ಖುಷ್ಬು ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಉಪಾಸನ ಅವರ ಹೇಳಿಕೆಗೆ ಸಹಮತಿ ವ್ಯಕ್ತಪಡಿಸಿದ್ದಾರೆ. ‘ಚೇಂಜ್ ವಿತ್ಇನ್ ಕಾರ್ಯಕ್ರಮ ಅದಾಗಿದ್ದು, ಸಿನಿಮಾ ರಂಗದಲ್ಲಿ ಬದಲಾವಣೆಯಾದರೆ ಸಮಾಜದಲ್ಲಿಯೂ ಬದಲಾವಣೆ ಸಾಧ್ಯ ಎನ್ನುವ ಆಶಯದೊಂದಿಗೆ ಆ ಕಾರ್ಯಕ್ರಮಕ್ಕೆ ನಟರನ್ನು ಆಹ್ವಾನಿಸಲಾಗಿದೆ. ಆ ರೀತಿ ಯೋಚಿಸಿದರೆ ದಕ್ಷಿಣದಿಂದಲೇ ಅತ್ಯುತ್ತಮ ಸಿನಿಮಾಗಳು ಸಿದ್ಧವಾಗಿವೆ. ಹಿಂದಿ ಸಿನಿಮಾಗಳೊಂದೆ ಈ ದೇಶವನ್ನು ಪ್ರತಿನಿಧಿಸುವುದಿಲ್ಲ. ಈ ದೇಶದ ದೊಡ್ಡ ಸಿನಿಮಾರಂಗವೆಂದರೆ ಅದು, ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರೀಸ್. ಆದರೆ, ಇಲ್ಲಿಂದ ಯಾರೊಬ್ಬರನ್ನು ಆಹ್ವಾನಿಸಿಲ್ಲ’ ಎಂದು ಟೀಕಿಸಿದ್ದಾರೆ.