<p><strong>ಮೋಟ್ನಳ್ಳಿ (ಯರಗೋಳ): </strong>ಶಿವಶರಣ, ತತ್ವಪದಕಾರ, ಹಸನ ವಸ್ತಾದೇಪ್ಪನ 107 ನೇ ಜಾತ್ರೆ ವಿಜೃಂಭಣೆಯಿಂದ ಗುರುವಾರ ಜರುಗಿತು.</p>.<p>ಬುಧವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಧದ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.</p>.<p>ಮೆರವಣಿಗೆಯುದ್ದಕ್ಕೂ ಕೋಲಾಟ, ಗೆಜ್ಜೆಕುಣಿತ, ನೃತ್ಯ, ಭಜನೆ ಹಾಡುಗಳು ಸಂಭ್ರಮ ಜೋರಾಗಿತ್ತು. ಆಕಾಶದಲ್ಲಿ ಪಟಾಕಿಗಳು ಬಣ್ಣದ ಚಿತ್ತಾರ ಮೂಡಿಸಿದವು.ಗಂಧದ ಮೆರವಣಿಗೆ ಗುರುವಾರ ನಸುಕಿನಲ್ಲಿ 'ಹಸನ ವಸ್ತಾದೆಪ್ಪ' ದರ್ಗಾ ತಲುಪಿತು.</p>.<p>ನೆರೆದಿದ್ದ ಭಕ್ತರು ತಮ್ಮ ಹರಕೆ ತೀರಿಸಿದರು. ಬಿರಿಯಾನಿ, ಮಾದ್ಲಿ ನೈವೇದ್ಯ ಅರ್ಪಿಸಿ, ಧೂಪ ಹೊತ್ತಿಸಿ, ಜ್ಯೋತಿ ಬೆಳಗಿಸಿ, ಟೆಂಗಿನ ಕಾಯಿ ಒಡೆದು ಭಕ್ತರು ಪುನೀತರಾದರು.</p>.<p>ಜಾತ್ರೆಯಲ್ಲಿ ಮಕ್ಕಳ ಆಟಿಕೆ ಸಾಮಗ್ರಿ, ಬಳೆ, ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಬಿಸಿಲಿನ ತಾಪದಿಂದ ಕಲ್ಲಂಗಡಿ, ಕಬ್ಬಿನ ಹಾಲು, ಐಸ್ ಕ್ರೀಂ, ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿತ್ತು.</p>.<p>ಸುತ್ತಲಿನ ಕೋಟಗೇರಾ, ಹಂದ್ರಿಕಿ, ಚಂಡರಕಿ, ಚಿಂತಕುಂಟ, ಹೊಸಳ್ಳಿ, ಗುರುಮಠಕಲ್, ಕಂದಕೂರ, ಗುಂಜನೂರ, ಇಟಕಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.</p>.<p>ಜಾತ್ರೆನಿಮಿತ್ತ ನಾಟಕ ಪ್ರದರ್ಶನ, ಗ್ರಾಮೀಣ ಕ್ರೀಡೆಗಳಾದ ಕೈ ಕುಸ್ತಿ, ಭಾರ ಎತ್ತುವ ಸ್ಪರ್ಧೆಗಳು ಜರುಗಿದವು. ಗ್ರಾಮದ ಪ್ರಮುಖರಾದ ಬಸವರಾಜ ಗುತ್ತೇದಾರ, ಗುರುಲಿಂಗಯ್ಯ ಸ್ವಾಮಿ, ಬಾಲಪ್ಪ ನಾಟೇಕರ್, ಭೀಮಪ್ಪ ನಂಗಿ, ಶರಣಪ್ಪ ಬೈರಮ್ಮಕೊಂಡ, ಡಾ. ಮಧುಸೂದನ ರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೋಟ್ನಳ್ಳಿ (ಯರಗೋಳ): </strong>ಶಿವಶರಣ, ತತ್ವಪದಕಾರ, ಹಸನ ವಸ್ತಾದೇಪ್ಪನ 107 ನೇ ಜಾತ್ರೆ ವಿಜೃಂಭಣೆಯಿಂದ ಗುರುವಾರ ಜರುಗಿತು.</p>.<p>ಬುಧವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಧದ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.</p>.<p>ಮೆರವಣಿಗೆಯುದ್ದಕ್ಕೂ ಕೋಲಾಟ, ಗೆಜ್ಜೆಕುಣಿತ, ನೃತ್ಯ, ಭಜನೆ ಹಾಡುಗಳು ಸಂಭ್ರಮ ಜೋರಾಗಿತ್ತು. ಆಕಾಶದಲ್ಲಿ ಪಟಾಕಿಗಳು ಬಣ್ಣದ ಚಿತ್ತಾರ ಮೂಡಿಸಿದವು.ಗಂಧದ ಮೆರವಣಿಗೆ ಗುರುವಾರ ನಸುಕಿನಲ್ಲಿ 'ಹಸನ ವಸ್ತಾದೆಪ್ಪ' ದರ್ಗಾ ತಲುಪಿತು.</p>.<p>ನೆರೆದಿದ್ದ ಭಕ್ತರು ತಮ್ಮ ಹರಕೆ ತೀರಿಸಿದರು. ಬಿರಿಯಾನಿ, ಮಾದ್ಲಿ ನೈವೇದ್ಯ ಅರ್ಪಿಸಿ, ಧೂಪ ಹೊತ್ತಿಸಿ, ಜ್ಯೋತಿ ಬೆಳಗಿಸಿ, ಟೆಂಗಿನ ಕಾಯಿ ಒಡೆದು ಭಕ್ತರು ಪುನೀತರಾದರು.</p>.<p>ಜಾತ್ರೆಯಲ್ಲಿ ಮಕ್ಕಳ ಆಟಿಕೆ ಸಾಮಗ್ರಿ, ಬಳೆ, ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಬಿಸಿಲಿನ ತಾಪದಿಂದ ಕಲ್ಲಂಗಡಿ, ಕಬ್ಬಿನ ಹಾಲು, ಐಸ್ ಕ್ರೀಂ, ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿತ್ತು.</p>.<p>ಸುತ್ತಲಿನ ಕೋಟಗೇರಾ, ಹಂದ್ರಿಕಿ, ಚಂಡರಕಿ, ಚಿಂತಕುಂಟ, ಹೊಸಳ್ಳಿ, ಗುರುಮಠಕಲ್, ಕಂದಕೂರ, ಗುಂಜನೂರ, ಇಟಕಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.</p>.<p>ಜಾತ್ರೆನಿಮಿತ್ತ ನಾಟಕ ಪ್ರದರ್ಶನ, ಗ್ರಾಮೀಣ ಕ್ರೀಡೆಗಳಾದ ಕೈ ಕುಸ್ತಿ, ಭಾರ ಎತ್ತುವ ಸ್ಪರ್ಧೆಗಳು ಜರುಗಿದವು. ಗ್ರಾಮದ ಪ್ರಮುಖರಾದ ಬಸವರಾಜ ಗುತ್ತೇದಾರ, ಗುರುಲಿಂಗಯ್ಯ ಸ್ವಾಮಿ, ಬಾಲಪ್ಪ ನಾಟೇಕರ್, ಭೀಮಪ್ಪ ನಂಗಿ, ಶರಣಪ್ಪ ಬೈರಮ್ಮಕೊಂಡ, ಡಾ. ಮಧುಸೂದನ ರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>