<p><strong>ಕೆಂಭಾವಿ</strong>: ಸಮೀಪದ ಯಕ್ತಾಪುರ ಗ್ರಾಮದ ಸಿದ್ಧಲಿಂಗಮ್ಮ ಬಸವಂತ್ರಾಯ ಬೆಕಿನಾಳ ಕುಟುಂಬವು ಬೇಸಿಗೆಯಲ್ಲಿ ಗ್ರಾಮದ ಜನರ ಅನುಕೂಲಕ್ಕಾಗಿ ನೀರು ಪೂರೈಕೆ ಮಾಡುತ್ತಿದೆ.</p>.<p>ಗ್ರಾಮದಲ್ಲಿ 1,400 ಜನಸಂಖ್ಯೆ ಇದೆ. ಬೆಕಿನಾಳ ಕುಟುಂಬದ ಮಾನವೀಯ ಕಾರ್ಯದಿಂದಾಗಿ ಗ್ರಾಮದಲ್ಲಿ ನೀರಿನ ಬವಣೆ ನೀಗಿದೆ.</p>.<p>ಪ್ರತಿ ವರ್ಷ ಬೇಸಿಗೆಯಲ್ಲಿ ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುತ್ತಿತ್ತು. ಊರೊಳಗಿನ ಜಲಮೂಲ ಬಳಸಿದರೂ ಸಮಸ್ಯೆ ನಿವಾರಣೆ ಆಗದಿದ್ದಾಗ ಗ್ರಾಮ ಪಂಚಾಯಿತಿಯವರು ಚಿಂತೆಗೀಡಾಗಿದ್ದರು. ಈ ಸಂದರ್ಭದಲ್ಲಿ ಊರಿಗೆ ಹೊಂದಿಕೊಂಡೇ ಇರುವ ಬೆಕಿನಾಳ ಕುಟುಂಬದವರ ಹೊಲದಲ್ಲಿ ಕೊಳವೆಬಾವಿ ಕೊರೆಸಿದಾಗ ನೀರು ಲಭಿಸಿತು.</p>.<p>ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಪಿಡಿಒ ಸಿದ್ದವೀರಪ್ಪ ತಹಶೀಲ್ದಾರ್ ಕಚೇರಿಯಿಂದ ಅನುಮತಿ ಪಡೆದು ಬೆಕಿನಾಳ ಕುಟುಂಬದವರನ್ನು ಸಂಪರ್ಕಿಸಿದಾಗ ಬೆಕಿನಾಳ ರೈತ ಕುಟುಂಬ ತಿಂಗಳಿಗೆ ₹18 ಸಾವಿರ ಪಡೆದು ನೀರು ನೀಡಲು ಒಪ್ಪಿತು.</p>.<p>ಕೂಡಲೇ ಗ್ರಾಮ ಪಂಚಾಯಿಯವರು ಹೊಲದಲ್ಲಿನ ಕೊಳವೆಬಾವಿಯಿಂದ ನಳಗಳಿಗೆ ನೀರು ಸರಬರಾಜು ಮಾಡುವ ಬಾವಿಗೆ ಪೈಪ್ಲೈನ್ ಮಾಡಿ ಅಲ್ಲಿ ಸಂಗ್ರಹಿಸಿ ನಂತರ ಯಕ್ತಾಪುರ ಗ್ರಾಮದ ಜನರಿಗೆ ಸರಬರಾಜು<br />ಮಾಡಲಾಗುತ್ತಿದೆ.</p>.<p>ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಯಕ್ತಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಗ್ರಾಮದಲ್ಲಿನ ಜಲ ಮೂಲಗಳನ್ನು ಬಳಸಿಕೊಂಡರು ಸಹ ನೀರಿನ ಸಮಸ್ಯೆ ಹೋಗುವುದಿಲ್ಲ. ಆದ್ದರಿಂದ ಈ ವರ್ಷವೂ ಅದೇ ರೀತಿ ಸಮಸ್ಯೆಯಾಗದಿರಲೆಂದು ಗ್ರಾಮ ಪಂಚಾಯಿತಿ ನೀರು ಪಡೆಯಲು ತಹಶೀಲ್ದಾರ್ ಕಚೇರಿಯಿಂದ ಅನುಮತಿ ಪಡೆದಿದೆ.</p>.<p>ಗ್ರಾಮ ಪಂಚಾಯಿತಿ ಬಾವಿಯನ್ನು ಸ್ವಚ್ಛಗೊಳಿಸಿ ನಂತರ ಕೊಳವೆಬಾವಿಯಿಂದ ನೀರು ತುಂಬಿಸಿ ಅದನ್ನು ಗ್ರಾಮದಲ್ಲಿನ ಮನೆಗಳ ನಳಗಳಿಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿದೆ.</p>.<p><strong>ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂದು ಬೆಕಿನಾಳ ಕುಟುಂಬದ ಕೊಳವೆಬಾವಿಯಿಂದ ನೀರು ಪಡೆದಯ ಸರಬರಾಜು ಮಾಡಲಾಗುತ್ತಿದೆ.</strong><br /><em>ಸಿದ್ಧವೀರಪ್ಪ, ಪಿಡಿಒ ಯಕ್ತಾಪುರ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ</strong>: ಸಮೀಪದ ಯಕ್ತಾಪುರ ಗ್ರಾಮದ ಸಿದ್ಧಲಿಂಗಮ್ಮ ಬಸವಂತ್ರಾಯ ಬೆಕಿನಾಳ ಕುಟುಂಬವು ಬೇಸಿಗೆಯಲ್ಲಿ ಗ್ರಾಮದ ಜನರ ಅನುಕೂಲಕ್ಕಾಗಿ ನೀರು ಪೂರೈಕೆ ಮಾಡುತ್ತಿದೆ.</p>.<p>ಗ್ರಾಮದಲ್ಲಿ 1,400 ಜನಸಂಖ್ಯೆ ಇದೆ. ಬೆಕಿನಾಳ ಕುಟುಂಬದ ಮಾನವೀಯ ಕಾರ್ಯದಿಂದಾಗಿ ಗ್ರಾಮದಲ್ಲಿ ನೀರಿನ ಬವಣೆ ನೀಗಿದೆ.</p>.<p>ಪ್ರತಿ ವರ್ಷ ಬೇಸಿಗೆಯಲ್ಲಿ ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುತ್ತಿತ್ತು. ಊರೊಳಗಿನ ಜಲಮೂಲ ಬಳಸಿದರೂ ಸಮಸ್ಯೆ ನಿವಾರಣೆ ಆಗದಿದ್ದಾಗ ಗ್ರಾಮ ಪಂಚಾಯಿತಿಯವರು ಚಿಂತೆಗೀಡಾಗಿದ್ದರು. ಈ ಸಂದರ್ಭದಲ್ಲಿ ಊರಿಗೆ ಹೊಂದಿಕೊಂಡೇ ಇರುವ ಬೆಕಿನಾಳ ಕುಟುಂಬದವರ ಹೊಲದಲ್ಲಿ ಕೊಳವೆಬಾವಿ ಕೊರೆಸಿದಾಗ ನೀರು ಲಭಿಸಿತು.</p>.<p>ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಪಿಡಿಒ ಸಿದ್ದವೀರಪ್ಪ ತಹಶೀಲ್ದಾರ್ ಕಚೇರಿಯಿಂದ ಅನುಮತಿ ಪಡೆದು ಬೆಕಿನಾಳ ಕುಟುಂಬದವರನ್ನು ಸಂಪರ್ಕಿಸಿದಾಗ ಬೆಕಿನಾಳ ರೈತ ಕುಟುಂಬ ತಿಂಗಳಿಗೆ ₹18 ಸಾವಿರ ಪಡೆದು ನೀರು ನೀಡಲು ಒಪ್ಪಿತು.</p>.<p>ಕೂಡಲೇ ಗ್ರಾಮ ಪಂಚಾಯಿಯವರು ಹೊಲದಲ್ಲಿನ ಕೊಳವೆಬಾವಿಯಿಂದ ನಳಗಳಿಗೆ ನೀರು ಸರಬರಾಜು ಮಾಡುವ ಬಾವಿಗೆ ಪೈಪ್ಲೈನ್ ಮಾಡಿ ಅಲ್ಲಿ ಸಂಗ್ರಹಿಸಿ ನಂತರ ಯಕ್ತಾಪುರ ಗ್ರಾಮದ ಜನರಿಗೆ ಸರಬರಾಜು<br />ಮಾಡಲಾಗುತ್ತಿದೆ.</p>.<p>ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಯಕ್ತಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಗ್ರಾಮದಲ್ಲಿನ ಜಲ ಮೂಲಗಳನ್ನು ಬಳಸಿಕೊಂಡರು ಸಹ ನೀರಿನ ಸಮಸ್ಯೆ ಹೋಗುವುದಿಲ್ಲ. ಆದ್ದರಿಂದ ಈ ವರ್ಷವೂ ಅದೇ ರೀತಿ ಸಮಸ್ಯೆಯಾಗದಿರಲೆಂದು ಗ್ರಾಮ ಪಂಚಾಯಿತಿ ನೀರು ಪಡೆಯಲು ತಹಶೀಲ್ದಾರ್ ಕಚೇರಿಯಿಂದ ಅನುಮತಿ ಪಡೆದಿದೆ.</p>.<p>ಗ್ರಾಮ ಪಂಚಾಯಿತಿ ಬಾವಿಯನ್ನು ಸ್ವಚ್ಛಗೊಳಿಸಿ ನಂತರ ಕೊಳವೆಬಾವಿಯಿಂದ ನೀರು ತುಂಬಿಸಿ ಅದನ್ನು ಗ್ರಾಮದಲ್ಲಿನ ಮನೆಗಳ ನಳಗಳಿಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿದೆ.</p>.<p><strong>ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂದು ಬೆಕಿನಾಳ ಕುಟುಂಬದ ಕೊಳವೆಬಾವಿಯಿಂದ ನೀರು ಪಡೆದಯ ಸರಬರಾಜು ಮಾಡಲಾಗುತ್ತಿದೆ.</strong><br /><em>ಸಿದ್ಧವೀರಪ್ಪ, ಪಿಡಿಒ ಯಕ್ತಾಪುರ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>