<p>ಅಶ್ವಿನಿ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅಪ್ಪು ಜತೆಗಿನ ಆತ್ಮೀಯ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. </p><p>ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿರುವ ಸಂತೋಷ್ ಅವರು, ‘ಯುವರತ್ನ’ ಚಿತ್ರೀಕರಣ ಮಾಡಿದ ಪ್ರತಿ ಕಾಲೇಜಿನಲ್ಲೂ ಸಂಶೋಧನಾ ವಿದ್ಯಾರ್ಥಿಗಳಿಗೆ ₹2–5 ಲಕ್ಷ ಹಣ ಹಾಗೂ ಕಂಪ್ಯೂಟರ್ಗಳನ್ನು ಕೊಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಯಾಕಾಗಿ ಲಕ್ಷ ಲಕ್ಷ ಕೊಡುತ್ತೀರಾ ಎಂದು ನಾನು ಕೇಳಿದ್ದೆ, ಅದಕ್ಕೆ ಅಪ್ಪು ‘ನಾನು ಓದಿಲ್ಲ, ಶಿಕ್ಷಣ ಪಡೆಯುವವರಿಗಾದರೂ ಸಹಕಾರಿಯಾಗಲಿ' ಎನ್ನುತ್ತಿದ್ದರು. </p>.'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ.<p>ಅವರ ನಿಸ್ವಾರ್ಥ ಸೇವೆಗೆ ಜನ ಅವರನ್ನು ಈಗಲೂ ದೇವರಂತೆ ಕಾಣುತ್ತಿದ್ದಾರೆ’ ಎಂದು ಪುನೀತ್ ಅವರ ಬಗ್ಗೆ ಕೊಂಡಾಡಿದ್ದಾರೆ.</p><p>ಅಶ್ವಿನಿ ಮೇಡಂ ಅವರ ಮುಖದಲ್ಲಿ ಈಗಲೂ ಅಷ್ಟೇ ಬೇಸರ, ನೋವು ಇದೆ. ಆದರೆ ಎಂದಿಗೂ ತೋರಿಸಿಕೊಂಡಿಲ್ಲ. </p><p>ದಾನ, ಧರ್ಮ, ಸಹಜತೆ, ಸೌಜನ್ಯ, ಸಂಸ್ಕಾರಕ್ಕೆ ಪುನೀತ್ ರಾಜ್ಕುಮಾರ್ ಒಂದೇ ಹೆಸರು ಎಂದು ಅಪ್ಪು ಅವರ ಸರಳತೆ ಬಗ್ಗೆ ಸಂತೋಷ್ ಆನಂದ್ ಹೇಳಿಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಶ್ವಿನಿ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅಪ್ಪು ಜತೆಗಿನ ಆತ್ಮೀಯ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. </p><p>ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿರುವ ಸಂತೋಷ್ ಅವರು, ‘ಯುವರತ್ನ’ ಚಿತ್ರೀಕರಣ ಮಾಡಿದ ಪ್ರತಿ ಕಾಲೇಜಿನಲ್ಲೂ ಸಂಶೋಧನಾ ವಿದ್ಯಾರ್ಥಿಗಳಿಗೆ ₹2–5 ಲಕ್ಷ ಹಣ ಹಾಗೂ ಕಂಪ್ಯೂಟರ್ಗಳನ್ನು ಕೊಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಯಾಕಾಗಿ ಲಕ್ಷ ಲಕ್ಷ ಕೊಡುತ್ತೀರಾ ಎಂದು ನಾನು ಕೇಳಿದ್ದೆ, ಅದಕ್ಕೆ ಅಪ್ಪು ‘ನಾನು ಓದಿಲ್ಲ, ಶಿಕ್ಷಣ ಪಡೆಯುವವರಿಗಾದರೂ ಸಹಕಾರಿಯಾಗಲಿ' ಎನ್ನುತ್ತಿದ್ದರು. </p>.'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ.<p>ಅವರ ನಿಸ್ವಾರ್ಥ ಸೇವೆಗೆ ಜನ ಅವರನ್ನು ಈಗಲೂ ದೇವರಂತೆ ಕಾಣುತ್ತಿದ್ದಾರೆ’ ಎಂದು ಪುನೀತ್ ಅವರ ಬಗ್ಗೆ ಕೊಂಡಾಡಿದ್ದಾರೆ.</p><p>ಅಶ್ವಿನಿ ಮೇಡಂ ಅವರ ಮುಖದಲ್ಲಿ ಈಗಲೂ ಅಷ್ಟೇ ಬೇಸರ, ನೋವು ಇದೆ. ಆದರೆ ಎಂದಿಗೂ ತೋರಿಸಿಕೊಂಡಿಲ್ಲ. </p><p>ದಾನ, ಧರ್ಮ, ಸಹಜತೆ, ಸೌಜನ್ಯ, ಸಂಸ್ಕಾರಕ್ಕೆ ಪುನೀತ್ ರಾಜ್ಕುಮಾರ್ ಒಂದೇ ಹೆಸರು ಎಂದು ಅಪ್ಪು ಅವರ ಸರಳತೆ ಬಗ್ಗೆ ಸಂತೋಷ್ ಆನಂದ್ ಹೇಳಿಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>