<p>ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಲಲಿತ ಕಲಾ ಸಂಘದ 20ರ ಸಂಭ್ರಮದ ಸಮಾರೋಪಕ್ಕೆ ಅತಿಥಿಯಾಗಿ ಬಂದಿದ್ದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು, ತಮ್ಮ ಬಾಲ್ಯದ ಜೀವನ ಹಾಗೂ ವೃತ್ತಿ ಬದುಕಿನ ಹಲವು ಕುತೂಹಲಕಾರಿ ಘಟನೆಗಳನ್ನು ನೆನಪಿಸಿಕೊಂಡರು.</p>.<p>**</p>.<p>ರಂಗಭೂಮಿ, ಕಿರುತೆರೆ, ಬೆಳ್ಳಿ ತೆರೆಯಲ್ಲಿ ಮಿಂಚುವ ಹಲವು ಕಲಾವಿದರ ಕೊನೆಗಾಲದ ಸಂಕಷ್ಟವನ್ನು ನಾವೇ ಕೇಳಬೇಕಿದೆ. ನಮ್ಮಿಂದಾದ ಕಿರು ಸಹಾಯವನ್ನು ಮಾಡಬೇಕಾದ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಅನಿವಾರ್ಯವೂ ಆಗಿದೆ. ಅವರಿಗೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮವೂ ಆಗಬೇಕಿದೆ.</p>.<p>ಬಾಲ್ಯದಿಂದಲೂ 70ರ ಹರೆಯದವರೆಗೂ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈಗಲೂ ಲವಲವಿಕೆಯಿಂದ ಚಿತ್ರೀಕರಣದಲ್ಲಿ ಭಾಗಿಯಾಗುವೆ. ನನ್ನ ದುಡಿಮೆಯಲ್ಲಿ ಒಂದಿಷ್ಟು ಹಣವನ್ನು 10 ಕಲಾವಿದರ ಕೊನೆಗಾಲದ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ನೀಡುತ್ತಿದ್ದೇನೆ.</p>.<p>ಕಲಾವಿದರ ಸಂಕಷ್ಟಕ್ಕಾಗಿ ಸಚಿವರು, ಅಧಿಕಾರಿಗಳ ಮುಂದೆ ಅಂಗಲಾಚಿಕೊಂಡು ನಿಲ್ಲಲ್ಲು ನನ್ನಿಂದ ಆಗಲ್ಲ. ಹಲವು ಬಾರಿ ಇದು ಪ್ರಯೋಜನಕ್ಕೂ ಬರಲ್ಲ ಎಂಬುದು ಅರಿವಾಗಿದೆ. ಆದ್ದರಿಂದ ನನ್ನ ದುಡಿಮೆಯಲ್ಲೇ ಸಹಕಾರ ನೀಡುತ್ತಿರುವೆ. ಕಲಾ ಲೋಕಕ್ಕೆ ನನ್ನ ಸೇವೆಯಿದು.</p>.<p><strong>₹ 5ಕ್ಕೆ ಒಂದು ನೃತ್ಯ:</strong> ಬಾಲ್ಯದಲ್ಲಿ ಸಂಗೀತ, ನೃತ್ಯ ಕಲಿಕೆಯಲ್ಲಿ ನನಗೆ ಆಸಕ್ತಿಯಿರಲಿಲ್ಲ. ಆದರೂ ತಾಯಿ ಬಲವಂತದಿಂದ ಅಭ್ಯಾಸಕ್ಕೆ ಕಳಿಸುತ್ತಿದ್ದರು. ನಾನು ಕಲಿತೆ. ನಮ್ಮದು ದೊಡ್ಡ ಕುಟುಂಬ. ನಾವು 8 ಮಕ್ಕಳಿದ್ದೆವು, ತಂದೆ ವ್ಯಾಪಾರಿ. ಎಲ್ಲವೂ ಅನುಕೂಲವಿತ್ತು. ಎಂಟನೇ ತರಗತಿಯಲ್ಲಿದ್ದಾಗ ನಮ್ಮಪ್ಪ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದರು. ಸಂಸಾರ ನೌಕೆ ಸಾಗುವುದೇ ದುಸ್ತರ ಎನ್ನುವಂತ ಸ್ಥಿತಿ. ಬಾಲ್ಯದಲ್ಲಿ ನಾನು ಕಲಿತ ನೃತ್ಯ ನಮ್ಮ ಕುಟುಂಬಕ್ಕೆ ಆಸರೆಯಾಯ್ತು.</p>.<p>ಆಗ ರಂಗಭೂಮಿ ಪ್ರವೇಶಿಸಿದೆ. ಆರಂಭದ ದಿನಗಳಲ್ಲಿ ಒಂದು ನೃತ್ಯ ಮಾಡಿದರೆ 5 ರೂಪಾಯಿ ಕೊಡೋರು. ಇದು ವಾರಕ್ಕೆ ಸಾಕಾಗೋದು. ತಿಂಗಳಿಗೆ ಇಂತಹ ಎರಡ್ಮೂರು ಕಾರ್ಯಕ್ರಮ ಸಿಗುತ್ತಿದ್ದವು. ನಂತರ ಪಾತ್ರ ಸಿಕ್ಕಿತ್ತು. ಒಂದು ಪಾತ್ರಕ್ಕೆ ₹ 15. ತಿಂಗಳ ರೇಷನ್ ಆಗೋದು. ಹೀಗೆ ಕಲೆ ನನ್ನ ಬದುಕು, ಕುಟುಂಬವನ್ನು ಕೈ ಹಿಡಿಯಿತು.</p>.<p><strong>ಏಕಾಂತಿಯ ಪ್ರಣಯಿ:</strong> ನಮ್ಮೆಜಮಾನ್ರು ಲೋಕೇಶ್ ಸುಬ್ಬಯ್ಯ ನಾಯ್ಡು ಅವರ ಪುತ್ರ. ರಂಗಭೂಮಿ, ಕನ್ನಡ ಚಲನಚಿತ್ರ ರಂಗಕ್ಕೆ ಹಲವು ಪ್ರಥಮಗಳನ್ನು ನೀಡಿದ ಕುಟುಂಬದ ಕುಡಿ.</p>.<p>ಲೋಕೇಶ್ ಹೆಚ್ಚು ಏಕಾಂತ ಬಯಸುತ್ತಿದ್ದವರು. ತಮ್ಮ ಜೀವನದಲ್ಲಿ ಹತ್ತರಿಂದ ಹನ್ನೆರೆಡಕ್ಕೂ ಹೆಚ್ಚು ಆಪ್ತರನ್ನು ಹೊಂದದವರು. ಅದರಲ್ಲಿ ನಾನೂ ಒಬ್ಬಾಕೆ. ಅತ್ಯಾಪ್ತೆ.</p>.<p>ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಯಾರೊಟ್ಟಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಗೆಳತಿಯರ ಸವಾಲು ಸ್ವೀಕರಿಸಿ ಒಂದೊಮ್ಮೆ ಲೋಕೇಶ್ ಮಾತನಾಡಿಸಿದೆ. ಆಗಿನಿಂದ ನಮ್ಮ ನಡುವೆ ಒಡನಾಟ ಬೆಳೆಯಿತು. ಸ್ನೇಹವಾಯ್ತು. ಇದೂ ಪ್ರಣಯಕ್ಕೂ ತಿರುಗಿ, ಮದುವೆಯೂ ಆಯಿತು.</p>.<p>ನಮ್ಮ ಮದುವೆ ದಿನ ಕಾಕನಕೋಟೆ ನಾಟಕದ 25ನೇ ಪ್ರದರ್ಶನ. ಬೆಳಿಗ್ಗೆ 8 ಗಂಟೆಗೆ ಮದುವೆ. 9 ಗಂಟೆಗೆ ನಾಟಕ ಶುರು. ಅಪ್ಪ–ಮಗಳ ಪಾತ್ರದಲ್ಲಿ ಇಬ್ಬರೂ ಅಭಿನಯಿಸಿದೆವು. ಸಿ.ಆರ್. ಸಿಂಹ ನಡು ನಡುವೆ ಕಿಚಾಯಿಸುತ್ತಿದ್ದರು. ‘ಮೈ ಮರೆಯಬೇಡ್ರೀ ಕಣ್ರೋ’ ಎನ್ನುತ್ತಿದ್ದರು.</p>.<p>ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವೆ. ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದ ತೃಪ್ತಿಯಿದೆ. ಆದರೆ ಲೋಕೇಶ್ ಅವರಿಂದ ಪಾತ್ರ ನಿಭಾಯಿಸುವಿಕೆಯ ಕಲೆ ಕಲಿಯಲಿಕ್ಕಾಗಲಿಲ್ಲವಲ್ಲಾ ಎಂಬುದೊಂದೇ ನನ್ನ ಕೊರಗಾಗಿದೆ.</p>.<p>ಬಣ್ಣದ ಲೋಕಕ್ಕೆ ಮಗ ಸೃಜನ್ ಲೋಕೇಶ್ ಬರಬಾರದು ಎಂಬುದು ನನ್ನ ಹಟವಾಗಿತ್ತು. ಆತ ರ್ಯಾಂಕ್ ಸ್ಟೂಡೆಂಟ್ ಆಗಿದ್ದ. ಆದರೆ ಲೋಕೇಶ್, ‘ಮಕ್ಕಳಿಗೆ ಏನನ್ನೂ ಹೇರಬೇಡ’ ಅಂದ್ರು. ಆಗಿನಿಂದ ಅವನಷ್ಟಕ್ಕೆ ಬಿಟ್ಟೆ. ಅವ ಇದೀಗ ‘ಮಜಾ ಟಾಕೀಸ್’ನಿಂದ ಎಲ್ಲೆಡೆ ಖ್ಯಾತನಾಗಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಲಲಿತ ಕಲಾ ಸಂಘದ 20ರ ಸಂಭ್ರಮದ ಸಮಾರೋಪಕ್ಕೆ ಅತಿಥಿಯಾಗಿ ಬಂದಿದ್ದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು, ತಮ್ಮ ಬಾಲ್ಯದ ಜೀವನ ಹಾಗೂ ವೃತ್ತಿ ಬದುಕಿನ ಹಲವು ಕುತೂಹಲಕಾರಿ ಘಟನೆಗಳನ್ನು ನೆನಪಿಸಿಕೊಂಡರು.</p>.<p>**</p>.<p>ರಂಗಭೂಮಿ, ಕಿರುತೆರೆ, ಬೆಳ್ಳಿ ತೆರೆಯಲ್ಲಿ ಮಿಂಚುವ ಹಲವು ಕಲಾವಿದರ ಕೊನೆಗಾಲದ ಸಂಕಷ್ಟವನ್ನು ನಾವೇ ಕೇಳಬೇಕಿದೆ. ನಮ್ಮಿಂದಾದ ಕಿರು ಸಹಾಯವನ್ನು ಮಾಡಬೇಕಾದ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಅನಿವಾರ್ಯವೂ ಆಗಿದೆ. ಅವರಿಗೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮವೂ ಆಗಬೇಕಿದೆ.</p>.<p>ಬಾಲ್ಯದಿಂದಲೂ 70ರ ಹರೆಯದವರೆಗೂ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈಗಲೂ ಲವಲವಿಕೆಯಿಂದ ಚಿತ್ರೀಕರಣದಲ್ಲಿ ಭಾಗಿಯಾಗುವೆ. ನನ್ನ ದುಡಿಮೆಯಲ್ಲಿ ಒಂದಿಷ್ಟು ಹಣವನ್ನು 10 ಕಲಾವಿದರ ಕೊನೆಗಾಲದ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ನೀಡುತ್ತಿದ್ದೇನೆ.</p>.<p>ಕಲಾವಿದರ ಸಂಕಷ್ಟಕ್ಕಾಗಿ ಸಚಿವರು, ಅಧಿಕಾರಿಗಳ ಮುಂದೆ ಅಂಗಲಾಚಿಕೊಂಡು ನಿಲ್ಲಲ್ಲು ನನ್ನಿಂದ ಆಗಲ್ಲ. ಹಲವು ಬಾರಿ ಇದು ಪ್ರಯೋಜನಕ್ಕೂ ಬರಲ್ಲ ಎಂಬುದು ಅರಿವಾಗಿದೆ. ಆದ್ದರಿಂದ ನನ್ನ ದುಡಿಮೆಯಲ್ಲೇ ಸಹಕಾರ ನೀಡುತ್ತಿರುವೆ. ಕಲಾ ಲೋಕಕ್ಕೆ ನನ್ನ ಸೇವೆಯಿದು.</p>.<p><strong>₹ 5ಕ್ಕೆ ಒಂದು ನೃತ್ಯ:</strong> ಬಾಲ್ಯದಲ್ಲಿ ಸಂಗೀತ, ನೃತ್ಯ ಕಲಿಕೆಯಲ್ಲಿ ನನಗೆ ಆಸಕ್ತಿಯಿರಲಿಲ್ಲ. ಆದರೂ ತಾಯಿ ಬಲವಂತದಿಂದ ಅಭ್ಯಾಸಕ್ಕೆ ಕಳಿಸುತ್ತಿದ್ದರು. ನಾನು ಕಲಿತೆ. ನಮ್ಮದು ದೊಡ್ಡ ಕುಟುಂಬ. ನಾವು 8 ಮಕ್ಕಳಿದ್ದೆವು, ತಂದೆ ವ್ಯಾಪಾರಿ. ಎಲ್ಲವೂ ಅನುಕೂಲವಿತ್ತು. ಎಂಟನೇ ತರಗತಿಯಲ್ಲಿದ್ದಾಗ ನಮ್ಮಪ್ಪ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದರು. ಸಂಸಾರ ನೌಕೆ ಸಾಗುವುದೇ ದುಸ್ತರ ಎನ್ನುವಂತ ಸ್ಥಿತಿ. ಬಾಲ್ಯದಲ್ಲಿ ನಾನು ಕಲಿತ ನೃತ್ಯ ನಮ್ಮ ಕುಟುಂಬಕ್ಕೆ ಆಸರೆಯಾಯ್ತು.</p>.<p>ಆಗ ರಂಗಭೂಮಿ ಪ್ರವೇಶಿಸಿದೆ. ಆರಂಭದ ದಿನಗಳಲ್ಲಿ ಒಂದು ನೃತ್ಯ ಮಾಡಿದರೆ 5 ರೂಪಾಯಿ ಕೊಡೋರು. ಇದು ವಾರಕ್ಕೆ ಸಾಕಾಗೋದು. ತಿಂಗಳಿಗೆ ಇಂತಹ ಎರಡ್ಮೂರು ಕಾರ್ಯಕ್ರಮ ಸಿಗುತ್ತಿದ್ದವು. ನಂತರ ಪಾತ್ರ ಸಿಕ್ಕಿತ್ತು. ಒಂದು ಪಾತ್ರಕ್ಕೆ ₹ 15. ತಿಂಗಳ ರೇಷನ್ ಆಗೋದು. ಹೀಗೆ ಕಲೆ ನನ್ನ ಬದುಕು, ಕುಟುಂಬವನ್ನು ಕೈ ಹಿಡಿಯಿತು.</p>.<p><strong>ಏಕಾಂತಿಯ ಪ್ರಣಯಿ:</strong> ನಮ್ಮೆಜಮಾನ್ರು ಲೋಕೇಶ್ ಸುಬ್ಬಯ್ಯ ನಾಯ್ಡು ಅವರ ಪುತ್ರ. ರಂಗಭೂಮಿ, ಕನ್ನಡ ಚಲನಚಿತ್ರ ರಂಗಕ್ಕೆ ಹಲವು ಪ್ರಥಮಗಳನ್ನು ನೀಡಿದ ಕುಟುಂಬದ ಕುಡಿ.</p>.<p>ಲೋಕೇಶ್ ಹೆಚ್ಚು ಏಕಾಂತ ಬಯಸುತ್ತಿದ್ದವರು. ತಮ್ಮ ಜೀವನದಲ್ಲಿ ಹತ್ತರಿಂದ ಹನ್ನೆರೆಡಕ್ಕೂ ಹೆಚ್ಚು ಆಪ್ತರನ್ನು ಹೊಂದದವರು. ಅದರಲ್ಲಿ ನಾನೂ ಒಬ್ಬಾಕೆ. ಅತ್ಯಾಪ್ತೆ.</p>.<p>ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಯಾರೊಟ್ಟಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಗೆಳತಿಯರ ಸವಾಲು ಸ್ವೀಕರಿಸಿ ಒಂದೊಮ್ಮೆ ಲೋಕೇಶ್ ಮಾತನಾಡಿಸಿದೆ. ಆಗಿನಿಂದ ನಮ್ಮ ನಡುವೆ ಒಡನಾಟ ಬೆಳೆಯಿತು. ಸ್ನೇಹವಾಯ್ತು. ಇದೂ ಪ್ರಣಯಕ್ಕೂ ತಿರುಗಿ, ಮದುವೆಯೂ ಆಯಿತು.</p>.<p>ನಮ್ಮ ಮದುವೆ ದಿನ ಕಾಕನಕೋಟೆ ನಾಟಕದ 25ನೇ ಪ್ರದರ್ಶನ. ಬೆಳಿಗ್ಗೆ 8 ಗಂಟೆಗೆ ಮದುವೆ. 9 ಗಂಟೆಗೆ ನಾಟಕ ಶುರು. ಅಪ್ಪ–ಮಗಳ ಪಾತ್ರದಲ್ಲಿ ಇಬ್ಬರೂ ಅಭಿನಯಿಸಿದೆವು. ಸಿ.ಆರ್. ಸಿಂಹ ನಡು ನಡುವೆ ಕಿಚಾಯಿಸುತ್ತಿದ್ದರು. ‘ಮೈ ಮರೆಯಬೇಡ್ರೀ ಕಣ್ರೋ’ ಎನ್ನುತ್ತಿದ್ದರು.</p>.<p>ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವೆ. ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದ ತೃಪ್ತಿಯಿದೆ. ಆದರೆ ಲೋಕೇಶ್ ಅವರಿಂದ ಪಾತ್ರ ನಿಭಾಯಿಸುವಿಕೆಯ ಕಲೆ ಕಲಿಯಲಿಕ್ಕಾಗಲಿಲ್ಲವಲ್ಲಾ ಎಂಬುದೊಂದೇ ನನ್ನ ಕೊರಗಾಗಿದೆ.</p>.<p>ಬಣ್ಣದ ಲೋಕಕ್ಕೆ ಮಗ ಸೃಜನ್ ಲೋಕೇಶ್ ಬರಬಾರದು ಎಂಬುದು ನನ್ನ ಹಟವಾಗಿತ್ತು. ಆತ ರ್ಯಾಂಕ್ ಸ್ಟೂಡೆಂಟ್ ಆಗಿದ್ದ. ಆದರೆ ಲೋಕೇಶ್, ‘ಮಕ್ಕಳಿಗೆ ಏನನ್ನೂ ಹೇರಬೇಡ’ ಅಂದ್ರು. ಆಗಿನಿಂದ ಅವನಷ್ಟಕ್ಕೆ ಬಿಟ್ಟೆ. ಅವ ಇದೀಗ ‘ಮಜಾ ಟಾಕೀಸ್’ನಿಂದ ಎಲ್ಲೆಡೆ ಖ್ಯಾತನಾಗಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>