<p><strong>ಬೆಂಗಳೂರು:</strong> ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಅಗಲಿ ಇಂದಿಗೆ ನಾಲ್ಕು ವರ್ಷಗಳು. ಅಪ್ಪು ಅವರು ಕಾಣಿಸಿಕೊಂಡ ಡಾಕ್ಯೂಫಿಲಂ 'ಗಂಧದಗುಡಿ'ಗೆ ಮೂರು ವರ್ಷದ ಸಂಭ್ರಮ. ಈ ಚಿತ್ರವು ಪಿಆರ್ಕೆ ಪ್ರೊಡಕ್ಷನ್ಸ್ಅಡಿ ನಿರ್ಮಾಣಗೊಂಡಿದ್ದು, ಅಮೋಘವರ್ಷ ಅವರು ನಿರ್ದೇಶಿಸಿದ್ದಾರೆ. </p><p>ಈ ಕುರಿತು ಮಾತನಾಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ‘ಗಂಧದಗುಡಿ ಅಪ್ಪು ಅವರ ಕೊನೆಯ ಚಿತ್ರವಾಗಿದ್ದು, ಇದು ಅವರ ನೆಚ್ಚಿನ ಯೋಜನೆಗಳಲ್ಲೊಂದು. ಈ ಡಾಕ್ಯೂಫಿಲಂನಲ್ಲಿ ಅವರು ಕರ್ನಾಟಕದ ನೈಸರ್ಗಿಕ ಸೌಂದರ್ಯ, ಅಲ್ಲಿನ ಜನರ ಜೀವನಶೈಲಿಯನ್ನು ಪರಿಚಯಿಸುತ್ತಾರೆ. ಇದು ಕೇವಲ ಡಾಕ್ಯುಮೆಂಟರಿ ಮಾತ್ರವಲ್ಲ. ಪುನೀತ್ ಅವರಿಗೆ ಪ್ರಕೃತಿಯ ಹಾಗೂ ಕರುನಾಡಿನ ಮೇಲೆ ಅವರ ಅಭಿಮಾನವನ್ನು ತೋರಿಸುತ್ತದೆ. ನೈಸರ್ಗಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಸಿನಿಮಾ' ಎಂದಿದ್ದಾರೆ. </p><p>‘ಗಂಧದಗುಡಿ' ಚಿತ್ರಕ್ಕೆ 3 ವರ್ಷಗಳ ಸಂಭ್ರಮ ಕುರಿತು ಪಿಆರ್ಕೆ ಪ್ರೊಡಕ್ಷನ್ಸ್, ಅಪ್ಪು ಅವರ ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆ, ಸಂಸ್ಕೃತಿ ಮತ್ತು ಅದ್ಭುತ ಕಥೆಗಳನ್ನು ಆಚರಿಸುವ ಪಯಣ’ ಎಂದು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. </p>
<p><strong>ಬೆಂಗಳೂರು:</strong> ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಅಗಲಿ ಇಂದಿಗೆ ನಾಲ್ಕು ವರ್ಷಗಳು. ಅಪ್ಪು ಅವರು ಕಾಣಿಸಿಕೊಂಡ ಡಾಕ್ಯೂಫಿಲಂ 'ಗಂಧದಗುಡಿ'ಗೆ ಮೂರು ವರ್ಷದ ಸಂಭ್ರಮ. ಈ ಚಿತ್ರವು ಪಿಆರ್ಕೆ ಪ್ರೊಡಕ್ಷನ್ಸ್ಅಡಿ ನಿರ್ಮಾಣಗೊಂಡಿದ್ದು, ಅಮೋಘವರ್ಷ ಅವರು ನಿರ್ದೇಶಿಸಿದ್ದಾರೆ. </p><p>ಈ ಕುರಿತು ಮಾತನಾಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ‘ಗಂಧದಗುಡಿ ಅಪ್ಪು ಅವರ ಕೊನೆಯ ಚಿತ್ರವಾಗಿದ್ದು, ಇದು ಅವರ ನೆಚ್ಚಿನ ಯೋಜನೆಗಳಲ್ಲೊಂದು. ಈ ಡಾಕ್ಯೂಫಿಲಂನಲ್ಲಿ ಅವರು ಕರ್ನಾಟಕದ ನೈಸರ್ಗಿಕ ಸೌಂದರ್ಯ, ಅಲ್ಲಿನ ಜನರ ಜೀವನಶೈಲಿಯನ್ನು ಪರಿಚಯಿಸುತ್ತಾರೆ. ಇದು ಕೇವಲ ಡಾಕ್ಯುಮೆಂಟರಿ ಮಾತ್ರವಲ್ಲ. ಪುನೀತ್ ಅವರಿಗೆ ಪ್ರಕೃತಿಯ ಹಾಗೂ ಕರುನಾಡಿನ ಮೇಲೆ ಅವರ ಅಭಿಮಾನವನ್ನು ತೋರಿಸುತ್ತದೆ. ನೈಸರ್ಗಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಸಿನಿಮಾ' ಎಂದಿದ್ದಾರೆ. </p><p>‘ಗಂಧದಗುಡಿ' ಚಿತ್ರಕ್ಕೆ 3 ವರ್ಷಗಳ ಸಂಭ್ರಮ ಕುರಿತು ಪಿಆರ್ಕೆ ಪ್ರೊಡಕ್ಷನ್ಸ್, ಅಪ್ಪು ಅವರ ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆ, ಸಂಸ್ಕೃತಿ ಮತ್ತು ಅದ್ಭುತ ಕಥೆಗಳನ್ನು ಆಚರಿಸುವ ಪಯಣ’ ಎಂದು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. </p>