<p>ಮೂರು ವರ್ಷದ ಜಾಹ್ನವಿಗೆ ಸೀಬೇಕಾಯಿ ಎಂದರೆ ಬಾಯಲ್ಲಿ ನೀರೂರುತ್ತದೆ. ಮಗಳಿಗಾಗಿ ಆಗತಾನೇ ಮಾರುಕಟ್ಟೆಯಿಂದ ತಂದಿದ್ದ ಸೀಬೇಕಾಯಿಯನ್ನು ಕೈಗಿಟ್ಟರು ಅಪ್ಪ. ಖುಷಿಯಿಂದ ಬಾಯಲ್ಲಿ ಕಚ್ಚಿ ತಿನ್ನುತ್ತಿದ್ದ ಮಗಳನ್ನು ಕಂಡ ಅಮ್ಮ ಘಕ್ಕನೇ ಕೈಯಲ್ಲಿದ್ದ ಹಣ್ಣನ್ನು ಕಸಿದುಕೊಂಡಳು. ಈಗ ತಾನೇ ಶೀತ, ಜ್ವರ ಬಿಟ್ಟು ಚೇತರಿಸಿಕೊಳ್ಳುತ್ತಿರುವ ಮಗಳಿಗೆ ಸೀಬೇಕಾಯಿ ಕೊಟ್ಟಿದ್ದು ಸರಿ ಎನಿಸಲಿಲ್ಲ ಅಮ್ಮನಿಗೆ. ಆಕೆಯ ಇಷ್ಟದ ಹಣ್ಣು ತಿಂದುಕೊಳ್ಳಲಿ ಬಿಡು ಎನ್ನುವುದು ಅಪ್ಪನ ವಾದ. ಚಳಿಗಾಲದಲ್ಲಿ ಸೀಬೇಕಾಯಿ ಒಳ್ಳೆಯದಲ್ಲ; ಗಂಟಲು ಕಟ್ಟುತ್ತದೆ ಎನ್ನುವುದು ತಾಯಿಯ ಸಿದ್ಧಾಂತ. ಅಪ್ಪ– ಅಮ್ಮನ ಈ ಇಬ್ಬಗೆಯ ನಿಲುವುಗಳಿಂದ ಗೊಂದಲಕ್ಕೊಳಗಾದಳು ಜಾಹ್ನವಿ.</p>.<p>***</p>.<p>‘ಚಳಿಗಾಲ ಶುರುವಾಗಿದೆ. ಆದಷ್ಟು ಬೆಚ್ಚಗಿರಿ. ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನಬೇಡಿ. ಕೊರೆಯುವ ಚಳಿ ಇದ್ದಾಗ ವಾಕಿಂಗ್ಗೆ ಹೋಗುವುದನ್ನು ಬಿಡಿ...’ ಹೃದಯ ಸಂಬಂಧಿ ಕಾಯಿಲೆ, ಬಿ.ಪಿ, ಶುಗರ್, ಕೀಲು ನೋವಿನ ಸಮಸ್ಯೆ ಇರುವ 70ರ ಹರೆಯದ ತಂದೆಗೆ ಅಮೆರಿಕದಲ್ಲಿರುವ ಮಗಳಿಂದ ದೂರವಾಣಿಯಲ್ಲಿ ದಕ್ಕಿದ ಕಾಳಜಿಯ ಮಾತುಗಳಿವು. ಆದರೆ, ಬಾಯಿ ಚಪಲ ಕೇಳಬೇಕಲ್ಲ. ಕರಿದ ಪದಾರ್ಥಗಳೇ ತಂದೆಗೆ ಹೆಚ್ಚು ಪ್ರೀತಿ. ಅವುಗಳಿಗೆ ಮೂರ್ನಾಲ್ಕು ತಿಂಗಳು ಕಡಿವಾಣ ಹಾಕು ಎಂದರೆ ಕೇಳಲು ಆದೀತೆ.</p>.<p>***</p>.<p>ಚಳಿಗಾಲ ಮೆಲ್ಲಗೆ ಮೈಯನ್ನು ಆವರಿಸುತ್ತಿದೆ. ಸುಳಿಗಾಳಿ ತ್ವಚೆಯನ್ನು ಒಣಗಿಸುತ್ತಿದೆ. ಈ ಸಮಯದಲ್ಲಿ ಮಕ್ಕಳು ಮತ್ತು ವಯಸ್ಸಾದವರನ್ನು ನೋಡಿಕೊಳ್ಳುವುದೇ ಸವಾಲು. ಮೇಲಿನ ಈ ಉದಾಹರಣೆಗಳು ಕೇವಲ ಒಬ್ಬಿಬ್ಬರದ್ದಲ್ಲ. ಮಕ್ಕಳು, ವಯಸ್ಸಾದವರು ಇರುವ ಪ್ರತಿ ಮನೆಗಳಲ್ಲೂ ಈ ರೀತಿಯ ದ್ವಂದ್ವಗಳು ಇದ್ದೇ ಇರುತ್ತವೆ. ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು, ಯಾವುದನ್ನು ತಿಂದರೆ ದೇಹಕ್ಕೆ ಅನುಕೂಲ, ಅನನುಕೂಲ ಎನ್ನುವ ಗೊಂದಲ ಶುರುವಾಗುತ್ತದೆ.</p>.<p>ಆದರೆ, ಈ ಋತುಮಾನದಲ್ಲಿ ಸಿಗುವ ಎಲ್ಲ ಬಗೆಯ ಹಣ್ಣುಗಳನ್ನೂ, ಆಹಾರ ಪದಾರ್ಥಗಳನ್ನು ದಾರಾಳವಾಗಿ ಸೇವಿಸಬಹುದು. ಹಾಗೆ ಸೇವಿಸುವಾಗ ಇತಿ– ಮಿತಿ ಇರಲಿ ಎನ್ನುವರು ಆಹಾರ ತಜ್ಞರು.</p>.<p>ಚಳಿಗಾಲದಲ್ಲಿ ಪರಿಸರದ ತಾಪಮಾನ ಇಳಿಕೆಯಾಗುತ್ತಾ ಬರುತ್ತದೆ. ಹಾಗೆಯೇ ದೇಹದ ತಾಪಮಾನವೂ ಇಳಿಕೆಯಾಗುತ್ತದೆ. ಇದನ್ನು ಸರಿದೂಗಿಸಿಕೊಳ್ಳಲು ಶರೀರವು ಚಯಾಪಚಯ ಕ್ರಿಯೆಯನ್ನು ಏರಿಸಿಕೊಳ್ಳುವ ಮೂಲಕ ಉಷ್ಣವನ್ನು ಉತ್ಪಾದಿಸಿಕೊಳ್ಳುತ್ತದೆ. ಆಹಾರದಲ್ಲಿ ಕೊಬ್ಬಿನ ಅಂಶವನ್ನು ಕರಗಿಸುತ್ತ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಹೆಚ್ಚು ಆಹಾರ ದೇಹಕ್ಕೆ ಬೇಕೆನಿಸುತ್ತದೆ. ಹೆಚ್ಚು ಹಸಿವು ಉಂಟಾಗುತ್ತದೆ. ಹಸಿವು ಎಂದು ಏನೇನೊ ಆಹಾರ ತಿನ್ನುವ ಬದಲು ಸಮತೋಲಿತ ಆಹಾರ ಸೇವಿಸಬೇಕು ಎನ್ನುವುದು ಆಹಾರ ತಜ್ಞರ ಸಲಹೆ.</p>.<p>ಋತುವಿಗೆ ಅನುಸಾರ ನಮ್ಮ ಆಹಾರ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ. ಗೋಧಿ, ಹೆಸರು ಕಾಳು, ಅಕ್ಕಿ, ವಿವಿಧ ಬಗೆಯ ಧಾನ್ಯಗಳನ್ನು ಅಡುಗೆಯಲ್ಲಿ ಬಳಸಿ. ಹಾಗಲಕಾಯಿ, ಸೋರೆಕಾಯಿ, ಹೀರೆಕಾಯಿ, ಕುಂಬಳಕಾಯಿ, ಚಳಿಗಾಲದ ಅಂತ್ಯಕ್ಕೆ ಸಿಗುವ ಅವರೆಕಾಯಿಯನ್ನು ಅಡುಗೆಯಲ್ಲಿ ಬಳಸಿ. ಈ ಸಮಯದಲ್ಲಿ ಹಸಿ ಶೇಂಗಾ ಬೇಯಿಸಿ ತಿಂದರೆ ಹೆಚ್ಚು ಪ್ರೋಟಿನ್ ಲಭ್ಯವಾಗುತ್ತದೆ. ಮಕ್ಕಳಿಗೂ ಇದು ಸೂಕ್ತ. ಶುಷ್ಕ ವಾತಾವರಣದ ಈ ಸಮಯದಲ್ಲಿ ಜಿಡ್ಡಿನಂಶಯುಕ್ತ ಹಾಲು, ಮಜ್ಜಿಗೆ, ತುಪ್ಪ, ಕೆನೆಯನ್ನೂ ನಿಯಮಿತವಾಗಿ ಸೇವಿಸಿದರೆ ಒಳ್ಳೆಯದು. ಹೆಚ್ಚು ಉಪ್ಪು, ಹೆಚ್ಚು ಹುಳಿ ಮತ್ತು ಖಾರದ ಪದಾರ್ಥಗಳನ್ನು ಹೆಚ್ಚು ಬಳಸಬಾರದು.</p>.<p>‘ಕಷಾಯಕ್ಕೆ ಬಳಸುವ ಕಾಳು ಮೆಣಸು, ಅರಿಸಿನ, ಚಕ್ಕೆ, ಲವಂಗ, ಏಲಕ್ಕಿ ಈ ರೀತಿಯ ಮಸಾಲೆ ಪದಾರ್ಥಗಳು ಆರೋಗ್ಯ ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತವೆ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಉಳ್ಳವರು ಹೆಚ್ಚು ನಾರಿನಂಶ ಇರುವ ಆಹಾರ ತಿನ್ನಬೇಕು. ಸೊಪ್ಪುಗಳು, ಬಣ್ಣ ಬಣ್ಣದ ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ನಾವು ಉಣ್ಣುವ ತಟ್ಟೆಯಲ್ಲಿನ ಪದಾರ್ಥಗಳು ಹೆಚ್ಚು ಬಣ್ಣಗಳಿಂದ ಕೂಡಿದ್ದರೆ ಆರೋಗ್ಯ ವೃದ್ಧಿಸುತ್ತದೆ’ ಎನ್ನುವರು ಆಹಾರ ತಜ್ಞೆ ಚೈತ್ರಾ ಕಿರಣ್.</p>.<p class="Subhead"><strong>ಗ್ರೀನ್ ಟೀ ಕುಡಿಯಿರಿ:</strong>ಚಳಿಗಾಲದ ಸಮಯದಲ್ಲಿ ದೇಹ ರಕ್ಷಣೆಗೆ ಗ್ರೀನ್ ಟೀ ಹೆಚ್ಚು ಸಹಕಾರಿ. ಸುಲಭದಲ್ಲಿ ಸಿಗುವ ಪುದಿನಾ, ದೊಡ್ಡ ಪತ್ರೆ, ತುಳಸಿ, ಒಂದೆಲಗ, ಅಮೃತಬಳ್ಳಿ ಇವುಗಳನ್ನು ಒಂದೊಂದು ದಿನ ಒಂದೊಂದು ಎಲೆಗಳನ್ನು ಗ್ರೀನ್ ಟೀಗೆ ಬಳಸಬಹುದು. ಈ ಗಿಡಗಳ ಎಲೆಗಳನ್ನು ಕುದಿಯುವ ನೀರಿಗೆ ಹಾಕಬೇಕು. ನೀರು ತಣ್ಣಗಾದ ಬಳಿಕ ಕುಡಿಯಬೇಕು. ಗ್ರೀನ್ ಟೀ ಕೊಳ್ಳಲಾಗದವರು ಹೀಗೆ ಮಾಡಿ. ಎಲೆಗಳಲ್ಲಿರುವ ಅಂಶಗಳು ನೀರಿನೊಂದಿಗೆ ಬೆರೆತು ಹೊಸ ಸ್ವಾದ ನೀಡುತ್ತದೆ. ಅದನ್ನೆ ಗ್ರೀನ್ ಟೀ ರೀತಿ ಬಳಸಹುದು. ಇದಕ್ಕಾಗಿ ಮನೆಯಲ್ಲೇ ಪುಟ್ಟ ಕೈತೋಟ ಮಾಡಿಕೊಂಡರೆ ಅನುಕೂಲ. ಒಂದಷ್ಟು ಪಾಟ್ಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿಕೊಂಡು ಗ್ರೀನ್ ಟೀ ಸುಲಭದಲ್ಲಿ ಮಾಡಿಕೊಳ್ಳಬಹುದು. ಅಲ್ಲದೆ, ಚಳಿಗಾಲದ ಈ ಸಮಯದಲ್ಲಿ ಕಷಾಯದ ಜತೆ ಪ್ರತಿ ದಿನ ಒಂದೊಂದು ಬಗೆಯ ಎಲೆಯನ್ನು ಹಾಕಿ ಕುದಿಸಿ ಬೆಳಿಗ್ಗೆ ಸಮಯದಲ್ಲಿ ಒಂದು ಹೊತ್ತು ಕುಡಿದರೆ ದೇಹದ ಉಷ್ಣತೆ ಕಾಪಾಡಿಕೊಳ್ಳಬಹುದು.</p>.<p>‘ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರಿನಿಂದ ಉಂಟಾಗುವ ಕಾಯಿಲೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಕುದಿಸಿ ಆರಿಸಿದ ನೀರನ್ನು ಸೇವಿಸಬೇಕು. ಕೆಲವರು ಗಂಟಲಿಗೆ ಹಿತವಾಗರಿಲಿ ಎಂದು ತಣ್ಣನೆ ನೀರನ್ನು ಸ್ವಲ್ಪ ಮಾತ್ರ ಬಿಸಿ ಮಾಡಿಕೊಂಡು ಕುಡಿಯುತ್ತಾರೆ. ಈ ಕ್ರಮ ತಪ್ಪು. ನೀರಿನ ಉಷ್ಣತೆಗೆ ತಕ್ಕಂತೆ ಕೆಲವು ಬ್ಯಾಕ್ಟೀರಿಯಾಗಳು, ವೈರಸ್ಗಳು ಆಕ್ಟಿವ್ ಆಗುತ್ತವೆ. ಆಗ ಆ ನೀರನ್ನು ಸೇವಿಸುವುದರಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು. ಹಾಗಾಗಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು’ ಎನ್ನುವರು ಚೈತ್ರಾ ಕಿರಣ್.</p>.<p>ಬೆಚ್ಚಗಿನ ಬಟ್ಟೆ ಧರಿಸಿ ಮೈಯಲ್ಲಿನ ಚಳಿ ದೂರ ಮಾಡಬಹುದು. ಆದರೆ ದೇಹದ ಆಂತರಿಕ ಆರೋಗ್ಯ ಕಾಪಾಡಿಕೊಳ್ಳಲು ಒಂದಷ್ಟು ಆಹಾರ ಕ್ರಮಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಆಹಾರ ತಜ್ಞರು ನೀಡಿದ ಕೆಲವು ಸಲಹೆ ಇಲ್ಲಿವೆ…</p>.<p>* ಶೀತ ಉಂಟು ಮಾಡುವಂತಹ ಪದಾರ್ಥಗಳಿಗೆ ಉಷ್ಣದ ಪದಾರ್ಥಗಳನ್ನು ಸೇರಿಸಿ ತಿಂದರೆ ದೇಹಕ್ಕೆ ಉತ್ತಮ. ಉದಾಹರಣೆಗೆ ಸೌತೆಕಾಯಿ, ಸೀಬೇಕಾಯಿ ಶೀತ ಉಂಟುಮಾಡುತ್ತವೆ ಎಂದರೆ, ಅದರ ಹೋಳುಗಳ ಮೇಲೊಂದಿಷ್ಟು ಕಾಳುಮೆಣಸಿನ ಪುಡಿ, ಉಪ್ಪು ಉದುರಿಸಿಕೊಂಡು ಸವಿದರೆ ಸಮತೋಲನ ಕಾಯ್ದುಕೊಳ್ಳಬಹುದು.</p>.<p>* ಚಳಿಗಾಲದಲ್ಲಿ ಕಿತ್ತಲೆ ಹಣ್ಣು ಶೀತ ಎಂದು ಹೇಳುವವರು ಕಿತ್ತಲೆ ಬದಲು ಮೂಸಂಬಿ ಹಣ್ಣು ಸೇವಿಸಬಹುದು. ಚಳಿಗಾಲದಲ್ಲಿ ವಿಟಮಿನ್ ‘ಸಿ’ ಅಂಶ ಹೆಚ್ಚು ಬೇಕು. ಹಾಗಾಗಿ ಈ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು.</p>.<p>* ಮೂರು ವರ್ಷದ ಮೇಲ್ಪಟ್ಟ ಮಕ್ಕಳಿಗೆ ದೊಡ್ಡ ಪತ್ರೆ ರಸ ಹಾಗೂ ಜೇನುತುಪ್ಪ ಬೆರೆಸಿ ಆಗಾಗ ಕೊಡಬಹುದು. ಹಿಪ್ಪಲಿ, ಜೇಷ್ಠಮಧು ತೇಯ್ದು ವಾರಕ್ಕೆ ಒಮ್ಮೆ ಕೊಡಬಹುದು.</p>.<p>* ಹೊರಗಿನ ಆಹಾರ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು.</p>.<p>*ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರು ಕುಡಿಯುವುದನ್ನು ಬಹುತೇಕರು ಕಡಿಮೆ ಮಾಡುತ್ತಾರೆ. ಅದು ತಪ್ಪು. ಶುಷ್ಕ ವಾತಾವರಣ ಇರುವುದರಿಂದ ದೇಹದಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು.</p>.<p>* ಫ್ರಿಜ್ನಲ್ಲಿ ಇಟ್ಟು ತಿನ್ನುವ ಪ್ರವೃತ್ತಿ ಬಿಡಿ. ಒಂದು ವೇಳೆ ಫ್ರಿಜ್ನಲ್ಲಿರುವುದನ್ನು ತಿನ್ನುವ ನಿವಾರ್ಯತೆ ಇದ್ದರೆ ಬಿಸಿ ಮಾಡಿಕೊಂಡು ತಿನ್ನಬೇಕು.</p>.<p>*ಹುಳಿ ಅಂಶಗಳನ್ನು ತಿಂದರೆ ಶೀತ ಆಗುತ್ತದೆ, ಕೆಮ್ಮು ಬರುತ್ತದೆ ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದು ತಪ್ಪು ತಿಳಿವಳಿಕೆ. ಹುಳಿ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಗುಣಗಳಿರುತ್ತವೆ. ಕಿತ್ತಲೆ, ಮೂಸಂಬಿ, ನೆಲ್ಲಿ ಕಾಯಿ ತಿನ್ನಬಹುದು. ನೆಲ್ಲಿಕಾಯಿ ಮೊರಬ್ಬ ತಯಾರಿಸಿ ಮಕ್ಕಳಿಗೂ ಕೊಡಬಹುದು.</p>.<p>*ಮಸಾಲೆ ಪದಾರ್ಥಗಳನ್ನು ಅಡುಗೆಗಳಲ್ಲಿ ಹೆಚ್ಚು ಬಳಸಬೇಕು.</p>.<p>* ಚಳಿಗಾಲದ ಸಮಯದಲ್ಲಿ ಮಕ್ಕಳು ಹುಷಾರು ತಪ್ಪುವುದು ಹೆಚ್ಚು. ಶೀತ, ಜ್ವರ, ಕೆಮ್ಮು ಮುಂತಾದವು ಹೆಚ್ಚು ಕಾಡುತ್ತವೆ. ಆಗ ಕುದಿಸಿ ಆರಿಸಿದ ನೀರನ್ನು ಹೆಚ್ಚು ಹೆಚ್ಚು ಕುಡಿಸಬೇಕು. ಬೇದಿ ಉಂಟಾದರೆ ಉಪ್ಪು, ಸಕ್ಕರೆ, ನಿಂಬೆಹಣ್ಣು ಬೆರೆಸಿ ಮನೆಯಲ್ಲೆ ಒಆರ್ಎಸ್ ತಯಾರಿಸಿ ಮಕ್ಕಳಿಗೆ ಕೊಡಬೇಕು.</p>.<p>* ಕರಿದ ಪದಾರ್ಥ, ಹೆಚ್ಚು ಎಣ್ಣೆ ಅಂಶವಿರುವ ತಿನಿಸು ಕಡಿಮೆ ತಿನ್ನಿ. ಮನೆಯಲ್ಲೇ ತಯಾರಿಸಿದ ಕರಿದ ಪದಾರ್ಥಗಳನ್ನು ಮಿತವಾಗಿ ತಿಂದರೆ ಉತ್ತಮ. ಹಾಗಂತ ಸಂಪೂರ್ಣ ವರ್ಜ್ಯ ಮಾಡುವುದೂ ಸರಿಯಲ್ಲ.</p>.<p>* ಕರಿದ ಪದಾರ್ಥದ ಬದಲು ಮಕ್ಕಳಿಗೆ ಶೇಂಗಾ ಮಿಠಾಯಿ, ಕೊಬ್ಬರಿ ಭರ್ಪಿ ಮಾಡಿಕೊಡಬಹುದು. ಇವು ಆರೋಗ್ಯ ಪೂರ್ಣವೂ ಹೌದು. ಮಕ್ಕಳೂ ಖುಷಿಯಾಗಿ ತಿನ್ನುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂರು ವರ್ಷದ ಜಾಹ್ನವಿಗೆ ಸೀಬೇಕಾಯಿ ಎಂದರೆ ಬಾಯಲ್ಲಿ ನೀರೂರುತ್ತದೆ. ಮಗಳಿಗಾಗಿ ಆಗತಾನೇ ಮಾರುಕಟ್ಟೆಯಿಂದ ತಂದಿದ್ದ ಸೀಬೇಕಾಯಿಯನ್ನು ಕೈಗಿಟ್ಟರು ಅಪ್ಪ. ಖುಷಿಯಿಂದ ಬಾಯಲ್ಲಿ ಕಚ್ಚಿ ತಿನ್ನುತ್ತಿದ್ದ ಮಗಳನ್ನು ಕಂಡ ಅಮ್ಮ ಘಕ್ಕನೇ ಕೈಯಲ್ಲಿದ್ದ ಹಣ್ಣನ್ನು ಕಸಿದುಕೊಂಡಳು. ಈಗ ತಾನೇ ಶೀತ, ಜ್ವರ ಬಿಟ್ಟು ಚೇತರಿಸಿಕೊಳ್ಳುತ್ತಿರುವ ಮಗಳಿಗೆ ಸೀಬೇಕಾಯಿ ಕೊಟ್ಟಿದ್ದು ಸರಿ ಎನಿಸಲಿಲ್ಲ ಅಮ್ಮನಿಗೆ. ಆಕೆಯ ಇಷ್ಟದ ಹಣ್ಣು ತಿಂದುಕೊಳ್ಳಲಿ ಬಿಡು ಎನ್ನುವುದು ಅಪ್ಪನ ವಾದ. ಚಳಿಗಾಲದಲ್ಲಿ ಸೀಬೇಕಾಯಿ ಒಳ್ಳೆಯದಲ್ಲ; ಗಂಟಲು ಕಟ್ಟುತ್ತದೆ ಎನ್ನುವುದು ತಾಯಿಯ ಸಿದ್ಧಾಂತ. ಅಪ್ಪ– ಅಮ್ಮನ ಈ ಇಬ್ಬಗೆಯ ನಿಲುವುಗಳಿಂದ ಗೊಂದಲಕ್ಕೊಳಗಾದಳು ಜಾಹ್ನವಿ.</p>.<p>***</p>.<p>‘ಚಳಿಗಾಲ ಶುರುವಾಗಿದೆ. ಆದಷ್ಟು ಬೆಚ್ಚಗಿರಿ. ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನಬೇಡಿ. ಕೊರೆಯುವ ಚಳಿ ಇದ್ದಾಗ ವಾಕಿಂಗ್ಗೆ ಹೋಗುವುದನ್ನು ಬಿಡಿ...’ ಹೃದಯ ಸಂಬಂಧಿ ಕಾಯಿಲೆ, ಬಿ.ಪಿ, ಶುಗರ್, ಕೀಲು ನೋವಿನ ಸಮಸ್ಯೆ ಇರುವ 70ರ ಹರೆಯದ ತಂದೆಗೆ ಅಮೆರಿಕದಲ್ಲಿರುವ ಮಗಳಿಂದ ದೂರವಾಣಿಯಲ್ಲಿ ದಕ್ಕಿದ ಕಾಳಜಿಯ ಮಾತುಗಳಿವು. ಆದರೆ, ಬಾಯಿ ಚಪಲ ಕೇಳಬೇಕಲ್ಲ. ಕರಿದ ಪದಾರ್ಥಗಳೇ ತಂದೆಗೆ ಹೆಚ್ಚು ಪ್ರೀತಿ. ಅವುಗಳಿಗೆ ಮೂರ್ನಾಲ್ಕು ತಿಂಗಳು ಕಡಿವಾಣ ಹಾಕು ಎಂದರೆ ಕೇಳಲು ಆದೀತೆ.</p>.<p>***</p>.<p>ಚಳಿಗಾಲ ಮೆಲ್ಲಗೆ ಮೈಯನ್ನು ಆವರಿಸುತ್ತಿದೆ. ಸುಳಿಗಾಳಿ ತ್ವಚೆಯನ್ನು ಒಣಗಿಸುತ್ತಿದೆ. ಈ ಸಮಯದಲ್ಲಿ ಮಕ್ಕಳು ಮತ್ತು ವಯಸ್ಸಾದವರನ್ನು ನೋಡಿಕೊಳ್ಳುವುದೇ ಸವಾಲು. ಮೇಲಿನ ಈ ಉದಾಹರಣೆಗಳು ಕೇವಲ ಒಬ್ಬಿಬ್ಬರದ್ದಲ್ಲ. ಮಕ್ಕಳು, ವಯಸ್ಸಾದವರು ಇರುವ ಪ್ರತಿ ಮನೆಗಳಲ್ಲೂ ಈ ರೀತಿಯ ದ್ವಂದ್ವಗಳು ಇದ್ದೇ ಇರುತ್ತವೆ. ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು, ಯಾವುದನ್ನು ತಿಂದರೆ ದೇಹಕ್ಕೆ ಅನುಕೂಲ, ಅನನುಕೂಲ ಎನ್ನುವ ಗೊಂದಲ ಶುರುವಾಗುತ್ತದೆ.</p>.<p>ಆದರೆ, ಈ ಋತುಮಾನದಲ್ಲಿ ಸಿಗುವ ಎಲ್ಲ ಬಗೆಯ ಹಣ್ಣುಗಳನ್ನೂ, ಆಹಾರ ಪದಾರ್ಥಗಳನ್ನು ದಾರಾಳವಾಗಿ ಸೇವಿಸಬಹುದು. ಹಾಗೆ ಸೇವಿಸುವಾಗ ಇತಿ– ಮಿತಿ ಇರಲಿ ಎನ್ನುವರು ಆಹಾರ ತಜ್ಞರು.</p>.<p>ಚಳಿಗಾಲದಲ್ಲಿ ಪರಿಸರದ ತಾಪಮಾನ ಇಳಿಕೆಯಾಗುತ್ತಾ ಬರುತ್ತದೆ. ಹಾಗೆಯೇ ದೇಹದ ತಾಪಮಾನವೂ ಇಳಿಕೆಯಾಗುತ್ತದೆ. ಇದನ್ನು ಸರಿದೂಗಿಸಿಕೊಳ್ಳಲು ಶರೀರವು ಚಯಾಪಚಯ ಕ್ರಿಯೆಯನ್ನು ಏರಿಸಿಕೊಳ್ಳುವ ಮೂಲಕ ಉಷ್ಣವನ್ನು ಉತ್ಪಾದಿಸಿಕೊಳ್ಳುತ್ತದೆ. ಆಹಾರದಲ್ಲಿ ಕೊಬ್ಬಿನ ಅಂಶವನ್ನು ಕರಗಿಸುತ್ತ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಹೆಚ್ಚು ಆಹಾರ ದೇಹಕ್ಕೆ ಬೇಕೆನಿಸುತ್ತದೆ. ಹೆಚ್ಚು ಹಸಿವು ಉಂಟಾಗುತ್ತದೆ. ಹಸಿವು ಎಂದು ಏನೇನೊ ಆಹಾರ ತಿನ್ನುವ ಬದಲು ಸಮತೋಲಿತ ಆಹಾರ ಸೇವಿಸಬೇಕು ಎನ್ನುವುದು ಆಹಾರ ತಜ್ಞರ ಸಲಹೆ.</p>.<p>ಋತುವಿಗೆ ಅನುಸಾರ ನಮ್ಮ ಆಹಾರ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ. ಗೋಧಿ, ಹೆಸರು ಕಾಳು, ಅಕ್ಕಿ, ವಿವಿಧ ಬಗೆಯ ಧಾನ್ಯಗಳನ್ನು ಅಡುಗೆಯಲ್ಲಿ ಬಳಸಿ. ಹಾಗಲಕಾಯಿ, ಸೋರೆಕಾಯಿ, ಹೀರೆಕಾಯಿ, ಕುಂಬಳಕಾಯಿ, ಚಳಿಗಾಲದ ಅಂತ್ಯಕ್ಕೆ ಸಿಗುವ ಅವರೆಕಾಯಿಯನ್ನು ಅಡುಗೆಯಲ್ಲಿ ಬಳಸಿ. ಈ ಸಮಯದಲ್ಲಿ ಹಸಿ ಶೇಂಗಾ ಬೇಯಿಸಿ ತಿಂದರೆ ಹೆಚ್ಚು ಪ್ರೋಟಿನ್ ಲಭ್ಯವಾಗುತ್ತದೆ. ಮಕ್ಕಳಿಗೂ ಇದು ಸೂಕ್ತ. ಶುಷ್ಕ ವಾತಾವರಣದ ಈ ಸಮಯದಲ್ಲಿ ಜಿಡ್ಡಿನಂಶಯುಕ್ತ ಹಾಲು, ಮಜ್ಜಿಗೆ, ತುಪ್ಪ, ಕೆನೆಯನ್ನೂ ನಿಯಮಿತವಾಗಿ ಸೇವಿಸಿದರೆ ಒಳ್ಳೆಯದು. ಹೆಚ್ಚು ಉಪ್ಪು, ಹೆಚ್ಚು ಹುಳಿ ಮತ್ತು ಖಾರದ ಪದಾರ್ಥಗಳನ್ನು ಹೆಚ್ಚು ಬಳಸಬಾರದು.</p>.<p>‘ಕಷಾಯಕ್ಕೆ ಬಳಸುವ ಕಾಳು ಮೆಣಸು, ಅರಿಸಿನ, ಚಕ್ಕೆ, ಲವಂಗ, ಏಲಕ್ಕಿ ಈ ರೀತಿಯ ಮಸಾಲೆ ಪದಾರ್ಥಗಳು ಆರೋಗ್ಯ ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತವೆ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಉಳ್ಳವರು ಹೆಚ್ಚು ನಾರಿನಂಶ ಇರುವ ಆಹಾರ ತಿನ್ನಬೇಕು. ಸೊಪ್ಪುಗಳು, ಬಣ್ಣ ಬಣ್ಣದ ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ನಾವು ಉಣ್ಣುವ ತಟ್ಟೆಯಲ್ಲಿನ ಪದಾರ್ಥಗಳು ಹೆಚ್ಚು ಬಣ್ಣಗಳಿಂದ ಕೂಡಿದ್ದರೆ ಆರೋಗ್ಯ ವೃದ್ಧಿಸುತ್ತದೆ’ ಎನ್ನುವರು ಆಹಾರ ತಜ್ಞೆ ಚೈತ್ರಾ ಕಿರಣ್.</p>.<p class="Subhead"><strong>ಗ್ರೀನ್ ಟೀ ಕುಡಿಯಿರಿ:</strong>ಚಳಿಗಾಲದ ಸಮಯದಲ್ಲಿ ದೇಹ ರಕ್ಷಣೆಗೆ ಗ್ರೀನ್ ಟೀ ಹೆಚ್ಚು ಸಹಕಾರಿ. ಸುಲಭದಲ್ಲಿ ಸಿಗುವ ಪುದಿನಾ, ದೊಡ್ಡ ಪತ್ರೆ, ತುಳಸಿ, ಒಂದೆಲಗ, ಅಮೃತಬಳ್ಳಿ ಇವುಗಳನ್ನು ಒಂದೊಂದು ದಿನ ಒಂದೊಂದು ಎಲೆಗಳನ್ನು ಗ್ರೀನ್ ಟೀಗೆ ಬಳಸಬಹುದು. ಈ ಗಿಡಗಳ ಎಲೆಗಳನ್ನು ಕುದಿಯುವ ನೀರಿಗೆ ಹಾಕಬೇಕು. ನೀರು ತಣ್ಣಗಾದ ಬಳಿಕ ಕುಡಿಯಬೇಕು. ಗ್ರೀನ್ ಟೀ ಕೊಳ್ಳಲಾಗದವರು ಹೀಗೆ ಮಾಡಿ. ಎಲೆಗಳಲ್ಲಿರುವ ಅಂಶಗಳು ನೀರಿನೊಂದಿಗೆ ಬೆರೆತು ಹೊಸ ಸ್ವಾದ ನೀಡುತ್ತದೆ. ಅದನ್ನೆ ಗ್ರೀನ್ ಟೀ ರೀತಿ ಬಳಸಹುದು. ಇದಕ್ಕಾಗಿ ಮನೆಯಲ್ಲೇ ಪುಟ್ಟ ಕೈತೋಟ ಮಾಡಿಕೊಂಡರೆ ಅನುಕೂಲ. ಒಂದಷ್ಟು ಪಾಟ್ಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿಕೊಂಡು ಗ್ರೀನ್ ಟೀ ಸುಲಭದಲ್ಲಿ ಮಾಡಿಕೊಳ್ಳಬಹುದು. ಅಲ್ಲದೆ, ಚಳಿಗಾಲದ ಈ ಸಮಯದಲ್ಲಿ ಕಷಾಯದ ಜತೆ ಪ್ರತಿ ದಿನ ಒಂದೊಂದು ಬಗೆಯ ಎಲೆಯನ್ನು ಹಾಕಿ ಕುದಿಸಿ ಬೆಳಿಗ್ಗೆ ಸಮಯದಲ್ಲಿ ಒಂದು ಹೊತ್ತು ಕುಡಿದರೆ ದೇಹದ ಉಷ್ಣತೆ ಕಾಪಾಡಿಕೊಳ್ಳಬಹುದು.</p>.<p>‘ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರಿನಿಂದ ಉಂಟಾಗುವ ಕಾಯಿಲೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಕುದಿಸಿ ಆರಿಸಿದ ನೀರನ್ನು ಸೇವಿಸಬೇಕು. ಕೆಲವರು ಗಂಟಲಿಗೆ ಹಿತವಾಗರಿಲಿ ಎಂದು ತಣ್ಣನೆ ನೀರನ್ನು ಸ್ವಲ್ಪ ಮಾತ್ರ ಬಿಸಿ ಮಾಡಿಕೊಂಡು ಕುಡಿಯುತ್ತಾರೆ. ಈ ಕ್ರಮ ತಪ್ಪು. ನೀರಿನ ಉಷ್ಣತೆಗೆ ತಕ್ಕಂತೆ ಕೆಲವು ಬ್ಯಾಕ್ಟೀರಿಯಾಗಳು, ವೈರಸ್ಗಳು ಆಕ್ಟಿವ್ ಆಗುತ್ತವೆ. ಆಗ ಆ ನೀರನ್ನು ಸೇವಿಸುವುದರಿಂದ ಲಾಭಕ್ಕಿಂತ ತೊಂದರೆಯೇ ಹೆಚ್ಚು. ಹಾಗಾಗಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು’ ಎನ್ನುವರು ಚೈತ್ರಾ ಕಿರಣ್.</p>.<p>ಬೆಚ್ಚಗಿನ ಬಟ್ಟೆ ಧರಿಸಿ ಮೈಯಲ್ಲಿನ ಚಳಿ ದೂರ ಮಾಡಬಹುದು. ಆದರೆ ದೇಹದ ಆಂತರಿಕ ಆರೋಗ್ಯ ಕಾಪಾಡಿಕೊಳ್ಳಲು ಒಂದಷ್ಟು ಆಹಾರ ಕ್ರಮಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಆಹಾರ ತಜ್ಞರು ನೀಡಿದ ಕೆಲವು ಸಲಹೆ ಇಲ್ಲಿವೆ…</p>.<p>* ಶೀತ ಉಂಟು ಮಾಡುವಂತಹ ಪದಾರ್ಥಗಳಿಗೆ ಉಷ್ಣದ ಪದಾರ್ಥಗಳನ್ನು ಸೇರಿಸಿ ತಿಂದರೆ ದೇಹಕ್ಕೆ ಉತ್ತಮ. ಉದಾಹರಣೆಗೆ ಸೌತೆಕಾಯಿ, ಸೀಬೇಕಾಯಿ ಶೀತ ಉಂಟುಮಾಡುತ್ತವೆ ಎಂದರೆ, ಅದರ ಹೋಳುಗಳ ಮೇಲೊಂದಿಷ್ಟು ಕಾಳುಮೆಣಸಿನ ಪುಡಿ, ಉಪ್ಪು ಉದುರಿಸಿಕೊಂಡು ಸವಿದರೆ ಸಮತೋಲನ ಕಾಯ್ದುಕೊಳ್ಳಬಹುದು.</p>.<p>* ಚಳಿಗಾಲದಲ್ಲಿ ಕಿತ್ತಲೆ ಹಣ್ಣು ಶೀತ ಎಂದು ಹೇಳುವವರು ಕಿತ್ತಲೆ ಬದಲು ಮೂಸಂಬಿ ಹಣ್ಣು ಸೇವಿಸಬಹುದು. ಚಳಿಗಾಲದಲ್ಲಿ ವಿಟಮಿನ್ ‘ಸಿ’ ಅಂಶ ಹೆಚ್ಚು ಬೇಕು. ಹಾಗಾಗಿ ಈ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು.</p>.<p>* ಮೂರು ವರ್ಷದ ಮೇಲ್ಪಟ್ಟ ಮಕ್ಕಳಿಗೆ ದೊಡ್ಡ ಪತ್ರೆ ರಸ ಹಾಗೂ ಜೇನುತುಪ್ಪ ಬೆರೆಸಿ ಆಗಾಗ ಕೊಡಬಹುದು. ಹಿಪ್ಪಲಿ, ಜೇಷ್ಠಮಧು ತೇಯ್ದು ವಾರಕ್ಕೆ ಒಮ್ಮೆ ಕೊಡಬಹುದು.</p>.<p>* ಹೊರಗಿನ ಆಹಾರ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು.</p>.<p>*ಚಳಿಗಾಲದಲ್ಲಿ ಸಾಮಾನ್ಯವಾಗಿ ನೀರು ಕುಡಿಯುವುದನ್ನು ಬಹುತೇಕರು ಕಡಿಮೆ ಮಾಡುತ್ತಾರೆ. ಅದು ತಪ್ಪು. ಶುಷ್ಕ ವಾತಾವರಣ ಇರುವುದರಿಂದ ದೇಹದಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು.</p>.<p>* ಫ್ರಿಜ್ನಲ್ಲಿ ಇಟ್ಟು ತಿನ್ನುವ ಪ್ರವೃತ್ತಿ ಬಿಡಿ. ಒಂದು ವೇಳೆ ಫ್ರಿಜ್ನಲ್ಲಿರುವುದನ್ನು ತಿನ್ನುವ ನಿವಾರ್ಯತೆ ಇದ್ದರೆ ಬಿಸಿ ಮಾಡಿಕೊಂಡು ತಿನ್ನಬೇಕು.</p>.<p>*ಹುಳಿ ಅಂಶಗಳನ್ನು ತಿಂದರೆ ಶೀತ ಆಗುತ್ತದೆ, ಕೆಮ್ಮು ಬರುತ್ತದೆ ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದು ತಪ್ಪು ತಿಳಿವಳಿಕೆ. ಹುಳಿ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಗುಣಗಳಿರುತ್ತವೆ. ಕಿತ್ತಲೆ, ಮೂಸಂಬಿ, ನೆಲ್ಲಿ ಕಾಯಿ ತಿನ್ನಬಹುದು. ನೆಲ್ಲಿಕಾಯಿ ಮೊರಬ್ಬ ತಯಾರಿಸಿ ಮಕ್ಕಳಿಗೂ ಕೊಡಬಹುದು.</p>.<p>*ಮಸಾಲೆ ಪದಾರ್ಥಗಳನ್ನು ಅಡುಗೆಗಳಲ್ಲಿ ಹೆಚ್ಚು ಬಳಸಬೇಕು.</p>.<p>* ಚಳಿಗಾಲದ ಸಮಯದಲ್ಲಿ ಮಕ್ಕಳು ಹುಷಾರು ತಪ್ಪುವುದು ಹೆಚ್ಚು. ಶೀತ, ಜ್ವರ, ಕೆಮ್ಮು ಮುಂತಾದವು ಹೆಚ್ಚು ಕಾಡುತ್ತವೆ. ಆಗ ಕುದಿಸಿ ಆರಿಸಿದ ನೀರನ್ನು ಹೆಚ್ಚು ಹೆಚ್ಚು ಕುಡಿಸಬೇಕು. ಬೇದಿ ಉಂಟಾದರೆ ಉಪ್ಪು, ಸಕ್ಕರೆ, ನಿಂಬೆಹಣ್ಣು ಬೆರೆಸಿ ಮನೆಯಲ್ಲೆ ಒಆರ್ಎಸ್ ತಯಾರಿಸಿ ಮಕ್ಕಳಿಗೆ ಕೊಡಬೇಕು.</p>.<p>* ಕರಿದ ಪದಾರ್ಥ, ಹೆಚ್ಚು ಎಣ್ಣೆ ಅಂಶವಿರುವ ತಿನಿಸು ಕಡಿಮೆ ತಿನ್ನಿ. ಮನೆಯಲ್ಲೇ ತಯಾರಿಸಿದ ಕರಿದ ಪದಾರ್ಥಗಳನ್ನು ಮಿತವಾಗಿ ತಿಂದರೆ ಉತ್ತಮ. ಹಾಗಂತ ಸಂಪೂರ್ಣ ವರ್ಜ್ಯ ಮಾಡುವುದೂ ಸರಿಯಲ್ಲ.</p>.<p>* ಕರಿದ ಪದಾರ್ಥದ ಬದಲು ಮಕ್ಕಳಿಗೆ ಶೇಂಗಾ ಮಿಠಾಯಿ, ಕೊಬ್ಬರಿ ಭರ್ಪಿ ಮಾಡಿಕೊಡಬಹುದು. ಇವು ಆರೋಗ್ಯ ಪೂರ್ಣವೂ ಹೌದು. ಮಕ್ಕಳೂ ಖುಷಿಯಾಗಿ ತಿನ್ನುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>