ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ: ಎರಡು ಕ್ಷೇತ್ರಗಳಿಗೆ ಹಂಚಿಹೋಗಿರುವ ಜಿಲ್ಲೆ

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಯಚೂರು ಲೋಕಸಭಾ ಕ್ಷೇತ್ರ
Published : 22 ಏಪ್ರಿಲ್ 2024, 6:42 IST
Last Updated : 22 ಏಪ್ರಿಲ್ 2024, 6:42 IST
ಫಾಲೋ ಮಾಡಿ
Comments
ಜಿಲ್ಲೆಯವರಿಗೆ ಸಿಗದ ಟಿಕೆಟ್‌
2010 ರಲ್ಲಿ ಕಲಬುರಗಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ಜಿಲ್ಲೆ ಮಾಡಲಾಗಿತ್ತು. ಅಂದಿನಿಂದಲೂ ಇಲ್ಲಿಯವರೆಗೂ ಯಾದಗಿರಿ ಜಿಲ್ಲೆಯಿಂದ ಯಾರಿಗೂ ರಾಯಚೂರು ಲೋಕಸಭೆಗೆ ಟಿಕೆಟ್‌ ನೀಡಿಲ್ಲ. ಅಲ್ಲದೇ ಜಿಲ್ಲೆಯಿಂದ ಯಾರನ್ನು ಗುರುತಿಸಿ ಟಿಕೆಟ್ ನೀಡಿಲ್ಲ. ಹೀಗಾಗಿ ಗಿರಿ ಜಿಲ್ಲೆಯು ಇನ್ನೂ ಅನೇಕ ಸಮಸ್ಯೆಗಳಿಂದ ನರುಳುತ್ತಿದೆ. ಸದ್ಯ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮುಂಚೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು ಟಿಕೆಟ್ ಹಂಚಿಕೆಯಲ್ಲೂ ಯಾದಗಿರಿಯಿಂದ ಸಮ್ಮಿಶ್ರವಾಗಿಯೇ ರಾಯಚೂರು ಲೋಕಸಭಾ ಸಂಸದರ ಸ್ಥಾನಕ್ಕೆ ಸಮ್ಮಿಶ್ರ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂದು ಜಿಲ್ಲೆಯ ಜನತೆಯ ಆಗ್ರಹವಾಗಿದೆ.
ಎರಡು ಜಿಲ್ಲೆಯಲ್ಲೂ ದೋ ಆಬ್‌ ಪ್ರದೇಶ
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಮೂರು ನದಿಗಳು ಹರಿಯುತ್ತಿದ್ದರೂ ಸಮಪರ್ಕವಾಗಿ ನೀರಾವರಿ ಸೌಲಭ್ಯ ಇಲ್ಲದಂತೆ ಆಗಿದೆ. ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ತುಂಗಭದ್ರಾ ನದಿ (ಎರಡು ನದಿಗಳು) ಹರಿಯುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಭೀಮಾ ನದಿ ಹರಿಯುತ್ತಿದೆ. ಆದರೂ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹಾತ್ವಕಾಂಕ್ಷಿ ಜಿಲ್ಲೆಗಳೆಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಎರಡು ಜಿಲ್ಲೆಗಳಿಗೆ ಸಿಗಬೇಕಾದ ಅನುದಾನ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.
ರಾಯಚೂರು ಲೋಕಸಭಾ ಸಂಸದರ ಪಟ್ಟಿ
ವರ್ಷ;ಹೆಸರು;ಪಕ್ಷ 1957;ಜಿ.ಎಸ್‌.ಮೇಲ್ಕೋಟೆ;ಕಾಂಗ್ರೆಸ್ 1962; ಜಗನ್ನಾಥ ರಾವ್ ಚಂಡ್ರಿಕಿ;ಕಾಂಗ್ರೆಸ್ 1967;ರಾಜಾ ವೆಂಕಟಪ್ಪ ನಾಯಕ;ಸ್ವತಂತ್ರ ಪಕ್ಷ 1971;ಪಂಪನಗೌಡ;ಕಾಂಗ್ರೆಸ್ 1977;ರಾಜಶೇಖ‌ರ್ ಕೋಳೂರು;ಕಾಂಗ್ರೆಸ್ 1980;ಬಿ.ವಿ.ದೇಸಾಯಿ;ಕಾಂಗ್ರೆಸ್ 1984;ಬಿ.ವಿ.ದೇಸಾಯಿ;ಕಾಂಗ್ರೆಸ್ 1986;ಮುರಾರಿರಾವ್ ಯಶವಂತರಾವ್ ಘೋರ್ಪಡೆ;ಕಾಂಗ್ರೆಸ್ 1989;ರಾಜಾ ಅಂಬಣ್ಣ ನಾಯಕ ದೊರೆ;ಕಾಂಗ್ರೆಸ್ 1991;ವೆಂಕಟೇಶ ನಾಯಕ; ಕಾಂಗ್ರೆಸ್ 1996;ರಾಜಾ ರಂಗಪ್ಪನಾಯಕ;ಜನತಾ ದಳ 1998;ವೆಂಕಟೇಶ ನಾಯಕ;ಕಾಂಗ್ರೆಸ್ 1999;ವೆಂಕಟೇಶ ನಾಯಕ;ಕಾಂಗ್ರೆಸ್ 2004;ವೆಂಕಟೇಶ ನಾಯಕ;ಕಾಂಗ್ರೆಸ್ 2009;ಸಣ್ಣ ಫಕೀರಪ್ಪ;ಬಿಜೆಪಿ 2014;ಬಿ.ವಿ.ನಾಯಕ;ಕಾಂಗ್ರೆಸ್ 2019;ರಾಜಾ ಅಮರೇಶ್ವರ ನಾಯಕ;ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT