ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಹೊರಗುಳಿದ ಸಂಸದರ ನಡೆ?

Published 7 ಮೇ 2024, 0:30 IST
Last Updated 7 ಮೇ 2024, 0:30 IST
ಅಕ್ಷರ ಗಾತ್ರ

ಜಿ.ಎಂ. ಸಿದ್ದೇಶ್ವರ, ದಾವಣಗೆರೆ

ತಮಗೆ ಟಿಕೆಟ್‌ ನಿರಾಕರಿಸಿದ್ದರೂ, ಪತ್ನಿಯನ್ನೇ ಕ್ಷೇತ್ರದಲ್ಲಿ ಕಣಕ್ಕಿಳಿಸಿರುವುದರಿಂದ ಚುನಾವಣೆಯಲ್ಲಿ ಸಕ್ರಿಯ. ಪತ್ನಿಯನ್ನು ಗೆಲುವಿನ ದಡ ಮುಟ್ಟಿಸಬೇಕೆಂದು ಅವಿರತ ಶ್ರಮ ಹಾಕಿದ್ದಾರೆ.

****

ಶಿವಕುಮಾರ್ ಉದಾಸಿ, ಹಾವೇರಿ

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ. ಆರಂಭದಿಂದ ಕೊನೆಯ ದಿನದವರೆಗೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರದಲ್ಲಿ ಸಕ್ರಿಯ

****

ಕರಡಿ ಸಂಗಣ್ಣ, ಕೊಪ್ಪಳ

ಬಿಜೆಪಿ ಟಿಕೆಟ್‌ ನಿರಾಕರಿಸಿದ್ದರಿಂದ ಬಂಡಾಯ ಎದ್ದು, ಪಕ್ಷ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರದಲ್ಲಿ ಪೂರ್ಣ ಸಕ್ರಿಯ

****

ಮಂಗಲಾ ಅಂಗಡಿ, ಬೆಳಗಾವಿ

ತಮಗೆ ಟಿಕೆಟ್‌ ನಿರಾಕರಿಸಿದ್ದರೂ ಬೀಗರಾದ ಜಗದೀಶ ಶೆಟ್ಟರ್‌ ಅವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದರಿಂದ ಪ್ರಚಾರದಲ್ಲಿ ಸಕ್ರಿಯೆ

****

ಅನಂತಕುಮಾರ್ ಹೆಗಡೆ, ಉತ್ತರ ಕನ್ನಡ

ಟಿಕೆಟ್‌ ನಿರಾಕರಿಸಿದ ಬಳಿಕ ಬಿಜೆಪಿಯಿಂದ ಸಂಪೂರ್ಣ ದೂರ. ಚುನಾವಣಾ ಪ್ರಚಾರದ ಯಾವುದೇ ಕೆಲಸಗಳಲ್ಲಿ ಭಾಗಿಯಾಗಿಲ್ಲ

****

ವೈ.ದೇವೇಂದ್ರಪ್ಪ, ಬಳ್ಳಾರಿ

ಟಿಕೆಟ್‌ ನಿರಾಕರಣೆ ಬಳಿಕ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಲ್ಲಷ್ಟೇ ಭಾಗಿ

ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ

227: ಒಟ್ಟು ಅಭ್ಯರ್ಥಿಗಳು:

206: ಪುರುಷರು

21: ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT