಮೇಲೆ ದಾಳಿ ನಡೆಸಿತ್ತು. l2022ರ ಸೆಪ್ಟೆಂಬರ್ 10(ಶನಿವಾರ) ಅಂದಿನ ಪಿಐ ದೌಲತ್‌ ಎನ್‌.ಕುರಿ ಅವರು ರಾತ್ರಿ ವೇಳೆ ಗಸ್ತಿನಲ್ಲಿರುವಾಗ ರಸ್ತೆ ಬದಿಯಲ್ಲೇ ಚಂಡ್ರಿಕಿ ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿತ್ತು. ಕೂಡಲೇ ತಮ್ಮ ಪೊಲೀಸ್‌ ಸಿಬ್ಬಂದಿಯ ಜತೆಗೆ ಪಂಚಾಯಿತಿ ಸಿಬ್ಬಂದಿಯ ಸಹಾಯ ಪಡೆದು ಮುಂಜಾಗ್ರತೆ ವಹಿಸಲು ಗ್ರಾಮದಲ್ಲಿ ಜಾಗೃತಿ ಮೂಡಿಸಿದ್ದರು. l2022ರ ಅಕ್ಟೋಬರ್ 24 ರಂದು ತಾಲ್ಲೂಕಿನ ಬೆಟ್ಟದಹಳ್ಳಿ ಅರಣ್ಯ ಪ್ರದೇಶದಲ್ಲಿ ಹುಸೇನ್‌ ಸಾಬ್‌ ಮತ್ತು ಮೊಗುಲಮ್ಮ ಅವರು ಕುರಿ-ಆಡು ಮೇಯಿಸುವಾಗ ಒಂದು ಆಡು ಚಿರತೆ ಪಾಲಾಗಿತ್ತು. ಅಕ್ಟೋಬರ್ 30 ರಂದು ತಾಲ್ಲೂಕಿನ ಕೇಶ್ವಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಡುಗಳ ಮೇಲೆ ಚಿರತೆ ದಾಳಿನಡೆಸಿತ್ತು. lಅದೇ ತಿಂಗಳ ಕೊನೆಯ ದಿನ (2022ರ ಅ.31) ತಾಲ್ಲೂಕಿನ ಗುಂಜನೂರು ಗ್ರಾಮದ ಮೊಗುಲಾನ್‌ಸಾಬ್‌ ಅವರ ದೊಡ್ಡಿಯಲ್ಲಿ ಕಟ್ಟಿದ್ದ 2 ಮರಿ ಸೇರಿ ಒಟ್ಟು 6 ಕುರಿಗಳು ಸತ್ತಿದ್ದವು. ಅನುಮಾನಗೊಂಡು ಪಶುವೈದ್ಯಕೀಯ ಇಲಾಖೆಯಿಂದ ಪರಿಶೀಲನೆ ನಡೆಸಿದಾಗ ಕುರಿಗಳ ಉಳಿದ ಶರೀರದ ಭಾಗಗಳಲ್ಲಿದ್ದ ಗಾಯಗಳು ಮತ್ತು ಇತರೆ ಗುರುತುಗಳಿಂದ ಚಿರತೆ ದಾಳಿ ನಡೆಸಿದ್ದು ಖಚಿತಗೊಂಡಿತ್ತು. lಈಚೆಗೆ ಹದಿನೈದು ದಿನಗಳಿಂದ ಎಂ.ಟಿ.ಪಲ್ಲಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸೆ.7 ಮತ್ತು 15 ರಂದು ಖಚಿತವಾಗಿದೆ.
‘ಸೆರೆ ಹಿಡಿಯಲು ಕ್ರಮ’
‘ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಎಂ.ಟಿ.ಪಲ್ಲಿ ಗ್ರಾಮದಲ್ಲಿನ ಹೆಜ್ಜೆ ಗುರುತಿರುವ ಸ್ಥಳಕ್ಕೆ ನಮ್ಮ ಸಿಬ್ಬಂದಿಯೊಡನೆ ನಾನೂ ತೆರಳಿ ಪರಿಶೀಲಿಸುತ್ತೇನೆ. ಮೇಲಧಿಕಾರಿಗಳಿಂದ ಅನುಮತಿ ಪಡೆದು, ಬೋನು ಅಳವಡಿಸುವ ಮತ್ತು ಚಿರತೆ ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯವನ್ನು ಆದ್ಯತೆಯಲ್ಲಿ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಬುರಾನೋದ್ಧೀನ್‌ ಅವರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT