ಹಾಡಿನ ಸಾಲುಗಳಿಂದ ವಿವಾದ
ಈ ಹಿಂದೆ ಸಿನಿಮಾದ ‘ಬಣ್ಣದ ಗೆಜ್ಜೆ’ ಸಿನಿಮಾದ ಹಾಡಿನ ಸಾಲುಗಳನ್ನು ನನ್ನ ಅನುಮತಿ ಇಲ್ಲದೆ ಬಳಸಿ ನಟಿ ರಮ್ಯಾ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ’ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಆಕ್ಷೇಪಣೆ ಮಾಡಿದ್ದರು. ಈ ಆರೋಪವನ್ನು ಸಿಟಿ ಸಿವಿಲ್ ಕೋರ್ಟ್ ತಳ್ಳಿ ಹಾಕಿತ್ತು.
‘ಹಾಡಿನ ಸಾಲುಗಳನ್ನು ಸಿನಿಮಾ ಟೈಟಲ್ ಆಗಿ ಬಳಸಿದರೆ ಅದು ಕಾಪಿರೈಟ್ ಆಗುವುದಿಲ್ಲ. ಈ ಟೈಟಲ್ ಅನ್ನು ರಮ್ಯಾ ಬೇರೆಯವರಿಂದ ಪಡೆದು ಕೊಂಡಿದ್ದಾರೆ. ಆದ್ದರಿಂದ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣ ನಡೆಸಬಹುದು ಹಾಗೂ ಬಿಡುಗಡೆಯನ್ನೂ ಮಾಡಬಹುದು’ ಎಂದು ಆದೇಶನ ನೀಡಿತ್ತು.
‘ನನ್ನ ಅನುಮತಿ ಇಲ್ಲದೆ ಬಣ್ಣದ ಗೆಜ್ಜೆ ಸಿನಿಮಾದ ಹಾಡುಗಳನ್ನು ಬಳಸಿ ಸಿನಿಮಾ ನಿರ್ಮಾಣ ಮಾಡುವುದು ಕಾಪಿರೈಟ್ ಉಲ್ಲಂಘನೆ’ ಎಂದು ರಾಜೇಂದ್ರ ಸಿಂಗ್ ಬಾಬು ಫಿಲ್ಮ್ ಚೇಂಬರ್ಗೂ ದೂರು ನೀಡಿದ್ದರು. ನಂತರ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.