ಎಲ್ಲರಿಗೂ ನಮಸ್ಕಾರ, ನಾನು ಅಕ್ಟೋಬರ್ 7 ರಿಂದ ಜನ ಗಣ ಮನ ಚಿತ್ರದ ಚಿತ್ರೀಕರಣದಲ್ಲಿದ್ದೇನೆ. ಕೋವಿಡ್ ನಿಯಮಗಳು ಮತ್ತು ಸಂಬಂಧಿತ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ನಾವು ಕಟ್ಟುನಿಟ್ಟಾದ ಕ್ರಮಗಳನ್ನು ನಾವು ಪಾಲಿಸಿದ್ದೇವೆ. ಚಿತ್ರೀಕರಣದಲ್ಲಿ ಭಾಗಿಯಾಗುವ ಮುನ್ನ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ನಾವು ಹಾಕಿದ್ದ ನ್ಯಾಯಾಲಯದ ಕೋಣೆಯ ಸೆಟ್ನಲ್ಲಿ ನಡೆದ ಚಿತ್ರೀಕರಣದ ಕೊನೆಯ ದಿನವೂ ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ ದುರದೃಷ್ಟವಶಾತ್, ಈ ಬಾರಿ ವರದಿಯು ಪಾಸಿಟಿವ್ ಆಗಿದೆ ಮತ್ತು ನಾನು ಐಸೋಲೇಷನ್ಗೆ ತೆರಳಿದ್ದೇನೆ ಎಂದು ಪೃಥ್ವಿರಾಜ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.