ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಎರಡು ಕ್ಷೇತ್ರಗಳಿಗೆ ಹಂಚಿಹೋಗಿರುವ ಜಿಲ್ಲೆ

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಯಚೂರು ಲೋಕಸಭಾ ಕ್ಷೇತ್ರ
Published 22 ಏಪ್ರಿಲ್ 2024, 6:42 IST
Last Updated 22 ಏಪ್ರಿಲ್ 2024, 6:42 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯೂ ರಾಯಚೂರು ಮತ್ತು ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಹರಿದು ಹಂಚಿಹೋಗಿದೆ. ಯಾದಗಿರಿ, ಶಹಾಪುರ, ಸುರಪುರ ವಿಧಾನಸಭಾ ಕ್ಷೇತ್ರಗಳು ರಾಯಚೂರು ಕ್ಷೇತ್ರಕ್ಕೆ, ಗುರುಮಠಕಲ್‌ ಮತಕ್ಷೇತ್ರ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಹಂಚಿಕೆಯಾಗಿದೆ.

ರಾಯಚೂರು (ಪರಿಶಿಷ್ಟ ಪಂಗಡ) ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಶೇ 73.46ರಷ್ಟು ಜನರು ಗ್ರಾಮೀಣ ಪ್ರದೇಶ, ಶೇ 26.54ರಷ್ಟು ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಾರೆ.

ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ರಾಯಚೂರು ಲೋಕಸಭೆ ಕ್ಷೇತ್ರವನ್ನು ಗುರುತಿಸಲಾಗುತ್ತದೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಬಗ್ಗೆ ಚರ್ಚೆಗಳು ಆರಂಭವಾದಾಗ ರಾಯಚೂರಿನ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಐಐಟಿ ಧಾರವಾಡ ಜಿಲ್ಲೆಯ ಪಾಲಾಯಿತು. ಉದ್ಯೋಗ ಸೃಷ್ಟಿಯಾಗುವಂತಹ ಯಾವುದೇ ಕೈಗಾರಿಕೆಗಳನ್ನು ಕ್ಷೇತ್ರ ಒಳಗೊಂಡಿಲ್ಲ. ಇದರಿಂದಾಗಿ ಜಿಲ್ಲೆಯ ಜನರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದು ತಪ್ಪಿಲ್ಲ. ಅದರಲ್ಲೂ ಮಳೆ ಕೈ ಕೊಟ್ಟಾಗ ರೈತರು ಉದ್ಯೋಗ ಹುಡುಕಿ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗುತ್ತಾರೆ.

ನೀರಾವರಿ ಇಲ್ಲದ ಪ್ರದೇಶದಲ್ಲಿ ಜನರೂ ಇಂದಿಗೂ ಕೆಲಸಕ್ಕಾಗಿ ಗುಳೆ ಹೋಗುವುದು ತಪ್ಪಿಲ್ಲ. ಬಿಸಿಲಿನ ಝಳ ಹೆಚ್ಚಿದ್ದರಿಂದ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ತುಂಗಭದ್ರಾ ಅಣೆಕಟ್ಟು ತುಂಬಿದರೆ ವರ್ಷಪೂರ್ತಿ ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ. ಕೃಷ್ಣಾ ಮತ್ತು ತುಂಗಭದ್ರಾ ನದಿ ಹರಿಯುತ್ತಿದ್ದರೂ ಜಿಲ್ಲೆಗಳಲ್ಲಿ ನೀರಾವರಿ ಸಮಸ್ಯೆ ಇದೆ. ಆಯ್ಕೆಯಾದ ಜನಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡಬೇಕು ಎಂಬುದು ಜನರ ಆಶಯವಾಗಿದೆ.

ಜಿಲ್ಲೆಯವರಿಗೆ ಸಿಗದ ಟಿಕೆಟ್‌
2010 ರಲ್ಲಿ ಕಲಬುರಗಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ಜಿಲ್ಲೆ ಮಾಡಲಾಗಿತ್ತು. ಅಂದಿನಿಂದಲೂ ಇಲ್ಲಿಯವರೆಗೂ ಯಾದಗಿರಿ ಜಿಲ್ಲೆಯಿಂದ ಯಾರಿಗೂ ರಾಯಚೂರು ಲೋಕಸಭೆಗೆ ಟಿಕೆಟ್‌ ನೀಡಿಲ್ಲ. ಅಲ್ಲದೇ ಜಿಲ್ಲೆಯಿಂದ ಯಾರನ್ನು ಗುರುತಿಸಿ ಟಿಕೆಟ್ ನೀಡಿಲ್ಲ. ಹೀಗಾಗಿ ಗಿರಿ ಜಿಲ್ಲೆಯು ಇನ್ನೂ ಅನೇಕ ಸಮಸ್ಯೆಗಳಿಂದ ನರುಳುತ್ತಿದೆ. ಸದ್ಯ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮುಂಚೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು ಟಿಕೆಟ್ ಹಂಚಿಕೆಯಲ್ಲೂ ಯಾದಗಿರಿಯಿಂದ ಸಮ್ಮಿಶ್ರವಾಗಿಯೇ ರಾಯಚೂರು ಲೋಕಸಭಾ ಸಂಸದರ ಸ್ಥಾನಕ್ಕೆ ಸಮ್ಮಿಶ್ರ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂದು ಜಿಲ್ಲೆಯ ಜನತೆಯ ಆಗ್ರಹವಾಗಿದೆ.
ಎರಡು ಜಿಲ್ಲೆಯಲ್ಲೂ ದೋ ಆಬ್‌ ಪ್ರದೇಶ
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಮೂರು ನದಿಗಳು ಹರಿಯುತ್ತಿದ್ದರೂ ಸಮಪರ್ಕವಾಗಿ ನೀರಾವರಿ ಸೌಲಭ್ಯ ಇಲ್ಲದಂತೆ ಆಗಿದೆ. ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ತುಂಗಭದ್ರಾ ನದಿ (ಎರಡು ನದಿಗಳು) ಹರಿಯುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಭೀಮಾ ನದಿ ಹರಿಯುತ್ತಿದೆ. ಆದರೂ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹಾತ್ವಕಾಂಕ್ಷಿ ಜಿಲ್ಲೆಗಳೆಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಎರಡು ಜಿಲ್ಲೆಗಳಿಗೆ ಸಿಗಬೇಕಾದ ಅನುದಾನ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.
ರಾಯಚೂರು ಲೋಕಸಭಾ ಸಂಸದರ ಪಟ್ಟಿ
ವರ್ಷ;ಹೆಸರು;ಪಕ್ಷ 1957;ಜಿ.ಎಸ್‌.ಮೇಲ್ಕೋಟೆ;ಕಾಂಗ್ರೆಸ್ 1962; ಜಗನ್ನಾಥ ರಾವ್ ಚಂಡ್ರಿಕಿ;ಕಾಂಗ್ರೆಸ್ 1967;ರಾಜಾ ವೆಂಕಟಪ್ಪ ನಾಯಕ;ಸ್ವತಂತ್ರ ಪಕ್ಷ 1971;ಪಂಪನಗೌಡ;ಕಾಂಗ್ರೆಸ್ 1977;ರಾಜಶೇಖ‌ರ್ ಕೋಳೂರು;ಕಾಂಗ್ರೆಸ್ 1980;ಬಿ.ವಿ.ದೇಸಾಯಿ;ಕಾಂಗ್ರೆಸ್ 1984;ಬಿ.ವಿ.ದೇಸಾಯಿ;ಕಾಂಗ್ರೆಸ್ 1986;ಮುರಾರಿರಾವ್ ಯಶವಂತರಾವ್ ಘೋರ್ಪಡೆ;ಕಾಂಗ್ರೆಸ್ 1989;ರಾಜಾ ಅಂಬಣ್ಣ ನಾಯಕ ದೊರೆ;ಕಾಂಗ್ರೆಸ್ 1991;ವೆಂಕಟೇಶ ನಾಯಕ; ಕಾಂಗ್ರೆಸ್ 1996;ರಾಜಾ ರಂಗಪ್ಪನಾಯಕ;ಜನತಾ ದಳ 1998;ವೆಂಕಟೇಶ ನಾಯಕ;ಕಾಂಗ್ರೆಸ್ 1999;ವೆಂಕಟೇಶ ನಾಯಕ;ಕಾಂಗ್ರೆಸ್ 2004;ವೆಂಕಟೇಶ ನಾಯಕ;ಕಾಂಗ್ರೆಸ್ 2009;ಸಣ್ಣ ಫಕೀರಪ್ಪ;ಬಿಜೆಪಿ 2014;ಬಿ.ವಿ.ನಾಯಕ;ಕಾಂಗ್ರೆಸ್ 2019;ರಾಜಾ ಅಮರೇಶ್ವರ ನಾಯಕ;ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT