<p><strong>ನಮ್ಮ ಆರೋಗ್ಯದ ದೃಷ್ಟಿಯಿಂದ, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಇಂದು ಆಹಾರದ ಕಲಬೆರಕೆಯನ್ನು ನಾವು ತಡೆಯಲೇಬೇಕಾಗಿದೆ. ಅದಕ್ಕೆ ಹಲವು ಕ್ರಮಗಳನ್ನು ತಜ್ಞರು, ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.</strong></p>.<p>-ಭಾರತ ಬಹು ಆಹಾರ ಸಂಸ್ಕೃತಿಯ ದೇಶ. ಇದರಮೂಲ ತಿರುಳು ಪೌಷ್ಟಿಕತೆ. ಸದ್ಯ ದೇಶದ ಆಹಾರ ಸಂಸ್ಕೃತಿಗೆ ಧಕ್ಕೆಯಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿ ಉಳಿಯದೇ ಯಾವ ಕಾನೂನುಗಳೂ ಕಲಬೆರಕೆಯನ್ನು ತಡೆಯಲಾರವು ಎಂಬುದು ತಜ್ಞರ ಮಾತು.</p>.<p>-ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಗಬೇಕು. ಕೃಷಿ ಪದ್ಧತಿಯಲ್ಲೂ ಬದಲಾಗಬೇಕು.<br />-ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ) ಬಲವರ್ಧನೆಯಾಗಬೇಕು. ಆರೋಗ್ಯ ಇಲಾಖೆ ಅಧೀನದಿಂದ ಬೇಪರ್ಟ್ಟು ಸ್ವತಂತ್ರ ಇಲಾಖೆಯಾಗಬೇಕು.</p>.<p>-ಕೇಂದ್ರ ಬಜೆಟ್ನಲ್ಲಿ ಆಹಾರ ಸುರಕ್ಷತೆಗೆ ₹130 ರಿಂದ ₹150 ಕೋಟಿ ಅನುದಾನ ನೀಡಲಾಗುತ್ತಿದೆ. ಅಮೆರಿಕ ಆಹಾರ ಸುರಕ್ಷತಾ ಕಾರ್ಯಗಳಿಗೆ ₹10 ಸಾವಿರ ಕೋಟಿ ವ್ಯಯಿಸುತ್ತಿದೆ. ಆಹಾರ ಸುರಕ್ಷತೆಯ ವಿಚಾರವನ್ನು ನಮ್ಮ ಸರ್ಕಾರಗಳು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆಚ್ಚಿನ ಅನುದಾನ ನೀಡಬೇಕು.</p>.<p>-ಆಹಾರ ಕಲಬೆರಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು.</p>.<p>-ಆಹಾರ ಸುರಕ್ಷತಾಧಿಕಾರಿಗಳನ್ನು ಅಗತ್ಯಕ್ಕೆ ತಕ್ಕಂತೆ ಕಾಲ ಕಾಲಕ್ಕೆ ನೇಮಿಸುವ, ಅವರಿಗೆ ಆಹಾರ ಸುರಕ್ಷತೆಯ ಕುರಿತು ತರಬೇತಿ ನೀಡಬೇಕು.</p>.<p>-ಪ್ರಯೋಗಾಲಯಗಳಿಗೆ ಸುಸಜ್ಜಿತ ಸೌಕರ್ಯ, ಸವಲತ್ತು, ಯಂತ್ರೋಪಕರಣಗಳನ್ನು ನೀಡಬೇಕು.</p>.<p>-ವಿದೇಶದಲ್ಲಿ ಆಹಾರ ಪದಾರ್ಥಗಳನ್ನು ಪ್ರತಿ ಹಂತದಲ್ಲೂ ಮೇಲ್ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಾರುಕಟ್ಟೆಗೆ ಬರುವ ಆಹಾರ ಪದಾರ್ಥಗಳಿಗೆ ಮೇಲುಸ್ತುವಾರಿಯೇ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಮ್ಮ ಆರೋಗ್ಯದ ದೃಷ್ಟಿಯಿಂದ, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಇಂದು ಆಹಾರದ ಕಲಬೆರಕೆಯನ್ನು ನಾವು ತಡೆಯಲೇಬೇಕಾಗಿದೆ. ಅದಕ್ಕೆ ಹಲವು ಕ್ರಮಗಳನ್ನು ತಜ್ಞರು, ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.</strong></p>.<p>-ಭಾರತ ಬಹು ಆಹಾರ ಸಂಸ್ಕೃತಿಯ ದೇಶ. ಇದರಮೂಲ ತಿರುಳು ಪೌಷ್ಟಿಕತೆ. ಸದ್ಯ ದೇಶದ ಆಹಾರ ಸಂಸ್ಕೃತಿಗೆ ಧಕ್ಕೆಯಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿ ಉಳಿಯದೇ ಯಾವ ಕಾನೂನುಗಳೂ ಕಲಬೆರಕೆಯನ್ನು ತಡೆಯಲಾರವು ಎಂಬುದು ತಜ್ಞರ ಮಾತು.</p>.<p>-ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಗಬೇಕು. ಕೃಷಿ ಪದ್ಧತಿಯಲ್ಲೂ ಬದಲಾಗಬೇಕು.<br />-ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ) ಬಲವರ್ಧನೆಯಾಗಬೇಕು. ಆರೋಗ್ಯ ಇಲಾಖೆ ಅಧೀನದಿಂದ ಬೇಪರ್ಟ್ಟು ಸ್ವತಂತ್ರ ಇಲಾಖೆಯಾಗಬೇಕು.</p>.<p>-ಕೇಂದ್ರ ಬಜೆಟ್ನಲ್ಲಿ ಆಹಾರ ಸುರಕ್ಷತೆಗೆ ₹130 ರಿಂದ ₹150 ಕೋಟಿ ಅನುದಾನ ನೀಡಲಾಗುತ್ತಿದೆ. ಅಮೆರಿಕ ಆಹಾರ ಸುರಕ್ಷತಾ ಕಾರ್ಯಗಳಿಗೆ ₹10 ಸಾವಿರ ಕೋಟಿ ವ್ಯಯಿಸುತ್ತಿದೆ. ಆಹಾರ ಸುರಕ್ಷತೆಯ ವಿಚಾರವನ್ನು ನಮ್ಮ ಸರ್ಕಾರಗಳು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆಚ್ಚಿನ ಅನುದಾನ ನೀಡಬೇಕು.</p>.<p>-ಆಹಾರ ಕಲಬೆರಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು.</p>.<p>-ಆಹಾರ ಸುರಕ್ಷತಾಧಿಕಾರಿಗಳನ್ನು ಅಗತ್ಯಕ್ಕೆ ತಕ್ಕಂತೆ ಕಾಲ ಕಾಲಕ್ಕೆ ನೇಮಿಸುವ, ಅವರಿಗೆ ಆಹಾರ ಸುರಕ್ಷತೆಯ ಕುರಿತು ತರಬೇತಿ ನೀಡಬೇಕು.</p>.<p>-ಪ್ರಯೋಗಾಲಯಗಳಿಗೆ ಸುಸಜ್ಜಿತ ಸೌಕರ್ಯ, ಸವಲತ್ತು, ಯಂತ್ರೋಪಕರಣಗಳನ್ನು ನೀಡಬೇಕು.</p>.<p>-ವಿದೇಶದಲ್ಲಿ ಆಹಾರ ಪದಾರ್ಥಗಳನ್ನು ಪ್ರತಿ ಹಂತದಲ್ಲೂ ಮೇಲ್ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಾರುಕಟ್ಟೆಗೆ ಬರುವ ಆಹಾರ ಪದಾರ್ಥಗಳಿಗೆ ಮೇಲುಸ್ತುವಾರಿಯೇ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>