<p>ಮನುಷ್ಯನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪ್ರತಿ 7 ಮಂದಿ ಯುವಜನರಲ್ಲಿ ಒಬ್ಬರು ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿದ್ದಾರೆ. ಶೇ 80ರಷ್ಟು ಯುವಜನರು ಮಾನಸಿಕ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಮನೋವಿಜ್ಞಾನ ಹೇಳುತ್ತದೆ. </p><p>ಯುವಜನರಲ್ಲಿ ಖಿನ್ನತೆ ಹೆಚ್ಚಾಗಲು ಕಾರಣಗಳು, ಲಕ್ಷಣಗಳು ಹಾಗೂ ದೂರ ಮಾಡುವುದು ಹೇಗೆ ಎಂಬುದನ್ನು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ತಿಳಿಸಿದ್ದಾರೆ. </p>.ಆಳ–ಅಗಲ | ಖಿನ್ನತೆ ಸಾಕು, ಉತ್ಸಾಹ ಬೇಕು.ಮಕ್ಕಳಲ್ಲಿ ಖಿನ್ನತೆ!.<p><strong>ಖಿನ್ನತೆಗೆ ಕಾರಣಗಳೇನು?</strong></p><ul><li><p>ಸ್ಪರ್ಧಾತ್ಮಕ ಜಗತ್ತು ಕೂಡಾ ಯುವಜನರ ಒತ್ತಡಕ್ಕೆ ಕಾರಣವಾಗಿದೆ.</p></li><li><p>ಸಮಾಜದೊಂದಿಗೆ ತಮ್ಮನ್ನು ತಾವು ಹೋಲಿಕೆ ಮಾಡಿಕೊಳ್ಳುವುದು. </p></li><li><p>ಅತಿಯಾದ ನಿರೀಕ್ಷೆ ಹಾಗೂ ಗುರಿ ಸಾಧಿಸುವ ಒತ್ತಡ.</p></li><li><p>ಸಂಬಂಧಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು.</p></li><li><p>ಸೋಲು, ಪ್ರೇಮ ವೈಫಲ್ಯ ಹಾಗೂ ಉದ್ಯೋಗದ ಅಸ್ಥಿರತೆ.</p></li><li><p>ನಿದ್ರಾಹೀನತೆ, ವಿಶ್ರಾಂತಿಯ ಕೊರತೆ ಹಾಗೂ ಆತ್ಮಸಂತೃಪ್ತಿಯ ಕೊರತೆ.</p></li></ul><p>ರೋಗ ವರ್ಗೀಕರಣಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಸ್ಥೆ (ICD)ಯ ವರದಿಯ ಪ್ರಕಾರ, ಖಿನ್ನತೆ ಪತ್ತೆ ಮಾಡಲು ವ್ಯಕ್ತಿಯು ಕನಿಷ್ಠ 2 ವಾರಗಳ ಕಾಲ ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬೇಕು ಎಂದು ಹೇಳುತ್ತದೆ.</p><ul><li><p>ನಿರಂತರ ದುಃಖ ಅಥವಾ ಮಾನಸಿಕ ಖಿನ್ನತೆ.</p></li><li><p>ಆಸಕ್ತಿ ಕ್ಷೀಣಿಸುವುದು ಮತ್ತು ಉತ್ಸಾಹದ ಕೊರತೆ.</p></li></ul><p><strong>ಸಾಮಾನ್ಯ ಲಕ್ಷಣಗಳು:</strong></p><ul><li><p>ಆತ್ಮನಿಂದನೆ ಹಾಗೂ ಅತಿಯಾದ ಅಪರಾಧ ಭಾವನೆ ಮೂಡುವುದು.</p></li><li><p>ನಿದ್ರಾಹೀನತೆ, ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗುವುದು.</p></li><li><p>ಗಮನ ಒಂದೆಡೆ ಕೇಂದ್ರಿಕರಿಸಲು ಸಾಧ್ಯವಾಗದಿರುವುದು.</p></li><li><p>ಭವಿಷ್ಯದ ಕುರಿತು ನಿರಾಶೆ ವ್ಯಕ್ತ ಪಡಿಸುವುದು.</p></li><li><p>ಆತ್ಮಹತ್ಯೆ ಆಲೋಚನೆ ಮೂಡುವುದು. </p></li></ul><p><strong>ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳು:</strong></p><p>ಧ್ಯಾನ, ಯೋಗ ಮತ್ತು ವ್ಯಾಯಾಮ ಮಾಡುವುದು.</p><p>ನಿಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. (ಮಾತನಾಡುವುದು ಚಿಕಿತ್ಸೆಯ ಮೊದಲ ಹೆಜ್ಜೆ)</p><p>ಇತರರೊಂದಿಗೆ ಹೋಲಿಕೆಯ ಸ್ವಭಾವ ಬಿಟ್ಟು, ತಮ್ಮನ್ನು ತಾವು ಪ್ರೀತಿಸುವುದು.</p><p>ಸರಿಯಾದ ನಿದ್ರೆ, ಪೌಷ್ಟಿಕ ಆಹಾರ ಮತ್ತು ಸಮಯ ನಿರ್ವಹಣೆಗೆ ಆದ್ಯತೆ ನೀಡಿ.</p><p>ಖಿನ್ನತೆ ಹೀಗೆ ಮುಂದುವರಿದರೆ ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ಹೇಳುತ್ತಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮನುಷ್ಯನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪ್ರತಿ 7 ಮಂದಿ ಯುವಜನರಲ್ಲಿ ಒಬ್ಬರು ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿದ್ದಾರೆ. ಶೇ 80ರಷ್ಟು ಯುವಜನರು ಮಾನಸಿಕ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ಮನೋವಿಜ್ಞಾನ ಹೇಳುತ್ತದೆ. </p><p>ಯುವಜನರಲ್ಲಿ ಖಿನ್ನತೆ ಹೆಚ್ಚಾಗಲು ಕಾರಣಗಳು, ಲಕ್ಷಣಗಳು ಹಾಗೂ ದೂರ ಮಾಡುವುದು ಹೇಗೆ ಎಂಬುದನ್ನು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ತಿಳಿಸಿದ್ದಾರೆ. </p>.ಆಳ–ಅಗಲ | ಖಿನ್ನತೆ ಸಾಕು, ಉತ್ಸಾಹ ಬೇಕು.ಮಕ್ಕಳಲ್ಲಿ ಖಿನ್ನತೆ!.<p><strong>ಖಿನ್ನತೆಗೆ ಕಾರಣಗಳೇನು?</strong></p><ul><li><p>ಸ್ಪರ್ಧಾತ್ಮಕ ಜಗತ್ತು ಕೂಡಾ ಯುವಜನರ ಒತ್ತಡಕ್ಕೆ ಕಾರಣವಾಗಿದೆ.</p></li><li><p>ಸಮಾಜದೊಂದಿಗೆ ತಮ್ಮನ್ನು ತಾವು ಹೋಲಿಕೆ ಮಾಡಿಕೊಳ್ಳುವುದು. </p></li><li><p>ಅತಿಯಾದ ನಿರೀಕ್ಷೆ ಹಾಗೂ ಗುರಿ ಸಾಧಿಸುವ ಒತ್ತಡ.</p></li><li><p>ಸಂಬಂಧಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು.</p></li><li><p>ಸೋಲು, ಪ್ರೇಮ ವೈಫಲ್ಯ ಹಾಗೂ ಉದ್ಯೋಗದ ಅಸ್ಥಿರತೆ.</p></li><li><p>ನಿದ್ರಾಹೀನತೆ, ವಿಶ್ರಾಂತಿಯ ಕೊರತೆ ಹಾಗೂ ಆತ್ಮಸಂತೃಪ್ತಿಯ ಕೊರತೆ.</p></li></ul><p>ರೋಗ ವರ್ಗೀಕರಣಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಸ್ಥೆ (ICD)ಯ ವರದಿಯ ಪ್ರಕಾರ, ಖಿನ್ನತೆ ಪತ್ತೆ ಮಾಡಲು ವ್ಯಕ್ತಿಯು ಕನಿಷ್ಠ 2 ವಾರಗಳ ಕಾಲ ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬೇಕು ಎಂದು ಹೇಳುತ್ತದೆ.</p><ul><li><p>ನಿರಂತರ ದುಃಖ ಅಥವಾ ಮಾನಸಿಕ ಖಿನ್ನತೆ.</p></li><li><p>ಆಸಕ್ತಿ ಕ್ಷೀಣಿಸುವುದು ಮತ್ತು ಉತ್ಸಾಹದ ಕೊರತೆ.</p></li></ul><p><strong>ಸಾಮಾನ್ಯ ಲಕ್ಷಣಗಳು:</strong></p><ul><li><p>ಆತ್ಮನಿಂದನೆ ಹಾಗೂ ಅತಿಯಾದ ಅಪರಾಧ ಭಾವನೆ ಮೂಡುವುದು.</p></li><li><p>ನಿದ್ರಾಹೀನತೆ, ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗುವುದು.</p></li><li><p>ಗಮನ ಒಂದೆಡೆ ಕೇಂದ್ರಿಕರಿಸಲು ಸಾಧ್ಯವಾಗದಿರುವುದು.</p></li><li><p>ಭವಿಷ್ಯದ ಕುರಿತು ನಿರಾಶೆ ವ್ಯಕ್ತ ಪಡಿಸುವುದು.</p></li><li><p>ಆತ್ಮಹತ್ಯೆ ಆಲೋಚನೆ ಮೂಡುವುದು. </p></li></ul><p><strong>ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳು:</strong></p><p>ಧ್ಯಾನ, ಯೋಗ ಮತ್ತು ವ್ಯಾಯಾಮ ಮಾಡುವುದು.</p><p>ನಿಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. (ಮಾತನಾಡುವುದು ಚಿಕಿತ್ಸೆಯ ಮೊದಲ ಹೆಜ್ಜೆ)</p><p>ಇತರರೊಂದಿಗೆ ಹೋಲಿಕೆಯ ಸ್ವಭಾವ ಬಿಟ್ಟು, ತಮ್ಮನ್ನು ತಾವು ಪ್ರೀತಿಸುವುದು.</p><p>ಸರಿಯಾದ ನಿದ್ರೆ, ಪೌಷ್ಟಿಕ ಆಹಾರ ಮತ್ತು ಸಮಯ ನಿರ್ವಹಣೆಗೆ ಆದ್ಯತೆ ನೀಡಿ.</p><p>ಖಿನ್ನತೆ ಹೀಗೆ ಮುಂದುವರಿದರೆ ಮನೋವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ಮನೋವಿಜ್ಞಾನದ ಪ್ರಾಧ್ಯಾಪಕಿ ಕಾವ್ಯಾ ಅವರು ಹೇಳುತ್ತಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>