ಈ ಚಿತ್ರಕ್ಕೆ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಧ್ರುವ ಅವರಿಗಾಗಿಯೇ ಈ ಕಥೆಯನ್ನು ಹೆಣೆದಿರೋ ಅರ್ಜುನ್ ಸರ್ಜಾ, ‘ಧ್ರುವನಿಗೆ ಕಥೆ ಒಪ್ಪಿಸುವುದು ಅಷ್ಟು ಸುಲಭದ ಮಾತಲ್ಲ’ ಎಂದಿದ್ದಾರೆ. ಕಥೆ ಬಗ್ಗೆ ವಿವರಣೆ ನೀಡಿದ ಅವರು, ‘ಇವತ್ತು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಒಂದು ಚಳವಳಿಯ ರೂಪ ಪಡೆದಿದೆ. ಇದಕ್ಕೆ ಎಸ್.ಎಸ್.ರಾಜಮೌಳಿ, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಹೀಗೆ ಹಲವರು ಕಾರಣ. ‘ಮಾರ್ಟಿನ್’ ಎನ್ನುವುದು ಬೃಹತ್ ಪ್ರಾಜೆಕ್ಟ್. ಇದು ಧ್ರುವನ ಐದನೇ ಸಿನಿಮಾ. ಆತನಿಗೆ ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುವ ಆಸೆ. ಯಾವ ರೀತಿಯ ಕಥೆ ಮಾಡಬೇಕು ಎನ್ನುವುದನ್ನು ನಾವೆಲ್ಲರೂ ಕೂತು ಚರ್ಚೆ ಮಾಡಿದೆವು. ಧ್ರುವನಿಗೆ ಕಥೆ ಒಪ್ಪಿಸುವುದು ತುಂಬಾನೆ ಕಷ್ಟ. ಧ್ರುವನಿಗೆ ಒಂದು ಲೈನ್ ಇಷ್ಟವಾದ ಮೇಲೆ ಮುಂದುವರಿ ದೆವು. ನಾನು ಇದುವರೆಗೆ ಮಾಡಿದ ಕಥೆಗಳ ಪೈಕಿ, ‘ಮಾರ್ಟಿನ್’ ಅತ್ಯುತ್ತಮ ಕಮರ್ಷಿಯಲ್ ಕಥೆ. ಚಿತ್ರಕಥೆಯಲ್ಲಿ
ಹಲವು ತಿರುವುಗಳಿವೆ. ಚಿತ್ರಕ್ಕಾಗಿ ಧ್ರುವನಲ್ಲಿದ್ದ ಆಸ್ಥೆ ಮೆಚ್ಚುವಂತಹದ್ದು. ನಾನಿಷ್ಟು ಸಿನಿಮಾ ಮಾಡಿದರೂ, ಅವನ ಬಳಿ ಕಲಿಯುವುದು ಬಹಳಷ್ಟಿದೆ’ ಎನ್ನುತ್ತಾರೆ.