‘ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ತಂದೆ ಲಕ್ಷ್ಮಣ ಅವರು ಕುರಿಗಳ ಮೈತೊಳೆಯುತ್ತಿದ್ದ ವೇಳೆ ಮೊಸಳೆ ದಾಳಿ ಮಾಡಿತು. ನಮ್ಮ ತಂದೆಯವರು ಅದರ ಬಾಯಿಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸಿದರು. ದೋತರ ಬಿಚ್ಚಿ, ಮೊಸಳೆಯ ದಿಕ್ಕು ತಪ್ಪಿಸಲು ಯತ್ನಿಸಿದರು. ಮೂರು ಬಾರಿ ಪಲ್ಟಿ ಹೊಡೆದ ಮೊಸಳೆಯು ತಂದೆಯವರನ್ನು ಎಳೆದುಕೊಂಡು ನೀರಿನೊಳಗೆ ಹೋಯಿತು. ಎಷ್ಟೇ ಪ್ರಯತ್ನಿಸಿದರೂ ಅವರನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ’ ಎಂದು ಲಕ್ಷ್ಮಣ ಅವರ ಪುತ್ರ ತಾಯಪ್ಪ ತಿಳಿಸಿದರು.