‘ರಾಮನಗರ ಜನರ ಸೇವೆ ಮಾಡಲು ಅಣ್ಣ, ತಮ್ಮ ಇರುವುದು’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಅವರು ಏನು ಸೇವೆ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರಿನಲ್ಲಿ ಫ್ಲ್ಯಾಟ್ ನಕ್ಷೆ ಅನುಮೋದನೆಗೆ ಅಡಿಗೆ ₹ 100 ದರ ನಿಗದಿ ಮಾಡಿರುವುದು ಸೇವೆ ಅಲ್ಲವೆ? ಎಲ್ಲರಿಗೂ ಧಮ್ಕಿ ಹಾಕುವುದೂ ಒಂದು ಸೇವೆ. ಅದನ್ನೆ ತಾನೆ ಮಾಡಡುತ್ತಾ ಇರುವುದು’ ಎಂದು ಕೇಳಿದರು.