<p><strong>ನವದೆಹಲಿ:</strong> ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಯತ್ನಿಸಲು ಜೆಡಿಯು ಮತ್ತು ಟಿಡಿಪಿ ಪಕ್ಷಗಳನ್ನು ಸಂಪರ್ಕಿಸಬೇಕೆ? ಎನ್ನುವ ಬಗ್ಗೆ ಇಂಡಿಯಾ ಒಕ್ಕೂಟ ನಾಳೆ (ಜೂ.3) ಸಭೆ ಸೇರಿ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.</p><p>ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ‘ನಾಳೆ ನಮ್ಮ ಪಕ್ಷದ ಪಾಲುದಾರರೊಂದಿಗೆ ಸಭೆ ನಡೆಸಲಿದ್ದೇವೆ. ಸಭೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಈ ಪಡೆದುಕೊಳ್ಳುತ್ತೇವೆ. ನಂತರ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.</p><p>‘ನಮ್ಮ ಮಿತ್ರಪಕ್ಷಗಳ ಅಭಿಪ್ರಾಯ ಕೇಳದೆ ನಾವು ಏನನ್ನೂ ಹೇಳುವುದಿಲ್ಲ. ನಮ್ಮ ಮೈತ್ರಿ ಒಕ್ಕೂಟ ಆ ಬಗ್ಗೆ ನಾಳೆ ನಿರ್ಧರಿಸಲಿದೆ. ಅವರು ಏನು ನಿರ್ಧರಿಸಿದರೂ ನಾವು ಅದರಂತೆ ಕಾರ್ಯನಿರ್ವಹಿಸುತ್ತೇವೆ. ಸಾರ್ವತ್ರಿಕ ಚುನಾವಣೆಗಳು ಸಂವಿಧಾನ ಉಳಿಸುವ ಹೋರಾಟ. ಭಾರತದ ಬಡವರು ಮತ್ತು ಹಿಂದುಳಿದವರು ಸಂವಿಧಾನವನ್ನು ಉಳಿಸಲು ನಿಂತಿದ್ದಾರೆ’ ಎಂದರು.</p><p>ಲೋಕಸಭೆ ಚುನಾವಣೆಯ ಫಲಿತಾಂಶಗಳು ಮತ್ತು ಟ್ರೆಂಡ್ಗಳ ಪ್ರಕಾರ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಆದರೆ ಮ್ಯಾಜಿಕ್ ನಂಬರ್ 272 ಕ್ಕಿಂತ ಕಡಿಮೆಯಾಗಲಿದೆ ಎಂದು ಅವರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.</p>.ಜನರ ಹಾಗೂ ಪ್ರಜಾತಂತ್ರದ ಗೆಲುವು, ಮೋದಿಗೆ ನೈತಿಕ ಸೋಲು: ಖರ್ಗೆ.ನಿತೀಶ್, ನಾಯ್ಡು ಎನ್ಡಿಎ ತೊರೆದು ಸರ್ಕಾರ ರಚಿಸಲು ‘ಇಂಡಿಯಾ’ ಸೇರಲಿದ್ದಾರೆ: RJD.Election Results 2024 Highlights: NDA ಗೆಲ್ಲಿಸಿದ್ದಕ್ಕೆ ಧನ್ಯವಾದ: ಮೋದಿ.LS Result 2024: ಎನ್ಡಿಎನಲ್ಲೇ ಉಳಿಯುತ್ತೇವೆ ಎಂದ ಜೆಡಿಯು ನಾಯಕ ತ್ಯಾಗಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಯತ್ನಿಸಲು ಜೆಡಿಯು ಮತ್ತು ಟಿಡಿಪಿ ಪಕ್ಷಗಳನ್ನು ಸಂಪರ್ಕಿಸಬೇಕೆ? ಎನ್ನುವ ಬಗ್ಗೆ ಇಂಡಿಯಾ ಒಕ್ಕೂಟ ನಾಳೆ (ಜೂ.3) ಸಭೆ ಸೇರಿ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.</p><p>ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ‘ನಾಳೆ ನಮ್ಮ ಪಕ್ಷದ ಪಾಲುದಾರರೊಂದಿಗೆ ಸಭೆ ನಡೆಸಲಿದ್ದೇವೆ. ಸಭೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಈ ಪಡೆದುಕೊಳ್ಳುತ್ತೇವೆ. ನಂತರ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.</p><p>‘ನಮ್ಮ ಮಿತ್ರಪಕ್ಷಗಳ ಅಭಿಪ್ರಾಯ ಕೇಳದೆ ನಾವು ಏನನ್ನೂ ಹೇಳುವುದಿಲ್ಲ. ನಮ್ಮ ಮೈತ್ರಿ ಒಕ್ಕೂಟ ಆ ಬಗ್ಗೆ ನಾಳೆ ನಿರ್ಧರಿಸಲಿದೆ. ಅವರು ಏನು ನಿರ್ಧರಿಸಿದರೂ ನಾವು ಅದರಂತೆ ಕಾರ್ಯನಿರ್ವಹಿಸುತ್ತೇವೆ. ಸಾರ್ವತ್ರಿಕ ಚುನಾವಣೆಗಳು ಸಂವಿಧಾನ ಉಳಿಸುವ ಹೋರಾಟ. ಭಾರತದ ಬಡವರು ಮತ್ತು ಹಿಂದುಳಿದವರು ಸಂವಿಧಾನವನ್ನು ಉಳಿಸಲು ನಿಂತಿದ್ದಾರೆ’ ಎಂದರು.</p><p>ಲೋಕಸಭೆ ಚುನಾವಣೆಯ ಫಲಿತಾಂಶಗಳು ಮತ್ತು ಟ್ರೆಂಡ್ಗಳ ಪ್ರಕಾರ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಆದರೆ ಮ್ಯಾಜಿಕ್ ನಂಬರ್ 272 ಕ್ಕಿಂತ ಕಡಿಮೆಯಾಗಲಿದೆ ಎಂದು ಅವರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.</p>.ಜನರ ಹಾಗೂ ಪ್ರಜಾತಂತ್ರದ ಗೆಲುವು, ಮೋದಿಗೆ ನೈತಿಕ ಸೋಲು: ಖರ್ಗೆ.ನಿತೀಶ್, ನಾಯ್ಡು ಎನ್ಡಿಎ ತೊರೆದು ಸರ್ಕಾರ ರಚಿಸಲು ‘ಇಂಡಿಯಾ’ ಸೇರಲಿದ್ದಾರೆ: RJD.Election Results 2024 Highlights: NDA ಗೆಲ್ಲಿಸಿದ್ದಕ್ಕೆ ಧನ್ಯವಾದ: ಮೋದಿ.LS Result 2024: ಎನ್ಡಿಎನಲ್ಲೇ ಉಳಿಯುತ್ತೇವೆ ಎಂದ ಜೆಡಿಯು ನಾಯಕ ತ್ಯಾಗಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>