ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ನಟರ ಪಟ್ಟಿಗೆ ಸುದೀಪ್ ಅವರ ಹೆಸರೂ ಸೇರುತ್ತದೆ. ಸುದೀಪ್ ಅವರು ಚಿತ್ರರಂಗ ಪ್ರವೇಶಿಸಿ 28 ವರ್ಷಗಳು ಸಂದಿವೆ. ಈ ಹಿನ್ನಲೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಶೇಷವಾಗಿ ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ.
ಕೆಲವು ವರ್ಷಗಳ ಹಿಂದೆ ನಾನು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರೊಂದಿಗೆ ಬ್ರಹ್ಮ ಚಿತ್ರಕ್ಕಾಗಿ ಕ್ಯಾಮೆರಾವನ್ನು ಎದುರಿಸಲು ವೇದಿಕೆ ಹತ್ತಿದ್ದೆ. ಈಗಾಗಲೇ 28 ವರ್ಷಗಳು ಕಳೆದಿದೆ. ಈ ಅಮೂಲ್ಯ ಉಡುಗೊರೆಗಾಗಿ ನಾನು ಪ್ರತಿಯೊಬ್ಬರಿಗೂ ಪ್ರೀತಿ, ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಿವರವಾದ ಪತ್ರವೊಂದನ್ನೂ ಬರೆದ ಸುದೀಪ್, ಇದೊಂದು ರೀತಿಯ ರೋಲರ್ ಕೋಸ್ಟರ್ ಪಯಣದಂತಿದೆ, ಅದರ ಪ್ರತಿಯೊಂದು ಕ್ಷಣವನ್ನೂ ನಾನು ಅನುಭವಿಸಿದ್ದೇನೆ. ನನ್ನೊಂದಿಗಿರುವ ಎಲ್ಲರಿಗೂ ಹಾಗೂ ನಾನು ನಾನಾಗಿರುವುದನ್ನು ಒಪ್ಪಿಕೊಂಡಿರುವುದಕ್ಕೆ ಧನ್ಯವಾದ ಎಂದೂ ಬರೆದುಕೊಂಡಿದ್ದಾರೆ.