<p><strong>ಯಾದಗಿರಿ:</strong> ‘ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ರದ್ದುಪಡಿಸಲಾಗಿದೆ. ಭಕ್ತರುಸಹಕರಿಸಬೇಕು’ ಎಂದು ಜಿಲ್ಲಾಡಳಿತ ತಿಳಿಸಿದೆ.</p>.<p>‘ಈ ತಿಂಗಳು ಜಾತ್ರೆ ನಡೆಯಬೇಕಿತ್ತು. ಪ್ರತಿ ವರ್ಷ ಹೊರ ಜಿಲ್ಲೆಗಳು ಹಾಗೂ ಅಂತರ ರಾಜ್ಯಗಳಿಂದಲೂ ಭಕ್ತರುಆಗಮಿಸುತ್ತಾರೆ. ಕೋವಿಡ್ ತಡೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಕೃಷ್ಣಾ ನದಿಯ ತಟದಲ್ಲಿರುವ ತಿಂಥಣಿ ಗ್ರಾಮದಲ್ಲಿ ದೇವಸ್ಥಾನವಿದೆ. ಪ್ರತಿವರ್ಷ ಜಾತ್ರಾ ಮಹೋತ್ಸವ ಸರ್ಕಾರಕ್ಕೆ ಅಧಿಕ ಲಾಭ ತಂದು ಕೊಡುತ್ತಿತ್ತು. ಸಾರಿಗೆ, ಭಕ್ತರ ಕಾಣಿಕೆ, ತೆಂಗಿನಕಾಯಿ ಹರಾಜು ಪ್ರಕ್ರಿಯೆ ಮೂಲಕ ಆದಾಯ ಬರುತ್ತಿತ್ತು.ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಪುನಶ್ಚೇತನ ನೀಡಲು ಜಾತ್ರಾ ಮಹೋತ್ಸವ ವರದಾನವಾಗುತ್ತಿತ್ತು.</p>.<p>ಶೇ 100ರಷ್ಟು ಸಿನಿಮಾ ಭರ್ತಿಗೆಅವಕಾಶ ಕಲ್ಪಿಸಲಾಗಿದೆ. ಆದರೆ, ದೇವಸ್ಥಾನದ ಉತ್ಸವಗಳಿಗೆ ನಿರ್ಬಂಧ ಏಕೆ ಎಂದು ಭಕ್ತರು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ರದ್ದುಪಡಿಸಲಾಗಿದೆ. ಭಕ್ತರುಸಹಕರಿಸಬೇಕು’ ಎಂದು ಜಿಲ್ಲಾಡಳಿತ ತಿಳಿಸಿದೆ.</p>.<p>‘ಈ ತಿಂಗಳು ಜಾತ್ರೆ ನಡೆಯಬೇಕಿತ್ತು. ಪ್ರತಿ ವರ್ಷ ಹೊರ ಜಿಲ್ಲೆಗಳು ಹಾಗೂ ಅಂತರ ರಾಜ್ಯಗಳಿಂದಲೂ ಭಕ್ತರುಆಗಮಿಸುತ್ತಾರೆ. ಕೋವಿಡ್ ತಡೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಕೃಷ್ಣಾ ನದಿಯ ತಟದಲ್ಲಿರುವ ತಿಂಥಣಿ ಗ್ರಾಮದಲ್ಲಿ ದೇವಸ್ಥಾನವಿದೆ. ಪ್ರತಿವರ್ಷ ಜಾತ್ರಾ ಮಹೋತ್ಸವ ಸರ್ಕಾರಕ್ಕೆ ಅಧಿಕ ಲಾಭ ತಂದು ಕೊಡುತ್ತಿತ್ತು. ಸಾರಿಗೆ, ಭಕ್ತರ ಕಾಣಿಕೆ, ತೆಂಗಿನಕಾಯಿ ಹರಾಜು ಪ್ರಕ್ರಿಯೆ ಮೂಲಕ ಆದಾಯ ಬರುತ್ತಿತ್ತು.ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಪುನಶ್ಚೇತನ ನೀಡಲು ಜಾತ್ರಾ ಮಹೋತ್ಸವ ವರದಾನವಾಗುತ್ತಿತ್ತು.</p>.<p>ಶೇ 100ರಷ್ಟು ಸಿನಿಮಾ ಭರ್ತಿಗೆಅವಕಾಶ ಕಲ್ಪಿಸಲಾಗಿದೆ. ಆದರೆ, ದೇವಸ್ಥಾನದ ಉತ್ಸವಗಳಿಗೆ ನಿರ್ಬಂಧ ಏಕೆ ಎಂದು ಭಕ್ತರು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>